8 ಪಂದ್ಯಗಳಿಂದ ಜಯ ಕಾಣದ ಬೆಂಗಳೂರು
ಎಸ್ ಸಿ ಈಸ್ಟ್ ಬೆಂಗಾಲ್ ಪರಿಸ್ಥಿತಿಯೇ ಬೆಂಗಳೂರು ತಂಡಕ್ಕೆ. ಕಳೆದ 8 ಪಂದ್ಯಗಳಿಂದ ಬೆಂಗಳೂರು ಜಯ ಕಂಡಿಲ್ಲ. ಅದರಲ್ಲಿ 5 ಸೋಲು. ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅನುವುಮಾಡಿಕೊಡುವುದು ಬೆಂಗಳೂರಿನ ದೊಡ್ಡ ಸಮಸ್ಯೆಯಾಗಿದೆ. 11 ಪಂದ್ಯಗಳಲ್ಲಿ ತಂಡ ಕ್ಲೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿದೆ. 19 ಗೋಲುಗಳನ್ನು ನೀಡಿರುವ ಬೆಂಗಳೂರು ಈ ವಿಷಯದಲ್ಲಿ ಕೇರಳ ಮತ್ತು ಒಡಿಶಾದ ಜತೆ ಕೈ ಜೋಡಿಸಿದೆ. ಬಿಎಫ್ ಸಿ ಈ ಋತುವಿನಲ್ಲಿ ಜಯದ ಹಂತದಿಂದ 9 ಅಂಕಗಳನ್ನು ಕಳೆದುಕೊಂಡಿದೆ. ಹೈದರಾಬಾದ್ ವಿರುದ್ಧ ಪಂದ್ಯ ಗೆಲುವು ನಿಶ್ಚಿತವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪಂದ್ಯ 2-2 ರಲ್ಲಿ ಸಮಬಲಗೊಂಡಿತು.
ಪ್ಲೇ ಆಫ್ ಆಸೆ ಜೀವಂತ
ಈಗ ತಂಡ ಬದಲಾವಣೆಗೆ ಮುಂದಾಗಿದೆ. ಎರಿಕ್ ಪಾರ್ಥಲು ಮತ್ತು ಜುವಾನನ್ ಅವರು ನಾಳೆಯ ಪಂದ್ಯದಿಂದ ವಂಚಿತರಾಗಲಿದ್ದಾರೆ. ತಂಡದಲ್ಲಿ ಆಟಗಾರರ ಮನಸ್ಥಿತಿ ಉತ್ತಮವಾಗಿಲ್ಲ ಎಂದು ಕೋಚ್ ನೌಶಾದ್ ಮೂಸಾ ಹೇಳಿದ್ದಾರೆ. ಇತ್ತೀಚಿನ ಫಲಿತಾಂಶಗಳನ್ನು ಕಂಡಾಗ ತಂಡದಲ್ಲಿ ಪ್ಲೇ ಆಫ್ ತಲಪುವ ಆಸೆ ಜೀವಂತವಾಗಿದೆ ಎಂದಿದ್ದಾರೆ.
ಒಂದು ಗೆಲುವು ಸಾಕು
"ನೀವು ಅಂಕಪಟ್ಟಿಯನ್ನು ಗಮನಿಸಿದಾಗ ಹೆಚ್ಚು ಅಂತರ ಕಾಣುವುದಿಲ್ಲ. ಕೇವಲ ಒಂದು ಜಯ ಗಳಿಸಿದರೆ ಅಲ್ಲಿಗೆ ತಲುಪಲಿದ್ದೇವೆ. ಇದು ನಮ್ಮಲ್ಲಿ ಧನಾತ್ಮಕ ಫಲಿತಾಂಶವನ್ನು ಕಾಣಲು ಪ್ರೇರಣೆ ನೀಡಿದೆ. ಒಂದು ಪಂದ್ಯ, ಒಂದು ಜಯ ಗಳಿಸಿದರೆ ಸಾಕು ನಾವು ಅಲ್ಲಿಗೆ ತಲುಪುತ್ತೇವೆ. ನಾವು ಕಠಿಣ ಶ್ರಮವಹಿಸಿ ಪ್ಲೇ ಆಫ್ ತಲುಪಲಿದ್ದೇವೆ," ಎಂದರು.