ಜೇಮ್ಶೆಡ್ಪುರ ಕೋಚ್ ಅಂಟೋನಿಯೋ ಇರಿಯೊಂಡೋ
38 ವರ್ಷದ ಅನುಭವಿ ಹೊಂದಿರುವ ಆಟಗಾರ ಪಿಟಿ, ಟಾಟಾ ಪಡೆಯ ಮಿಡ್ ಫೀಲ್ಡ್ ವಿಭಾಗದಲ್ಲಿ ಆಧಾರವೆನಿಸಿದ್ದಾರೆ. ಕ್ಯಾಸ್ಟಲ್ ಈಗಾಗಲೇ ಮೊದಲ ಪಂದ್ಯದಲ್ಲಿ ಜಯದ ಗೋಲ್ ಗಳಿಸಿದ್ದು, ಮತ್ತೆ ತಂಡಕ್ಕೆ ನೆರವಾಗುವ ಹುಮ್ಮಸ್ಸಿನಲ್ಲಿದ್ದಾರೆ.
''ತಂಡ ಇನ್ನೂ ಹೊಸ ರೂಪು ಪಡೆಯುವ ಹಾಗೂ ಪರಿಸ್ಥಿತಿಗೆ ಹೊಂದಿಕೊಲ್ಲುವುದರಲ್ಲಿದೆ, ನಮ್ಮ ಶೈಲಿಯ ಆಟಕ್ಕೆ ನಾವು ಹೊಂದಿಕೊಳ್ಳಬೇಕಾಗಿದೆ. ಒಡಿಶಾ ವಿರುದ್ಧ ನಮ್ಮ ಆಟಗಾರರು ಉತ್ತಮ ರೀತಿಯಲ್ಲಿ ಹೋರಾಟ ನೀಡಿದ್ದಾರೆ. ಆ ಬಗ್ಗೆ ನಮಗೆ ಖುಷಿ ಇದೆ. ಫಲಿತಾಂಶವೂ ಖುಷಿ ಕೊಟ್ಟಿದೆ. ಇದಕ್ಕಿಂತಲೂ ಉತ್ತಮವಾಗಿ ಆಡುವುದು ನಮ್ಮ ಗುರಿ, ಈ ಹಂತದಲ್ಲಿ ನಾವು ಇನ್ನೂ ಸುಧಾರಣೆ ಕಂಡುಕೊಳ್ಳಬೇಕಿದೆ. ನಾವು ಚೆಂಡನ್ನು ನಿಯಂತ್ರಿಸುವುದರ ಜತೆಯಲ್ಲಿ ಪಂದ್ಯವನ್ನೂ ನಿಯಂತ್ರಿಸಬೇಕಾಗಿದೆ.,'' ಎಂದು ಇರಿಯಂದೋ ಹೇಳಿದ್ದಾರೆ.
ವಿನೀತ್ ಗಾಯದ ಕಾರಣ ನಾಳೆಯ ಪಂದ್ಯ ಆಡುತ್ತಿಲ್ಲ
ಜೈರು ಅಮಾನತುಗೊಂಡಿದ್ದು, ಸಿ ಕೆ ವಿನೀತ್ ಗಾಯದ ಕಾರಣ ನಾಳೆಯ ಪಂದ್ಯದಲ್ಲಿ ಆಡುತ್ತಿಲ್ಲ. ಎದುರಾಳಿ ತಂಡ ಹೈದರಾಬಾದ್ ಎಟಿಕೆ ವಿರುದ್ಧ ಬೃಹತ್ ಅಂತರದಲ್ಲಿ ಸೋಲನುಭವಿಸಿ, ಜೇಮ್ಶೆಡ್ಪುರಕ್ಕೆ ಆಗಮಿಸಿದೆ, ಕೋಲ್ಕತಾದಲ್ಲಿ ಹೈದರಾಬಾದ್ ಉತ್ತಮ ರೀತಿಯಲ್ಲಿ ಆಡಿಲ್ಲ, ತಂಡದ ಪ್ರಮುಖ ಆಟಗಾರರಾದ, ಮಾರ್ಸಿಲಿನೊ, ಮಾರ್ಕೊ ಸ್ಟ್ಯಾಂಕೋವಿಕ್ ಮತ್ತು ಬಾರ್ನೆಸ್ ಉತ್ತಮವಾಗಿ ಆಡುವಲ್ಲಿ ವಿಫಲರಾಗಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಮಿಡ್ ಫೀಲ್ಡರ್ ಆದಿಲ್ ಖಾನ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡದಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣ.
