ವಿದೇಶಿ ಆಟಗಾರ ಅಲಭ್ಯ
'ವಿದೇಶಿ ಆಟಗಾರರೊಬ್ಬರು ಗಾಯಗೊಂಡಿರುವುದು ನಿಜ. ಅವರು ಈ ಋತುವಿನ ಇತರ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆದರೆ ಅವರ ಹೆಸರನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ, ಏಕೆಂದರೆ ಅದು ಎದುರಾಳಿ ತಂಡಕ್ಕೆ ಲಾಭವಾಗಲಿದೆ. ಬಾರ್ತಲೋಮ್ಯೊ ಅವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅವರು ತಂಡಕ್ಕೆ ಮರಳಿದ್ದಾರೆ. ಭಾರತದ ಕೆಲವು ಆಟಗಾರರೂ ಗಾಯದ ಸಮಸ್ಯೆ ಎದುರಿಸುತ್ತಾರೆ, ಇದು ಆಟದ ಒಂದು ಭಾಗವಾಗಿದೆ' ಎಂದು ಷೆಟೋರಿ ಹೇಳಿದ್ದಾರೆ.
ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ
ಋತುವಿನ ಮೊದಲ ಪಂದ್ಯದಲ್ಲಿ ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ಕೇರಳ ಬ್ಲಾಸ್ಟರ್ಸ್ ತಂಡ ಇದುವರೆಗೂ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ಕೋಚ್ ಡೇವಿಡ್ ಜೆಮ್ಸ್ ಅವರ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರುತ್ತಿಲ್ಲ. ಮನೆಯಂಗಣದಲ್ಲಿ ಗೋವಾ ಹಾಗೂ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಕೇರಳ ಸೋಲನುಭವಿಸಿ ಈಗ ಗುವಾಹಟಿಗೆ ಆಗಮಿಸಿದೆ. ಇತರ ಎಲ್ಲ ಋತುಗಳಲ್ಲಿರುವಂತೆ ಈ ಬಾರಿಯೂ ಕೇರಳ ಗೋಲು ಗಳಿಸಲು ಹೆಣಗಾಡುತ್ತಿದೆ. ಅದೇ ರೀತಿ ಗೋಲು ಗಳಿಸುವ ಸಂದ‘ರ್ವನ್ನೂ ತಂಡದ ಆಟಗಾರರು ನಿರ್ಮಿಸಿಲ್ಲ. ಇದರಿಂದಾಗಿ ಜೇಮ್ಸ್ ಅವರು ನಿರಾಸೆಗೊಳಗಾಗಿರುವುದು ಸಹಜ.
ಉತ್ತಮವಾಗಿಯೇ ಆಡಿದೆ
'ಗೋವಾ ವಿರುದ್ಧದ ಒಂದು ಪಂದ್ಯವನ್ನು ಹೊರತುಪಡಿಸಿದರೆ ನಮ್ಮ ತಂಡದ ಪ್ರದರ್ಶನ ಉತ್ತಮವಾಗಿಯೇ ಇತ್ತು. ಕೆಲವು ಸಂದರ್ಭರ್ಗಳಲ್ಲಿ ನಿಮಗಿಂತ ಇತರ ತಂಡ ಉತ್ತಮ ಎಂಬುದನ್ನು ಒಪ್ಪಿಕೊಳ್ಳಬೇಕು. ಬೆಂಗಳೂರು ವಿರುದ್ಧದ ಪಂದ್ಯವೂ ಸೇರಿದಂತೆ ಇತರ ಆರು ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮವಾಗಿಯೇ ಆಡಿದೆ, ನಾವು ಪ್ರತಿಬಾರಿಯೂ ಜಯದ ಗುರಿ ಇಟ್ಟುಕೊಂಡೇ ಆಡುತ್ತೇವೆ, ಫೈನಲ್ ತಲುಪಿ ಐಎಸ್ಎಲ್ ಗೆಲ್ಲುವುದು ನಮ್ಮ ಗುರಿಯಾಗಿದೆ, ನಾಳೆಯೂ ಮೂರು ಅಂಕ ಗಳಿಸಲಿದ್ದೇವೆ' ಎಂದು ಜೇಮ್ಸ್ ಹೇಳಿದರು. ಅನಾಸ್ ಎಡಾತೋಡಿಕಾ ಈ ಋತುವಿನಲ್ಲಿ ಕೊಂಡ ಆಟದಲ್ಲಿ ಎಡವಿದ್ದಾರೆ.
ತೃಪ್ತಿದಾಯಕವಾಗಿರಲಿಲ್ಲ
ಗೋವಾ ವಿರುದ್ಧದ ಪಂದ್ಯದಲ್ಲಿ ಆಡಿದರೂ ಅವರು ಪ್ರದರ್ಶನ ತೃಪ್ತಿದಾಯಕವಾಗಿರಲಿಲ್ಲ. ಒಗ್ಬಚೆ ಹಾಗೂ ಫೆಡರಿಕೊ ಗಲ್ಲೆಗೊ ಅವರ ಮುಂದೆ ಡಿಫೆನ್ಸ್ ವಿಭಾಗದಲ್ಲಿ ಎಲ್ಲ ಭಾರತೀಯ ಆಟಗಾರರನ್ನು ಆಡಿಸುವ ಸಾಧ್ಯತೆಗೆ ಜೇಮ್ಸ್ ಮನಮಾಡಲಿದ್ದಾರೆ. ಸೆಮಿನ್ಲೆನ್ ಡೊಂಗಲ್ ಹಾಗೂ ಹಲಿಚರಣ್ ನಾರ್ಜರಿ ಅವರು ಒಂದು ರೀತಿ ಮನೆಯಂಗಣಕ್ಕೆ ಮರಳಿದಂತೆ. ಏಕೆಂದರೆ ಈ ಇಬ್ಬರೂ ಆಟಗಾರರು ಕಳೆದ ಋತುವಿನಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಪರ ಆಡಿದ್ದರು.