ಧನಾತ್ಮಕ ಲಕ್ಷಣಗಳನ್ನು ತೋರಿಸಿದ್ದೇವೆ
"ಕಳೆದ ಆರು ಪಂದ್ಯಗಳಲ್ಲಿ ನಾವು ಧನಾತ್ಮಕ ಲಕ್ಷಣಗಳನ್ನು ತೋರಿಸಿದ್ದೇವೆ. ಆದಷ್ಟು ಹೆಚ್ಚಿನ ಪಂದ್ಯಗಳನ್ನು ಗೆದ್ದು ತಂಡವನ್ನು ಮುನ್ನಡೆಸಬೇಕಿದೆ," ಎಂದು ಕೋಚ್ ಪೈಟಾನ್ ಹೇಳಿದ್ದಾರೆ. " ನಾವು ಆಡಿರುವ ಎಲ್ಲಾ ಪಂದ್ಯಗಳನ್ನು ಗಮನಿಸಿದಾಗ ಅಲ್ಪ ಅಂತರದಲ್ಲಿ ನಾವು ಜಯದಿಂದ ವಂಚಿತರಾಗಿದ್ದೇವೆ. ನಾವು ಪ್ರತಿಯೊಂದು ಪಂದ್ಯದಲ್ಲೂ ಒಂದು ಗೋಲು ಗಳಿಸಿರುತ್ತೇವೆ. ನಾವು ಖಂಡಿತವಾಗಿಯೂ ಜಯ ಗಳಿಸಲಿದ್ದೇವೆ," ಎಂದು ನೂತನ ಕೋಚ್ ಹೇಳಿದರು.
ತಂಡದ ನಾಯಕ ಸ್ಟೀವನ್ ಟೇಲರ್ ಅಮಾನತುಗೊಂಡಿರುವುದು ತಂಡವನ್ನು ಮತ್ತಷ್ಟು ಚಿಂತೆಗೆ ಈಡುಮಾಡಿದೆ. ಎರಡನೇ ಸ್ಥಾನದಲ್ಲಿರುವ ಬಾಗನ್ ತಂಡ ಅಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ನಡುವಿನ ಅಂತರವನ್ನು ಕಡಿಮೆ ಮಾಡಲು ಯತ್ನಿಸಲಿದೆ.
ಜಯವನ್ನು ಕಸಿದುಕೊಂಡಿತ್ತು
ಈ ಋತುವಿನ ಹಿಂದಿನ ಪಂದ್ಯದಲ್ಲಿ ತಂಡಗಳು ಮುಖಾಮುಖಿಯಾಗಿದ್ದಾಗ, ರಾಯ್ ಕೃಷ್ಣ ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲು ಜಯವನ್ನು ಕಸಿದುಕೊಂಡಿತ್ತು, ಸಾಕಷ್ಟು ಅವಕಾಶಗಳನ್ನು ನಿರ್ಮಿಸಿದ್ದ ತಂಡ ಮೋಹನ್ ಬಾಗನ್ ಪಾಳಯದಲ್ಲಿ ಆತಂಕವನ್ನು ನಿರ್ಮಿಸಿತ್ತು. ಎಟಿಕೆಎಂಬಿ ಕೋಚ್ ಆಂಟೋನಿಯೋ ಹಬ್ಬಾಸ್ ಈ ಬಾರಿ ಒಡಿಶಾ ಜಯದ ಹಸಿವಿನಲ್ಲಿದ್ದು ಬಾಕ್ಸ್ಟರ್ ಇಲ್ಲದೆ ತಂಡ ಹೋರಾಟ ನೀಡಲಿದೆ ಎಂದಿದ್ದಾರೆ.
ವಿಶೇಷವಾದ ಒಂದು ಹಂತದಲ್ಲಿದ್ದಾರೆ
"ನಾವು ಮುಂಬೈ ವಿರುದ್ಧ ಯಾವ ರೀತಿಯಲ್ಲಿ ಆಡಿದ್ದೇವೋ ಅದೇ ರೀತಿಯಲ್ಲಿ ಒಡಿಶಾ ವಿರುದ್ಧ ಆಡಲಿದ್ದೇವೆ. ಅವರು ಈಗ ವಿಶೇಷವಾದ ಒಂದು ಹಂತದಲ್ಲಿದ್ದಾರೆ. ಏಕೆಂದರೆ ಕೋಚ್ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ಕೋಚ್ ಬದಲಾಗಲಿ ಅಥವಾ ತಂಡ ಬದಲಾಗಲಿ ಅಲ್ಲಿ ಸ್ಫೂರ್ತಿ ಇಮ್ಮಡಿಗೊಳ್ಳುತ್ತದೆ," ಎಂದರು.