ಎಟಿಕೆ ವಿರುದ್ಧ ಹೈದರಾಬಾದಿಗೆ ಹೀನಾಯ ಸೋಲು
''ಮೊದಲ ಪಂದ್ಯದ ನಂತರ ನಾವು ಒಂದಿಷ್ಟು ಅಭ್ಯಾಸ ಮಾಡಿದ್ದೇವೆ. 5-0 ಅಂತರದಲ್ಲಿ ಸೋತಿರುವುದು ಆಟಗಾರರಿಗೆ ಉತ್ತಮವಾದುದಲ್ಲ.ಇದು ಆಟಗಾರರ ಮನಸ್ಸಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಆದರೆ ನಾವು ಸೋಲಿನಿಂದ ಚೇತರಿಸಿಕೊಂಡಿದ್ದೇವೆ, ನಮ್ಮ ತಂಡ ಈಗ ಸಜ್ಜಾಗಿದೆ,'' ಎಂದು ಬ್ರೌನ್ ಹೇಳಿದ್ದಾರೆ.
ಬೊಬೊ, ಗಿಲ್ಲೆಸ್ ಬಾರ್ನೆಸ್, ರಫೆಲ್ ಗೊಮೆಜ್, ಮತ್ತು ಆಶೀಶ್ ರಾಯ್ ಗಾಯಗೊಂಡಿರುವುದು ತಂಡದ ಬಾಲವನ್ನು ಕುಗ್ಗಿಸಿರುವುದು ಸಹಜ. ಜತೆಯಲ್ಲಿ ಸ್ಪೇನ್ ಮೂಲದ ಮಿಡ್ ಫೀಲ್ಡರ್ ನೆಸ್ಟರ್ ಗೋರ್ಡಿಲ್ಲೋ ಇನ್ನೂ ಅಮಾನತಿನಲ್ಲಿದ್ದು, ಇದರಿಂದ ಬ್ರೌನ್ ಅವರ ಆಯ್ಕೆ ಸೀಮಿತವಾಗಿದೆ.
ಹೈದರಾಬಾದಿಗೆ ಗಾಯದ ಸಮಸ್ಯೆ
''ನಮ್ಮಲ್ಲಿ ಬಹಳ ಸಂಖ್ಯೆಯಲ್ಲಿ ಗುಣಮಟ್ಟದ ಆಟಗಾರರಿಲ್ಲ, ನಮ್ಮಲ್ಲಿ ಬೊಬೊ ಉತ್ತಮವಾಗಿ ಆಡಬಲ್ಲರು, ಆದರೆ ಗಾಯದ ಸಮಸ್ಯೆ, ನೆಸ್ಟರ್ ಅಮಾನತುಗೊಂಡಿದ್ದಾರೆ. ಗಾಯಗೊಂಡಿರಿರುವ ಆಟಗಾರರ ಪಟ್ಟಿ ದೊಡ್ಡದಿದೆ. ಜೇಮ್ಶೆಡ್ಪುರದ ಹೋರಾಟಕ್ಕೆ ಪ್ರತಿಯಾಗಿ ಸವಾಲೊಡ್ಡಬಲ್ಲ ಆಟಗಾರರು ನಮ್ಮಲ್ಲಿದ್ದಾರೆ.'' ಎಂದು ಅವರು ಹೇಳಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹೈದರಾಬಾದ್ ವಿರುದ್ಧ ಜೇಮ್ಶೆಡ್ಪುರ ಜಯ ಗಳಿಸುವ ಗುರಿ ಹೊಂದಿದೆ , ಇನ್ನೊಂದೆಡೆ ಉತ್ತಮ ಹೋರಾಟ ನೀಡಿ ಜಯದ ಖಾತೆ ತೆರೆಯುವ ಹಂಬಲದಲ್ಲಿದೆ ಹೈದರಾಬಾದ್.