ಜಿಂಬಾಬ್ವೆ ಕ್ರಿಕೆಟ್ ತಂಡವು ತನ್ನ ಮುಖ್ಯ ತರಬೇತುದಾರ ಲಾಲ್ಚಂದ್ ರಜಪೂತ್ ಇಲ್ಲದೆ ಮುಂಬರುವ ಸರಣಿಗಾಗಿ ಪಾಕಿಸ್ತಾನಕ್ಕೆ ಆಗಮಿಸಿದೆ. ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಹರಾರೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕೋಚ್ ರಜಪೂತ್ ಪಾಕಿಸ್ತಾನಕ್ಕೆ ಭೇಟಿ ನೀಡುವುದಕ್ಕೆ ವಿನಾಯಿತಿ ನೀಡಬೇಕೆಂದು ಕೋರಿತ್ತು. ಭಾರತ ಸರ್ಕಾರವು ತನ್ನ ನಾಗರಿಕರಿಗಾಗಿ ಹೊರಡಿಸಿದ ಪ್ರಯಾಣ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಈ ವಿನಂತಿಯನ್ನು ಮಾಡಲಾಗಿತ್ತು.
ಆದರೆ ರಜಪೂತ್ ಪಾಕಿಸ್ತಾನಕ್ಕೆ ತೆರಳುವುದನ್ನು ಭಾರತೀಯ ರಾಯಭಾರ ಕಚೇರಿಯು ನಿರಾಕರಿಸಿದರ ಪರಿಣಾಮ ಜಿಂಬಾಬ್ವೆ ಕ್ರಿಕೆಟ್ ತಂಡ ತಮ್ಮ ಮುಖ್ಯ ತರಬೇತುದಾರ ಲಾಲ್ಚಂದ್ ರಜಪೂತ್ ಇಲ್ಲದೆ ಪಾಕಿಸ್ತಾನಕ್ಕೆ ತೆರಳಿದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಿಇಒ ''ಅಜ್ಞಾನಿ'' ಎಂದು ಕರೆದ ಬಿಸಿಸಿಐ
ರಜಪೂತ್ ಅನುಪಸ್ಥಿತಿಯಲ್ಲಿ ಬೌಲಿಂಗ್ ತರಬೇತುದಾರ ಡೌಗ್ಲಾಸ್ ಹೊಂಡೊ ಪ್ರವಾಸದ ಸಮಯದಲ್ಲಿ ತಂಡದ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. "@ZimCricketv ಮುಖ್ಯ ಕೋಚ್ @Lalchandrajput7 ಅವರು @TheRealPCB ಪ್ರವಾಸವನ್ನು ತಪ್ಪಿಸಿಕೊಳ್ಳಲಿದ್ದಾರೆ. ಹರಾರೆಯಲ್ಲಿರುವ ಭಾರತದ ರಾಯಭಾರ ಕಚೇರಿ @ZimCricketv ಪತ್ರ ಬರೆದ ನಂತರ ಅವರನ್ನು ಪಾಕಿಸ್ತಾನಕ್ಕೆ ಭೇಟಿ ನೀಡುವುದರಿಂದ ವಿನಾಯಿತಿ ನೀಡುವಂತೆ ಕೋರಿದೆ. ಹರಾರೆಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ರಜಪೂತ್ಗೆ ವೀಸಾ ನೀಡಿತ್ತು "ಎಂದು ಮಂಡಳಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಂಬಾಬ್ವೆ ಮೂರು ಏಕದಿನ ಪಂದ್ಯಗಳು ಮತ್ತುಬ ಅನೇಕ ಟಿ -20 ಪಂದ್ಯಗಳಿಗೆ ಪಾಕಿಸ್ತಾನವನ್ನು ಎದುರಿಸಲಿದೆ. ಅಕ್ಟೋಬರ್ 30 ರಿಂದ ನ ಮೂರು ಏಕದಿನ ಸರಣಿಯು ನಡೆಯಲಿದ್ದು, ನವೆಂಬರ್ 3 ರಂದು ಅಂತಿಮ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. ಎಲ್ಲಾ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಆಡಲಾಗುವುದು.
ಟಿ 20 ಐ ಸರಣಿಯು ನವೆಂಬರ್ 7 ರಂದು ಮೂರು ದಿನಗಳ ವಿರಾಮದ ನಂತರ ನಡೆಯಲಿದ್ದು, ಅಂತಿಮ ಪಂದ್ಯದೊಂದಿಗೆ 10 ರಂದು ಮುಕ್ತಾಯಗೊಳ್ಳಲಿದೆ. ಎಲ್ಲಾ ಪಂದ್ಯಗಳನ್ನು ಲಾಹೋರ್ನಲ್ಲಿ ಆಡಲು ನಿರ್ಧರಿಸಲಾಗಿದೆ.