ಕುಸಿತಕ್ಕೆ ಆಸ್ಪದ ನೀಡಲಾರೆವು
ತಮ್ಮ ತಂಡವು ಎಎಫ್ ಸಿ ಚಾಂಪಿಯನ್ಷಿಪ್ ನ ಗುರಿಹೊಂದಿರುವುದರಿಂದ ಇನ್ನು ಯಾವುದೇ ರೀತಿಯ ಕುಸಿತಕ್ಕೆ ಆಸ್ಪದ ನೀಡುವುದು ಸೂಕ್ತವಲ್ಲ ಎಂದಿದ್ದಾರೆ. ಬೆಂಗಳೂರು ತಂಡ ಅತ್ಯಂತ ಅಪಾಯಕಾರಿ ಎಂದಿದ್ದಾರೆ. "ಪ್ರತಿಯೊಂದು ಪಂದ್ಯವೂ ಕಠಿಣವಾದುದು, ಬಿಎಫ್ ಸಿ ವಿರುದ್ಧ ಆಡುವುದು ಕಠಿಣವಾದುದು, ಏಕೆಂದರೆ ಅಲ್ಲಿ ಉತ್ತಮ ಆಟಗಾರಿದ್ದಾರೆ. ಹೊಸ ಕೋಚ್ ಆಗಮನದ ನಂತರ ತಂಡದಲ್ಲಿ ಸ್ಫೂರ್ತಿ ತುಂಬಿರುತ್ತದೆ. ಇದರಿಂದ ಪಂದ್ಯ ಕಠಿಣವಾಗಲಿದೆ, ಆದರೂ ನಾವು ನಿಭಾಯಿಸುತ್ತೇವೆ," ಎಂದು ಲೊಬೆರಾ ಹೇಳಿದರು.
ಬೆಂಗಳೂರಿಗೆ ಗೆಲುವು ಅನಿವಾರ್ಯ
ಅಮಾನತುಗೊಂಡಿರುವ ಹ್ಯುಗೋ ಬೌಮಾಸ್ ಅವರ ಅನುಪಸ್ಥಿತಿಯಲ್ಲಿ ಮುಂಬೈ ನಾಳೆಯ ಪಂದ್ಯವನ್ನಾಡಲಿದೆ. 9 ಗೋಲುಗಳನ್ನು ಗಳಿಸಿರು ಫ್ರಾನ್ಸ್ ನ ಆಟಗಾರ 38 ಅವಕಾಶಗಳನ್ನು ನಿರ್ಮಿಸಿದ್ದಾರೆ. ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಕೊಳ್ಳಬೇಕಾದರೆ ಬೆಂಗಳೂರು ತಂಡಕ್ಕೆ ಇಲ್ಲಿ ಗೆಲ್ಲಲೇಬೇಕಾದ ಅಗತ್ಯ ಇದೆ. ಮುಂಬೈ ವಿರುದ್ಧ ಬೆಂಗಳೂರಿನ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿಲ್ಲ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಬಾರಿ ಸೋಲು ಕಂಡಿರುವ ಬೆಂಗಳೂರು ಒಂದು ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದೆ.
ಅಂಕ ಕಳೆದುಕೊಳ್ಳುತ್ತಿದೆ ಅಗ್ರ ತಂಡಗಳು
ಇತ್ತೀಚಿನ ಪಂದ್ಯಗಳಲ್ಲಿ ಅಗ್ರ ನಾಲ್ಕರಲ್ಲಿ ತಂಡಗಳು ಅಂಕಗಳನ್ನು ಕಳೆದುಕೊಳ್ಳುತ್ತಿರುವ ಕಾರಣ ಮೂರು ಮತ್ತು ನಾಲ್ಕನೇ ಸ್ಥಾನಗಳಿಗೆ ಅವಕಾಶ ಹೆಚ್ಚಿದೆ. ಮಧ್ಯಂತರ ಕೋಚ್ ನೌಶಾದ್ ಮೂಸಾ ಸದ್ಯ ಒಂದು ಪಂದ್ಯದ ಕಡೆಗೆ ಗುರಿ ಇಡಬೇಕು ಎಂದಿದ್ದಾರೆ. "ಫಲಿತಾಂಶಗಳು ಎಲ್ಲರ ಪರವಾಗಿ ಬರುತ್ತಿದೆ. ನಾವು ಪಂದ್ಯದ ಕಡೆಗೆ ಗಮನ ಹರಿಸುವುದು ಮುಖ್ಯ. ಡಿಫೆನ್ಸ್ ನಮ್ಮ ಸಮಸ್ಯೆಯಾಗಿದೆ, ಅದರ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ, "ಎಂದರು.