ಕೇರಳ ಆಕರ್ಷಕ ಗೋಲ್
ಮೊಹಮ್ಮದ್ ರಾಕಿಪ್ ಗೋಲ್ ಬಾಕ್ಸ್ ಬಲ ಅಂಚಿನಿಂದ ಪೆನಾಲ್ಟಿ ವಲಯಕ್ಕೆ ಪಾಸ್ ನೀಡಿದರು. ಆದರೆ ಕೇನ್ ಲೂಯಿಸ್ ಚೆಂಡನ್ನು ನಿಯಂತ್ರಿಸುವಲ್ಲಿ ವಿಲರಾಗಿ ಚೆಂಡು ಕೈಗೆ ತಗಲಿತು. ರೆರಿ ಕ್ಷಣಮಾತ್ರದಲ್ಲೇ ಪೆನಾಲ್ಟಿ ಶೂಟ್ಗೆ ಅವಕಾಶ ಕಲ್ಪಿಸಿದರು. ಸ್ಲಾವಿಸಾ ಸ್ಟೊಜಾನೊವಿಕ್ ಯಾವುದೇ ಪ್ರಮಾದ ಮಾಡದೆ ಗುರ್ಪ್ರೀತ್ ಸಿಂಗ್ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು.
ಕೇರಳಕ್ಕೆ ಅನಿರೀಕ್ಷಿತ ಮುನ್ನಡೆ
ಪ್ರಥಮಾರ್ಧ ಕೊನೆಗೊಳ್ಳಲು ಐದು ನಿಮಿಷ ಬಾಕಿ ಇರುವಂತೆ ಕೇರಳಕ್ಕೆ ಎರಡನೇ ಯಶಸ್ಸು. 40ನೇ ನಿಮಿಷದಲ್ಲಿ ಸಹಾಲ್ ಅಬ್ದುಲ್ ನೀಡಿದ ಪಾಸ್ ಸೈಮಿನ್ಲೆನ್ ಡೌಂಗಲ್ ಅವರ ನಿಯಂತ್ರಣದಲ್ಲಿತ್ತು, ಬೆಂಗಳೂರಿನ ಡಿಫೆಂಡರ್ಗಳನ್ನು ವಂಚಿಸಿ ಅವರು ಪೆನಾಲ್ಟಿ ವಲಯಕ್ಕೆ ಚೆಂಡನ್ನು ಪಾಸ್ ಮಾಡುವ ತವಕದಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಪುನಃ ಚೆಂಡನ್ನು ಹಿನ್ನಡೆಯಾಗಿ ಕರೇಜ್ ಪೆಕಸನ್ ಕಡೆಗೆ ನೀಡಿದರು. ವೇಗದಲ್ಲಿ ಬಂದ ಪೆಕುಸನ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಕೇರಳಕ್ಕೆ 2-0 ಮುನ್ನಡೆ.
ಸೋಲುಣಿಸಬೇಕೆಂಬ ಕೆಚ್ಚು
ಬೆಂಗಳೂರಿಗೆ ಇದು ಪ್ರಮುಖ ಪಂದ್ಯ, ಕೇರಳಕ್ಕೆ ಫಲಿತಾಂಶದಿಂದ ಏನೂ ಪ್ರಯೋಜನ ಆಗಿದ್ದರೂ ಬೆಂಗಳೂರಿಗೆ ಮನೆಯಂಗಣದಲ್ಲಿ ಸೋಲುಣಿಸಬೇಕೆಂಬ ಕೆಚ್ಚು. ಇಂಡಿಯನ್ ಸೂಪರ್ ಲೀಗ್ನ 70ನೇ ಪಂದ್ಯ ಸಾಕಷ್ಟು ನಿರೀಕ್ಷೆಯಿಂದ ಕೂಡಿತ್ತು. ಮುಂಬೈ ವಿರುದ್ಧ ಸೋಲನುಭವಿಸಿದ ನಂತರ ಬೆಂಗಳೂರು ತಂಡ ನಾರ್ತ್ ಈಸ್ಟ್ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಕೇರಳಕ್ಕೆ ಇಲ್ಲಿ ಗೆದ್ದರೂ ಯಾವುದೇ ಪ್ರಯೋಜನವಿಲ್ಲ.
ಬೆಂಗಳೂರು ಬ್ಯಾಕ್ ಲೈನ್ ಅದ್ಭುತವಾಗಿದೆ
ಆತಿಥೇಯ ಬೆಂಗಳೂರು ತಂಡದ ಬ್ಯಾಕ್ ಲೇನ್ ಅದ್ಭುತವಾಗಿದೆ, ಇದುವರೆಗೂ ತಂಡ ನೀಡಿದ್ದು, ಬರೇ ಹತ್ತು ಗೋಲುಗಳು. ಬೆಂಗಳೂರು ಇಲ್ಲಿ ಗೆದ್ದರೆ ನಾಲ್ಕು ಪಂದ್ಯ ಬಾಕಿ ಇರುವಂತೆಯೇ ಸೆಮಿೈನಲ್ ಪ್ರವೇಶಿಸಲಿದೆ. ಕೇರಳ ತಂಡ ಸತತ ಹದಿಮೂರು ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿತ್ತು. ಆದರೆ ಬೆಂಗಳೂರು ವಿರುದ್ಧದ ಪಂದ್ಯ ಎಂದಾಗ ಕೇರಳದ ಆಟದ ರೀತಿಯೇ ಬೇರೆ ಲೀಗ್ನಲ್ಲಿ ಹಂತ ಯಾವುದೇ ಇರಲಿ, ಆದರೆ ಬೆಂಗಳೂರು ವಿರುದ್ಧ ಗೆಲ್ಲಬೇಕೆಂಬುದು ಕೇರಳದ ಗುರಿ. ಕೇರಳ ಈಗಾಗಲೇ 23 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ.