|
ಭಾರತ vs ಅಫ್ಘಾನ್ ಟೆಸ್ಟ್ ಪಂದ್ಯ
2018ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಅಫ್ಘಾನಿಸ್ತಾನ ತಂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಏಕಮಾತ್ರ ಟೆಸ್ಟ್ ಪಂದ್ಯವಾಡಿತ್ತು. ಟೆಸ್ಟ್ ಕ್ರಿಕೆಟ್ಗೆ ಹೊಸ ತಂಡವಾಗಿದ್ದ ಅಫ್ಘಾನ್ ಆವತ್ತು ಭಾರತದ ವಿರುದ್ಧ ಸೌಹಾರ್ದ ಪಂದ್ಯ ಆಡಿ ಇನ್ನಿಂಗ್ಸ್ ಸಹಿತ 262 ರನ್ ಹೀನಾಯ ಸೋಲನುಭವಿಸಿತ್ತು. ಆದರೆ ವಿಜೇತರಿಗಾಗಿ ನಡೆಸುವ ಫೋಟೋ ಸೆಶನ್ ವೇಳೆ ನಾಯಕ ಅಜಿಂಕ್ಯ ರಹಾನೆ ಅಫ್ಘಾನ್ ತಂಡದವರನ್ನೂ ಜೊತೆಗೆ ಕರೆದು ಫೋಟೋಗೆ ಪೋಸ್ ನೀಡುವಂತೆ ಕೋರಿಕೊಂಡಿದ್ದರು. ಸೋತ ತಂಡವನ್ನು ಕೇವಲವಾಗಿ ಕಾಣದೆ ಗೆದ್ದ ತಂಡವೆಂಬಂತೆ ಗೌರವಿಸಿದ ಅಜಿಂಕ್ಯ ರಹಾನೆಯ ಈ ನಡೆ, ಕ್ರೀಡಾಸ್ಫೂರ್ತಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತ್ತು.
|
'ನಿಮ್ಮ ಕಾಲ ಬರುತ್ತದೆ'
ಆಸ್ಟ್ರೇಲಿಯಾ ಪ್ರವಾಸ ಸರಣಿಯ ಬಳಿಕವೂ ರಹಾನೆ ಇಂಥ ಉತ್ತಮ ನಡೆಗಾಗಿ ಗಮನ ಸೆಳೆದಿದ್ದಾರೆ. ಆಟಗಾರರ ಬಗ್ಗೆ ಮಾತನಾಡುವಾಗ, 'ಸರಣಿ ಗೆಲುವಿಗೆ ಪ್ರತಿಯೊಬ್ಬರೂ ಅವರದ್ದೇ ಕೊಡುಗೆ ನೀಡಿದ್ದಾರೆ. ಕುಲದೀಪ್ ಯಾದವ್ ಮತ್ತು ಕಾರ್ತಿಕ್ ತ್ಯಾಗಿ ಅವರನ್ನೂ ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ನಿಮ್ಮ ವರ್ತನೆ ನಿಜಕ್ಕೂ ಚೆನ್ನಾಗಿದೆ. ನಿಮ್ಮ ಸಮಯ ಬರುತ್ತದೆ. ಅಲ್ಲೀವರೆಗೂ ಪರಿಶ್ರಮ ಪಡುವುದನ್ನು ಮುಂದುವರೆಸಿ. ಕಾರ್ತಿಕ್ ತ್ಯಾಗಿ ನೀವೂ ಅದ್ಭುತ ಆಟಗಾರ,' ಎಂದು ರಹಾನೆ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ.
ಪ್ಲೇಯಿಂಗ್ XIನಲ್ಲಿ ಆಡಿರಲಿಲ್ಲ
ಕಾರ್ತಿಕ್ ತ್ಯಾಗಿ ಮತ್ತು ಕುಲದೀಪ್ ಯಾದವ್ ಇಬ್ಬರೂ ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಪಾಲ್ಗೊಂಡಿದ್ದರಾದರೂ ಇಬ್ಬರಿಗೂ ಭಾರತ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಆದರೆ ನೆಟ್ ಅಭ್ಯಾಸದ ವೇಳೆ ಮತ್ತು ಸಹಾಯಕರಾಗಿ ತಂಡದ ಜೊತೆಗಿದ್ದು ತಂಡಕ್ಕೆ ಬಲ ತುಂಬಿದ ಚೈನಾಮನ್ ಬೌಲರ್ ಕುಲದೀಪ್ ಮತ್ತು ಯುವ ಬೌಲರ್ ಕಾರ್ತಿಕ್ಗೆ ರಹಾನೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದ ಎಲ್ಲಾ ಆಟಗಾರರನ್ನೂ ಆತ್ಮೀಯವಾಗಿ ಕಾಣುವ, ಎಲ್ಲರಿಗೂ ಹುರುಪು-ಧೈರ್ಯ ತುಂಬುವ ಅಜಿಂಕ್ಯ ರಹಾನೆ ಅದ್ಭುತ ನಾಯಕ ಅಲ್ಲವೆ? (ಚಿತ್ರದಲ್ಲಿ ಕಾರ್ತಿಕ್ ತ್ಯಾಗಿ).