ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬೆಂಗಳೂರು ವಿರುದ್ಧ ಜಯದ ನಿರೀಕ್ಷೆಯಲ್ಲಿ ಹೈದರಾಬಾದ್

ISL 2020 21: bengaluru fc vs hyderabad fc preview match 74

ಗೋವಾ ಜನವರಿ 27: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಕಂಡಿರುವ ಹೈದರಾಬಾದ್ ಎಫ್ ಸಿ ನಂತರದ ಪಂದ್ಯಗಳಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕುಸಿಯತೊಡಗಿತು. ಈ ಸೋಲು ಗೆಲುವಿನ ಸಮ್ಮಿಳಿತದಲ್ಲೂ ಹೈದರಾಬಾದ್ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. ಗುರುವಾರ ಇಲ್ಲಿನ ತಿಲಕ್ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಯನ್ನು ಮಾನ್ವೆಲ್ ಮಾರ್ಕ್ವೇಜ್ ಪಡೆ ಹೊಂದಿದೆ.

"ಹೌದು, ನನ್ನ ಪ್ರಕಾರ ಈ ಹಂತದಲ್ಲಿ ಸ್ಪರ್ಧೆಯು ಸಮಾನವಾಗಿದೆ. ಹೆಚ್ಚಿನ ಪಂದ್ಯಗಳು ಡ್ರಾದಲ್ಲಿ ಕೊನೆಗೊಳ್ಳುತ್ತಿವೆ. ಎಲ್ಲ ತಂಡಗಳು ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿರುವುದರಿಂದ ಸ್ಪರ್ಧೆ ಕುತೂಹಲವಾಗಿದೆ. ನನ್ನ ಪ್ರಕಾರ ಎಲ್ಲ ತಂಡಗಳಿಗೂ ಸಾಧ್ಯತೆ ಇದೆ," ಎಂದು ಮಾರ್ಕ್ವೇಜ್ ಹೇಳಿದ್ದಾರೆ.

ಐಎಸ್‌ಎಲ್: ನಾರ್ಥ್ಈಸ್ಟ್‌ ಯುನೈಟೆಡ್‌ಗೆ ಸೋತು ತಲೆಬಾಗಿದ ಬಾಗನ್ಐಎಸ್‌ಎಲ್: ನಾರ್ಥ್ಈಸ್ಟ್‌ ಯುನೈಟೆಡ್‌ಗೆ ಸೋತು ತಲೆಬಾಗಿದ ಬಾಗನ್

ಕಳೆದ ಮೂರು ಪಂದ್ಯಗಳಲ್ಲಿ ನಿಜಾಮರ ಪಡೆ ಎರಡು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಇವುಗಳಲ್ಲಿ ಎಲ್ಲವೂ ಜಯ ಗಳಿಸುವ ಪಂದ್ಯಗಳಾಗಿವೆ ಎಂದು ಕೋಚ್ ಹೇಳಿದ್ದಾರೆ. " ನಾವು ನಮ್ಮ ಶೈಲಿಗೆ ತಕ್ಕಂತೆ ಆಡುತ್ತೇವೆ. ನಾವು ಎದುರಾಳಿಗೆ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟಾಗ, ನಾವು ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೇವೆ ಎನ್ನುತ್ತಾರೆ, ಕ್ಲೀನ್ ಶೀಟ್ ಇದ್ದಾಗ ನೀವು ಪಂದ್ಯವನ್ನು ಸೋಲುವುದಿಲ್ಲ,' ಎಂದು ಮಾರ್ಕ್ವೇಜ ಹೇಳಿದರು.

