ಪ್ರತಿ ಪಂದ್ಯದಲ್ಲೂ 3 ಅಂಕ ಗುರಿ
ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿರುವ ರಾಯ್ ಕೃಷ್ಣ ಮೊದಲ ಆರು ಪಂದ್ಯಗಳಲ್ಲಿ 5 ಗೋಲು ಗಳಿಸಿದ್ದರು, ಆದರೆ ಕಳೆದ ಐದು ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ ಒಂದು ಗೋಲು. ಫಿಜಿಯ ಆಟಗಾರನ ಈ ಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಹಬ್ಬಾಸ್, "ಚಿಂತಿಸಬೇಡಿ, ಇಂಥ ಪರಿಸ್ಥಿತಿ ಸಹಜವಾದುದು, ನನಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಇದು ಫುಟ್ಬಾಲ್," ಎಂದರು. "ನಾವು ನಿರಂತರವಾಗಿ ಕೆಲಸ ಮಾಡಬೇಕು. ಪ್ರತಿಯೊಂದು ಪಂದ್ಯದಲ್ಲೂ ಮೂರು ಅಂಕಗಳನ್ನು ಗೆಲ್ಲುವುದು ನಮ್ಮ ಯೋಜನೆ, ಆ ನಂತರ ನಾವು ಪ್ಲೇ ಆಫ್ ಬಗ್ಗೆ ಯೋಚಿಉತ್ತೇವೆ," ಎಂದರು.
ಕ್ರಿವಿಲ್ಲೆರೋ ಗಾಯ ತಂಡಕ್ಕೆ ನಷ್ಟ
ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಪಂದ್ಯ ಗೋಲಿಲ್ಲದೆ ಡ್ರಾಗೊಂಡಿತ್ತು. ಪ್ಲೇ ಆಫ್ ಸ್ಪರ್ಧೆಯಲ್ಲಿರುವ ಸಾಬಾ ಲಾಜ್ಲೋ ಪಡೆ ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದು ಗಮನಾರ್ಹ. ಕಳೆದ ಋತುವಿನಲ್ಲಿ ಗಳಿಸಿರುವ ಕ್ಲೀನ್ ಶೀಟ್ ಗಿಂತ ಹೆಚ್ಚು ಕ್ಲೀನ್ ಶೀಟ್ ಸಾಧನೆಯನ್ನು ಚೆನ್ನೈಯಿನ್ ತಂಡ ಈಗಾಗಲೇ ಮಾಡಿದೆ. ಗಾಯದ ಸಮಸ್ಯೆ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಉತ್ತಮ ಆಟಗಾರ ರಫಾಯಲ್ ಕ್ರಿವಿಲ್ಲೆರೋ ಗಾಯಗೊಂಡಿರುವುದು ತಂಡಕ್ಕೆ ತುಂಬಲಾರದ ನಷ್ಟವಾಗಿದೆ.
ದುರಾದೃಷ್ಟ ನಮ್ಮನ್ನು ಕಾಡುತ್ತಿದೆ
"ನನಗೆ ನನ್ನ ತಂಡದ ಬಗ್ಗೆ ಗೊತ್ತಿದೆ, ತಂಡದ ನೈಜ ಸ್ಥತಿಯ ಬಗ್ಗೆಯೂ ಗೊತ್ತಿದೆ. ನಾವು ಗಾಯದ ಕಾರಣ ನಾಯಕ ಕ್ರಿವೆಲ್ಲೊರೊ ಅವರನ್ನು ಕಳೆದುಕೊಂಡೆವು. ನಮ್ಮ ತಂಡವನ್ನು ಯಶಸ್ಸಿನಲ್ಲಿ ಮುನ್ನಡೆಸಲು ರಾಫಾ ಅವರ ಪಾತ್ರ ಪ್ರಮುಖವಾಗಿತ್ತು. ಕಳೆದ ಋತುವಿನಲ್ಲಿ ಆವರು ಉತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು. ನಮ್ಮನ್ನು ಗಾಯದ ಸಮಸ್ಯೆ ಕಾಡುತ್ತಿದೆ. ನಮ್ಮನ್ನು ದುರಾದೃಷ್ಟವೂ ಕಾಡುತ್ತಿದೆ. ಆದರೆ ಇದನ್ನು ನಾವು ದೂರುತ್ತಿಲ್ಲ. ಪ್ರತಿಯೊಂದನ್ನೂ ಧನಾತ್ಮಕವಾಗಿ ಸ್ವೀಕರಿಸುವೆ. ಇದ್ದುದರಲ್ಲೇ ಉತ್ತಮ ಆಯ್ಕೆ ನಮ್ಮದಾಗಬೇಕು," ಎಂದರು.