ಕೇರಳ ವಿರುದ್ಧ ಅಂತಿಮ ಕ್ಷಣ ಸೋಲು
ಕೇರಳ ವಿರುದ್ಧ ಬೆಂಗಳೂರು ತಂಡ ಉತ್ತಮವಾಗಿ ಆಡಿತ್ತು, ಆದರೆ ಅಂತಿಮ ಕ್ಷಣದಲ್ಲಿ ಗೋಲು ದಾಖಲಿಸಿದ ಕೇರಳ ಜಯ ಕಸಿದುಕೊಂಡಿತು. " ನೀವು ಒಡಿಶಾ ತಂಡದಲ್ಲಿ ಕೇಳಿದರೆ ಬಿಎಫ್ ಸಿ ಉತ್ತಮ ಫಾರ್ಮ್ ನಲ್ಲಿ ಇಲ್ಲವೆಂದೇ ಹೇಳುತ್ತಾರೆ. ನಾವು ಕೇರಳದ ವಿರುದ್ಧ ತೋರಿದ ಪ್ರದರ್ಶನವನ್ನೇ ತೋರಿದರೆ ಒಡಿಶಾ ವಿರುದ್ಧ ಗೆಲ್ಲಬಹುದು. ನಾವು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಪಂದ್ಯ ಗೆಲ್ಲುವುದು ಸುಲಭ," ಎಂದರು.
ಒಡಿಶಾ ಗೆದ್ದಿರುವುದು ಒಂದೇ ಪಂದ್ಯ
ಇದುವರೆಗೂ ಒಡಿಶಾ ಗೆದ್ದಿರುವುದು ಕೇವಲ ಒಂದು ಪಂದ್ಯ. ಕೋಚ್ ಸ್ಟುವರ್ಟ್ ಬಾಕ್ಸ್ಟರ್ ನಾಳೆ ಎರಡನೇ ಜಯ ಗಳಿಸುವ ಗುರಿ ಹೊಂದಿದ್ದಾರೆ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ನಮ್ಮ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಬೇಕಿದೆ ಎಂದಿದ್ದಾರೆ.
ಉತ್ತಮ ಆಟವಾಡಿದರೆ ಪ್ಲೇಆಫ್ಗೆ ಹತ್ತಿರ
"ನಾವು ಎಟಿಕೆಎಂಬಿ ಯಂತಹ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದೇವೆ, ಯಾವುದೇ ತಂಡ ವಿರುದ್ಧ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವಿದೆ, ಆದರೆ ಬೆಂಗಳೂರು ವಿರುದ್ಧವಲ್ಲ. ನಾವು ಅವಕಾಶಗಳನ್ನು ಸದುಪಯೋಗಪಡಿಸಕೊಲ್ಳಬೇಕು. ನಮ್ಮದೇ ಆದ ಆಟವಾಡಬೇಕು. ನಾವು ಆ ಗುಣಮಟ್ಟದ ಆಟವಾಡಿದರೆ ಎಲ್ಲರೊಂದಿಗೆ ಪ್ಲೇ ಆಫ್ ಗೆ ಹತ್ತಿರವಾಗಲಿದ್ದೇವೆ," ಎಂದರು.