ಗೋವಾ, ಜ.3: ವರ್ಷಾಂತ್ಯದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಎಟಿಕೆ ಮೋಹನ್ ಬಗಾನ್ ತಂಡ ಶನಿವಾರ ಅಗ್ರ ಸ್ಥಾನದಿಂದ ಕೆಳಗಿಳಿದಿದ್ದು ಫಟಾರ್ಡೋದ ಜವಹರಲಾಲ್ ನೆಹರು ಮೈದಾನದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ನಡೆಯಲಿರುವ ಸೂಪರ್ ಲೀಗ್ ಪಂದ್ಯದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲು ಕಸರತ್ತು ನಡೆಸಲಿದೆ.
ಬೆನ್ನಟ್ಟುವಿಕೆಯಲ್ಲಿ ಮುಂದಿರುವ ಮರಿನರ್ಸ್ ಈ ಸರಣಿಯಲ್ಲಿ ಮೊದಲ ಸ್ಥಾನಕ್ಕೆ ಪೈಪೋಟಿ ನೀಡಲು ಬೇಕಾದ ಭೂಮಿಕೆಯನ್ನು ತಯಾರು ಮಾಡಿಕೊಂಡಿದ್ದು, ಮುಂಬೈ ಸಿಟಿಗೆ ಈಗ ನಿಜವಾದ ಸವಲೊಡ್ಡಿದೆ. ಆದರೂ ಒಂದು ವೇಳೆ ಅವರ ಕೋಚ್ ಆಂಟೋನಿಯೋ ಲೋಪೇಜ್ ಹಾಬಸ್ ಇಷ್ಟಪಟ್ಟರೆ, ನಿಸ್ಸಂದೇಹವಾಗಿ ಅವನ ಹುಡುಗರು ಹೆಚ್ಚು ಗೋಲು ಗಳಿಸಬಲ್ಲರು.
ಕೊನೆ ಘಟ್ಟದಲ್ಲಿ ಎಫ್ಸಿ ಗೋವಾಗೆ ಶರಣಾದ ಹೈದರಾಬಾದ್ ಎಫ್ಸಿ
ಎಟಿಕೆ ಎಂ ಬಿ ಯ ಆಟಗಾರರು ನಿರ್ಧಿಷ್ಟ ಗುರಿಯೆಡೆಗೆ ಗೋಲು ಹೊಡೆಯಲು ವಿಫಲರಾಗಿದ್ದು, ಅವರ ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ ಮೂರು ಗೋಲುಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರೆ. ಇದರಿಂದಾಗಿ ಅವರು ಕಳೆದ ಪಂದ್ಯದಲ್ಲಿ ಚೆನೈ ಎ ಫ್ ಸಿ ವಿರುದ್ಧ ಡ್ರಾ ಮಾಡಿಕೊಳ್ಳಲು ಸಾಧ್ಯವಾಯಿತು.
ಆದರೂ ಹಬ್ಬಾಸ್ ಇದರಿಂದ ಬೇಸರಗೊಂಡಿಲ್ಲ. ನನಗೆ ನಿಜವಾಗಲೂ ಗೋಲು ಗಳಿಸಲು ಸಾಧ್ಯವಾಗದಿದ್ದರೆ ಬೇಸರವಾಗುತ್ತಿತ್ತು. ಫುಟ್ಬಾಲ್ ನಲ್ಲಿ, ಕಳೆದ ಮೂರು ಪಂದ್ಯಗಳಲ್ಲಿ ಮಾಡಲಾಗದಿದ್ದನ್ನು ಒಂದು ಪಂದ್ಯದಲ್ಲಿ ಮಾಡಬಹುದು. ಈ ೯೦ ನಿಮಿಷಗಳಲ್ಲಿ ಎಲ್ಲ ಸಂದರ್ಭಗಳು ಭಿನ್ನವಾಗಿರುತ್ತವೆ, ಎಂದರು.
ಇಡೀ ಪಂದ್ಯದಲ್ಲಿ ಮುನ್ನಡೆ ಆಟಗಾರನಾಗಿದ್ದ ಎಟಿಕೆಎಂಬಿ ತಂಡದ ರಾಯ್ ಕೃಷ್ಣ ಪಂದ್ಯದ ಐದು ಗೆಲುವಿನಲ್ಲಿ ನಾಲ್ಕು ಗೆಲುವಿನ ರೂವಾರಿಯಾಗಿದ್ದು ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲಾ ಪಾರು ಮಾಡಿದ್ದಾನೆ. ಆದರೆ ಗೋಲು ಗಳಿಸುವುದು ಸಾಂಖಿಕ ಪ್ರಯತ್ನವೇ ಹೊರೆತು ಏಕಾಂಗಿ ಹೋರಾಟವಲ್ಲ. ಈ ಹಿನ್ನೆಲೆಯಲ್ಲಿ ಕೇವಲ ರಾಯ್ ಕೃಷ್ಣನ ಆಟವನ್ನಲ್ಲ ಇಡೀ ತಂಡದ ಸಾಮರ್ಥ್ಯವನ್ನು ವಿಸ್ಲೇಷಿಸುವುದಾಗಿ ತಿಳಿಸಿದರು.
ಐಎಸ್ಎಲ್: ಚೆನ್ನೈ ವಿರುದ್ಧ ಡ್ರಾ ಕಂಡರೂ ಅಗ್ರಸ್ಥಾನ ಪಡೆದ ಮೋಹನ್ ಬಗಾನ್
ಈ ನಡುವೆ ನಾರ್ಥ್ ಈಸ್ಟ್ ಯುನೈಟೆಡ್ ತನ್ನದೇ ಸಮಸ್ಯೆಗಳನ್ನು ಹೊಂದಿದ್ದು ಈ ಋತುವಿನ ಮೊದಲ ಹಂತದ ನಂತರ ನಡೆದ ಪಂದ್ಯದಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡದೆ ನಾಲ್ಕು ಪಂದ್ಯಗಳಲ್ಲೂ ಸೋಲನ್ನು ಅನುಭವಿಸಬೇಕಾಗಿದೆ. ಕೋಚ್ ಗೆರಾಲ್ಡ್ ನಸ್ ಗೆ ಮುಂದಿನ ಪಂದ್ಯ ತುಂಬಾ ಸವಾಲಿನಿಂದ ಕೂಡಿದೆ ಎಂಬ ಅರಿವಿದೆ.