ಎದುರಾಳಿಗಳಿಂದ ಕಠಿಣ ಸವಾಲು

ಎದುರಾಳಿಗಳಿಂದ ಕಠಿಣ ಸವಾಲು

ಇತ್ತೀಚಿನ ಪಂದ್ಯಗಳಲ್ಲಿ ಬೆಂಗಳೂರು ತಂಡ ಜಯ ಗಳಿಸುವಲ್ಲಿ ವಿಫಲವಾಗಿದ್ದರೂ ಮಾರ್ಕ್ವೇಜ್ ಎದುರಾಳಿಗಳಿಂದ ಕಠಿಣ ಸವಾಲು ಎದುರಾಗಲಿದೆ ಎಂದಿದ್ದಾರೆ, "ನನ್ನ ಪ್ರಕಾರ ನಾವು ಬಲಿಷ್ಠ ತಂಡದ ವಿರುದ್ಧ ಆಡಲಿದ್ದೇವೆ. ನಮ್ಮ ನಿಯಂತ್ರಣದಲ್ಲಿ ಚೆಂಡು ಇದ್ದಾಗ ಬೆಂಗಳೂರು ತಂಡದ ಬಾಕ್ಸ್ ನಲ್ಲಿ ಹೆಚ್ಚಿನ ಆಟಗಾರರು ಇರುವಂತೆ ಮಾಡಬೇಕು. ಅವರಲ್ಲಿ ಚೆಂಡು ಇದ್ದಾಗ ನಮ್ಮ ಬಾಕ್ಸ್ ಆ ತಂಡದ ಆಟಗಾರರು ಬರುವುದನ್ನು ನಿಯಂತ್ರಿಸಬೇಕು. " ಎಂದರು.

ಸತತ 7 ಪಂದ್ಯಗಳಲ್ಲಿ ಜಯ ಕಾಣದ ಬಿಎಸ್‌ಸಿ

ಸತತ 7 ಪಂದ್ಯಗಳಲ್ಲಿ ಜಯ ಕಾಣದ ಬಿಎಸ್‌ಸಿ

ಬೆಂಗಳೂರು ತಂಡ ಸತತ ಏಳು ಪಂದ್ಯಗಳಲ್ಲಿ ಜಯ ಕಾಣದೆ ಕಂಗೆಟ್ಟಿದೆ. ಅವರ ಚೇತರಿಕೆಯ ಲಕ್ಷಣಗಳು ಪಂದ್ಯದಿಂದ ಪಂದ್ಯಕ್ಕೆ ಕಡಿಮೆಯಾಗುತ್ತಿದೆ. ಕಳೆದ ಹತ್ತು ಪಂದ್ಯಗಳಲ್ಲಿ ಬೆಂಗಳೂರು ಕ್ಲೀನ್ ಶೀಟ್ ಸಾಧನೆ ಮಾಡಲು ವಿಫಲವಾಗಿದೆ. ಇದರಿಂದಾಗಿ ತಂಡ ತನ್ನ ಸಾಮರ್ಥ್ಯಕ್ಕೆ ವಿರುದ್ಧ ಎನ್ನಬಹುದಾದ ಏಳನೇ ಸ್ಥಾನದಲ್ಲಿದೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ಬೆಂಗಳೂರಿಗೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಕೇವಲ ನಾಲ್ಕ ಅಂಕಗಳ ಅಗತ್ಯ ಇದೆ. ತಮ್ಮ ತಂಡ ಜಯ ಗಳಿಸುತ್ತದೆ ಎಂಬ ಭರವಸೆಯಲ್ಲಿರುವ ಮಧ್ಯಂತರ ಕೋಚ್ ನೌಶಾದ್ ಮೂಸಾ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ.

ಪ್ಲೇಆಫ್ ಆಸೆ ಕಳೆದುಕೊಂಡಿಲ್ಲ

ಪ್ಲೇಆಫ್ ಆಸೆ ಕಳೆದುಕೊಂಡಿಲ್ಲ

"ನಾವು ಎಲ್ಲವನ್ನು ಸಮತೋಲದಲ್ಲಿ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದೇವೆ, ನಾವು ಪ್ಲೇ ಆಫ್ ತಲುಪುವ ನಮ್ಮ ಆಸೆಯನ್ನು ಕಳೆದುಕೊಂಡಿಲ್ಲ. ಮುಂದಿನ ಋತುವಿಗೆ ಸಜ್ಜಾಗುವ ಸಲುವಾಗಿ ನಾವು ಯುವ ಆಟಗಾರರಿಗೆ ಅವಕಾಶ ನೀಡುತ್ತಿದ್ದೇವೆ. ಐಎಸ್ಎಲ್ ನ ಮಟ್ಟವನ್ನು ತಿಳಿದುಕೊಳ್ಳಲು ಇದು ನೆರವಾಗಲಿದೆ. ಒತ್ತಡವನ್ನು ಅರಿತುಕೊಳ್ಳಲು ನಾವು ಅವರಿಗೆ 20 ರಿಂದ 30 ನಿಮಿಷಗಳ ಅವಕಾಶವನ್ನು ನೀಡುತ್ತಿದ್ದೇವೆ." ಎಂದು ಮೂಸಾ ಹೇಳಿದರು.

Story first published: Thursday, January 28, 2021, 9:35 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X