ಪಂಜಾಬ್ನ ಹೊಸ 'ಯುವರಾಜ್'
ಶುಬ್ಮನ್ ಗಿಲ್ ಅವರು ಯುವರಾಜ್ ಸಿಂಗ್ ಅವರ ಪಕ್ಕಾ ಅಭಿಮಾನಿ. ಬೆಂಗಳೂರಿನ ನ್ಯಾಷನಲ್ ಅಕಾಡೆಮಿ ಆಫ್ ಕ್ರಿಕೆಟ್ನಲ್ಲಿ ಅವರು ಯುವರಾಜ್ ಅವರಿಂದ ಸಾಕಷ್ಟು ಕ್ರಿಕೆಟ್ ಪಾಠ ಕಲಿತಿದಿದ್ದಾರೆ ಕೂಡ. ಅಂಡರ್19 ವಿಶ್ವಕಪ್ ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ ನಂತರ ಯುವರಾಜ್ ಸಿಂಗ್ ಅವರನ್ನು ನೆನೆಸಿಕೊಂಡ ಶುಬ್ಮನ್ ಅವರು 'ಯುವರಾಜ್ ಅವರು ಹೇಳಿಕೊಟ್ಟ ಪಾಠಗಳು ನನಗೆ ನೆರವಾದವು' ಎಂದರು.
1.80 ಕೋಟಿಗೆ ಸೇಲ್
ಅಂಡರ್19 ವರ್ಲ್ಡ್ಕಪ್ ಟೂರ್ನಿಯಲ್ಲಿ ಆಡುತ್ತಿರಬೇಕಾದರೆಯೇ ಇಲ್ಲಿ ಐಪಿಎಲ್ 2018ಕ್ಕೆ ಹರಾಜು ಪ್ರಕ್ರಿಯೆ ನಡೆಯುತಿತ್ತು. ಕೊಲ್ಕತ್ತಾ ನೈಟ್ರೈಡರ್ಸ್ ತಂಡ ಈ ಯುವ ಆಟಗಾರನನ್ನು 1.80 ಕೋಟಿ ನೀಡಿ ಖರೀದಿಸಿತು. ಆಗಿನ್ನೂ ಮೂರು ಅರ್ಧಶತಕ ಮಾತ್ರ ಗಳಿಸಿದ್ದ ಶುಬ್ಮನ್, ಕೊಲ್ಕತ್ತಾ ತಂಡ ಖರೀದಿಸಿದ ನಂತರ ಸೆಂಚುರಿ ಭಾರಿಸಿ ಆಯ್ಕೆದಾರರ ಆಯ್ಕೆ ಸರಿ ಎಂಬುದನ್ನು ಸಾಬೀತು ಮಾಡಿದರು.
ಬಿಸಿಸಿಐ ಪ್ರಶಸ್ತಿ ಕೂಡ ಗಳಿಸಿದ್ದಾರೆ
ಶುಬ್ಮನ್ ಗಿಲ್ ಇನ್ನೂ 16 ವರ್ಷದವರಾಗಿದ್ದಾಗಲೇ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ದ್ವಿಶತಕ ಭಾರಿಸಿದ್ದರು. ಅದೂ ಪಂಜಾಬ್ ಪರ ಅವರ ಮೊದಲ ಪಂದ್ಯವಾಗಿತ್ತು. ಅತ್ಯುತ್ತಮ ಆಟದಿಂದ ಆಗಲೇ ಬಿಸಿಸಿಐ ಗಮನ ಸೆಳೆದಿದ್ದ ಅವರು ಬಿಸಿಸಿಐ ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದರು.
ಯುವರಾಜ್ ಸಿಂಗ್ ಅವರ ಪಡಿಯಚ್ಚು
2000 ರಲ್ಲಿ ಭಾರತ ಮೊದಲ ಭಾರಿಗೆ ಅಂಡರ್19 ವಿಶ್ವಕಪ್ ಗೆದ್ದಾಗ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು. ಆ ನಂತರ ಅವರು ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಿ ಹೊರಹೊಮ್ಮಿದ್ದು ಆ ನಂತರ ವಿಶ್ವಕಪ್ನಲ್ಲೂ ಸರಣಿ ಶ್ರೇಷ್ಠರಾಗಿದ್ದು ಈಗ ಇತಿಹಾಸ. ಯುವರಾಜ್ ಅವರು ಅಭಿಮಾನಿ ಆಗಿರುವ ಶುಬ್ಮನ್ ಕೂಡಾ ಅಂಡರ್19ರಲ್ಲಿ ಸರಣಿ ಶ್ರೇಷ್ಠ ಆಗಿದ್ದಾರೆ. ಅವರ ಆಟವೂ ಕೂಡ ಯುವರಾಜ್ ಅವರ ಶೈಲಿಯನ್ನೇ ಹೋಲುತ್ತದೆ ಎನ್ನುತ್ತಾರೆ ಹಿರಿಯ ಕ್ರಿಕೆಟಿಗರು. ಪಂಜಾಬ್ ರಾಜ್ಯದಿಂದ ಮತ್ತೊಬ್ಬ ಯುವರಾಜ್ ಸಿಂಗ್ ಉದಯವಾಗಿದೆ ಎನ್ನುತ್ತಿದ್ದಾರೆ ಪಂಜಾಬ್ ಕ್ರಿಕೆಟ್ ಪ್ರಿಯರು.