ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ
ಸಾಮಾಜಿಕ ಜಾಲ ತಾಣಗಳಲ್ಲಿ ಅನೇಕರು, ಯುವರಾಜ್ ಸಿಂಗ್ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು. ದಲಿತ ವಿರೋಧಿ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ, ಸಮುದಾಯದ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ರಜತ್ ಹೇಳಿದ್ದಾರೆ.
ರೋಹಿತ್ ಶರ್ಮ ವಿರುದ್ಧ ಕೂಡಾ ರಜತ್ ಕಿಡಿಕಾರಿದ್ದಾರೆ
ಈ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ರೋಹಿತ್ ಶರ್ಮ ವಿರುದ್ಧ ಕೂಡಾ ರಜತ್ ಕಿಡಿಕಾರಿದ್ದಾರೆ. ರೋಹಿತ್ ಅವರು ಈ ಘಟನೆ ನಡೆದಾಗ ಸುಮ್ಮನಿದ್ದರು. ಯಾವುದೇ ಪ್ರತಿರೋಧ ತೋರಲಿಲ್ಲ ಬದಲಿಗೆ ಸುಮ್ಮನೆ ನಗುತ್ತಿರುವುದು ಕಂಡು ಬಂದಿದೆ. ಸಮುದಾಯದ ಭಾವನೆಗೆ ಧಕ್ಕೆ ತಂದಿರುವ ಯುವರಾಜ್ ಬಂಧಿಸಬೇಕು ಹಾಗೂ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಗಿದೆ.
ಹಾನ್ಸಿ ಎಸ್ಪಿ ಲೋಕೇಂದ್ರ ಸಿಂಗ್ ಪ್ರತಿಕ್ರಿಯೆ
ರಜತ್ ಕಾಲ್ಸನ್ ಎಂಬ ವಕೀಲರು ಹಿಸಾರ್ ನ ಹಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ವಿರುದ್ಧ ಜಾತಿ ನಿಂದನೆ ಆರೋಪ ಮಾಡಲಾಗಿದೆ. ಈ ಪ್ರಕರಣವನ್ನು ಡಿಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಲಿದ್ದಾರೆ, ಆರೋಪಕ್ಕೆ ಸೂಕ್ತ ಸಾಕ್ಷಿ ಒದಗಿಸುವುದಾಗಿ ರಜತ್ ಹೇಳಿದ್ದಾರೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಾನ್ಸಿ ಎಸ್ಪಿ ಲೋಕೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಜಾತಿ ಸೂಚಕ ಪದ ಬಳಕೆ
ಇನ್ಸ್ಟಗ್ರಾಂ ಲೈವ್ ಸಂವಾದಲ್ಲಿ ರೋಹಿತ್ ಶರ್ಮ, ಯುವರಾಜ್ ಸಿಂಗ್ ಜೊತೆಗೆ ಯುಜುವೇಂದ್ರ ಚಾಹಲ್ ಅಲ್ಲದೆ ಕುಲದೀಪ್ ಯಾದವ್ ಕೂಡಾ ಇದ್ದರು. ಉತ್ತರ ಭಾರತದ ಕಡೆ ಬಳಸುವ ಜಾತಿ ಸೂಚಕ ಪದವನ್ನು ಯುವರಾಜ್ ಸಿಂಗ್ ಬಳಸಿದ್ದರು. ಈ ಬಗ್ಗೆ ಟ್ವಿಟ್ಟರಲ್ಲಿ ಟ್ರೆಂಡ್ ಆಗಿದ್ದರಿಂದ ವಿಷಯ ಬೆಳಕಿಗೆ ಬಂದಿದ್ದು, ಸಂಘಟನೆಯವರಿಗೂ ತಿಳಿದು ಬಂದಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಕ್ಷಮೆಯಾಚಿಸಿದರೆ ಸಾಲದು, ಇಂಥ ಹೇಳಿಕೆ ನೀಡಿದ್ದಕ್ಕೆ ತಕ್ಕ ಶಾಸ್ತಿಯಾಗಬೇಕು ಎಂದು ಸಂಘತನೆ ಗುಡುಗಿದೆ.