ಕಳೆದ ಸಾರಿ ಪಂದ್ಯ ಡ್ರಾ
ಕಳೆದ ಬಾರಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ ಪಂದ್ಯ ರೋಚಕವಾಗಿ 2-2 ಗೋಲುಗಳಿಂದ ಡ್ರಾಗೊಂಡಿತ್ತು. ಸೋಮವಾರ ಒಡಿಶಾ ಮತ್ತೊಂದು ಕಠಿಣ ಸವಾಲು ಎದುರಿಸಲಿದೆ ಎಂದು ಕೋಚ್ ಹೇಳಿದ್ದಾರೆ. "ಓವನ್ ಕೊಯ್ಲ್ ಅವರ ತಂಡ ಉತ್ತಮ ಸ್ಪರ್ಧೆಯನ್ನು ನೀಡುವ ತಂಡ. ಅವರು ಯಾವುದೇ ಕಾರಣಕ್ಕೂ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವವರಲ್ಲ, ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಕಠಿಣ ಪಂದ್ಯಕ್ಕಿಂತ ಬೇರೇನನ್ನೂ ನಾನು ನಿರೀಕ್ಷಿಸುವುದಿಲ್ಲ," ಎಂದು ಬಾಕ್ಸ್ಟರ್ ಹೇಳಿದ್ದಾರೆ.
ಜೆಮ್ಷೆಡ್ಪುರ ಜಯ ಕಂಡಿಲ್ಲ
ಜೆಮ್ಷೆಡ್ಪುರ ಕೂಡಾ ಇದೇ ಪರಿಸ್ಥಿತಿಯಲ್ಲಿದೆ. ಒಡಿಶಾ ಕಳೆದ ನಾಲ್ಕು ಪಂದ್ಯಗಳಲ್ಲಿ ಅಂಕ ಕಳೆದುಕೊಂಡಿದ್ದರೆ, ಕಳೆದ ಐದು ಪಂದ್ಯಗಳಿಂದ ಜೆಮ್ಷೆಡ್ಪುರ ಜಯ ಕಂಡಿಲ್ಲ. ಅಲ್ಲದೆ ಮೂರು ಪಂದ್ಯಗಳಲ್ಲಿ ಗೋಲನ್ನೇ ಗಳಿಸಿರಲಿಲ್ಲ. ನಾಲ್ಕನೇ ಸ್ಥಾನವನ್ನು ಗುರಿಯಾಗಿಸಿಕೊಂಡಿರುವ ತಂಡಕ್ಕೆ ಜಯದ ಅಗತ್ಯ ಇದೆ ಎಂದು ಕೋಚ್ ಕೊಯ್ಲ್ ಹೇಳಿದ್ದಾರೆ. "ನಾವು ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ, ಇದರಿಂದ ಏನಾದರೂ ಬದಲಾವಣೆ ಆಗಬಹುದು. ಒಂದು ಅಂಕವನ್ನು ಮೂರು ಅಂಕಗಳಾಗಿ ಬದಲಾಯಿಸಬೇಕಾಗಿದೆ. ಪಂದ್ಯದಲ್ಲಿ ಜಯ ಗಳಿಸಿದರೆ ಅಂತಿಮ ನಾಲ್ಕರ ಹಂತ ತಲುಪಬಹುದು ಎಂಬುದನ್ನು ನಾವು ಕಳೆದ ವರ್ಷ ತೋರಿಸಿದ್ದೇವೆ. ನಮಗೆ ಒಡಿಶಾ ಸೇರಿಂದಂತೆ ಆರು ಪ್ರಮುಖ ಪಂದ್ಯಗಳಿವೆ ಅವುಗಳಲ್ಲಿ ಜಯ ಕಾಣಬೇಕಾದ ಅಗತ್ಯ ಇದೆ," ಎಂದು ಹೇಳಿದರು.
ಎರಡಕ್ಕೂ ಜಯವೇ ಗುರಿ
"ಒಡಿಶಾ ತಂಡದಲ್ಲಿ ಕೆಲವು ಉತ್ತಮ ಆಟಗಾರರಿದ್ದಾರೆ. ಫಾರ್ವರ್ಡ್ ಆಟಗಾರರನ್ನು ಗಮನಿಸಿದಾಗ ಅವರು ಗೋಲು ಗಳಿಸಬಲ್ಲ ಆಟಗಾರರು. ಎರಡೂ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡಿರುವುದರಿಂದ ನಾಳೆಯ ಪಂದ್ಯ ಕುತೂಹಲದಿಂದ ಕೂಡಲಿದೆ," ಎಂದರು.