ಆಕ್ರಮಣಕಾರಿ ಆಟ
ಎಸ್ಸಿಇಬಿ ತಂಡದ ಈ ಅಜೇಯ ಯಶಸ್ಸಿನ ಹಾದಿಯಲ್ಲಿ ಕಂಡಿ ಬಂದ ಮುಖ್ಯ ಅಂಶವೆಂದರೆ ಅದು ತಂಡದ ಆಕ್ರಮಣಕಾರಿ ಆಟ. ಋತುವಿನ ಆರಂಭದಲ್ಲಿ ಯಾವ ವಿಭಾಗದಲ್ಲಿ ವೈಫಲ್ಯ ಕಂಡು ಗೋಲು ಗಳಿಸಲು ಆಥವಾ ಜಯ ಗಳಿಸಲು ತಂಡ ವಿಫಲವಾಗಿತ್ತೊ ಈಗ ಅದೇ ವಿಭಾಗದಲ್ಲಿ ಯಶಸ್ಸು ಕಂಡಿರುವುದು ಗಮನಾರ್ಹ. ಯುವ ಆಟಗಾರ ಎನೋಬಾಖರೆ ಆವರು ಹೊಸದಾಗಿ ತಂಡಕ್ಕೆ ಸೇರ್ಪಡೆಯಾಗಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ. ನೈಜಿರಿಯಾ ಮೂಲದ ಆಟಟಗಾರ ಕಳೆದ ಮೂರು ಪಂದ್ಯಗಳಲ್ಲಿ ಗೋಲು ಗಳಿಸುತ್ತಿದ್ದಾರೆ. ತಂಡದ ಮಿಡ್ ಫೀಲ್ಡ್ ವಿಭಾಗ ಇದುವರೆಗೂ ಹತ್ತು ಗೋಲುಗಳನ್ನು ಗಳಿಸಿದೆ. ಲೀಗ್ ನಲ್ಲಿ ಯಾವುದೇ ತಂಡ ಇದುವರೆಗೂ ಈ ಯಶಸ್ಸನ್ನು ಕಂಡಿರಲಿಲ್ಲ.
ಕೇರಳ ಅಟ್ಯಾಕ್ ಕೂಡ ಉತ್ತಮ
ಕೇರಳ ಬ್ಲಾಸ್ಟರ್ಸ್ ತಂಡ ಇದುವರೆಗೂ ಎದುರಾಳಿ ತಂಡಕ್ಕೆ 19 ಗೋಲುಗಳನ್ನು ಗಳಿಸಲು ಅವಕಾಶ ನೀಡಿದೆ. ಆದರೆ ಎಸ್ ಸಿ ಇ ಬಿ ರೀತಿಯಲ್ಲಿಯೇ ಕೇರಳದ ಅಟ್ಯಾಕ್ ವಿಭಾಗ ಸುಧಾರಣೆ ಕಂಡಿದೆ. 13 ಗೋಲುಗಳನ್ನು ಗಳಿಸಿರುವುದು ಗಮನಾರ್ಹ. ಮುಂಬೈ ಸಿಟಿ ಹಾಗೂ ಹೈದರಾಬಾದ್ ತಂಡಗಳು ಅತಿ ಹೆಚ್ಚು ಗೋಲುಗಳನ್ನು ಗಳಿಸಿವೆ. ಕಿಬು ವೆಕುನಾ ಪಡೆಯಲ್ಲಿ ಎಂಟು ವಿಭಿನ್ನ ರೀತಿಯಲ್ಲಿ ಗೋಲುಗಳು ದಾಖಲಾಗಿವೆ. ವಿಭಿನ್ನ ಆಟಗಾರರು ಗೋಲು ಗಳಿಸಿದ್ದಾರೆ. ಗೋಲು ಗಳಿಸುವ ವರೆಗೂ ತಂಡದ ಡಿಫೆನ್ಸ್ ವಿಭಾಗದ ಸಮಸ್ಯೆ ಸಮಸ್ಯೆಯಾಗಿ ಉಳಿಯುವುದಿಲ್ಲ.
ಗೋಲು ಗಳಿಸಲು ಅವಕಾಶ ನೀಡಬಾರದು
"ನಾವು ಎಷ್ಟು ಗೋಲುಗಳನ್ನು ನೀಡಿದ್ದೇವೆ ಎಂಬುದು ಮುಖ್ಯವಲ್ಲ, ಎಷ್ಟು ಗೋಲುಗಳನ್ನು ಗಳಿಸಿದ್ದೇವೆ ಎಂಬುದು ಮುಖ್ಯ. ನೀವು ನೀಡಿದ್ದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದರೆ ನಿಮ್ಮ ಆತ್ಮವಿಶ್ವಾಕ್ಕೆ ದಕ್ಕೆಯಾಗದು, ಹಿಂದಿನ ಕೆಲವು ಪಂದ್ಯಗಳಲ್ಲಿ ನಾವು ಅವಕಾಶಗಳನ್ನು ನಿರ್ಮಿಸುತ್ತಿದ್ದೇವೆ. ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶವನ್ನು ನೀಡದಿರುವುದೇ ನಮ್ಮ ಉದ್ದೇಶವಾಗಬೇಕು,' ಎಂದು ಬ್ಲಾಸ್ಟರ್ಸ್ ಕೋಚ್ ಹೇಳಿದ್ದಾರೆ.