ಜಯ ಗಳಿಸುವುದು ಕಷ್ಟ
"ಎಲ್ಲ ಪಂದ್ಯಗಳಲ್ಲೂ ಜಯ ಗಳಿಸುವುದು ಕಷ್ಟ. ತಂಡಗಳು ಉತ್ತಮ ರೀತಿಯಲ್ಲಿ ಸಮತೋಲನದಲ್ಲಿವೆ. ಆದ್ದರಿಂದ ಎಲ್ಲ ಪಂದ್ಯಗಳಲ್ಲೂ ಗೆಲ್ಲುವುದು ಕಷ್ಟ. ಫುಟ್ಬಾಲ್ ನ ಮುಖ್ಯ ಗುರಿ ಮೂರು ಅಂಕಗಳನ್ನು ಗೆಲ್ಲುವುದು. ನಾನು ಡ್ರಾ ಅಥವಾ ಸೋಲಿನ ಬಗ್ಗೆ ಯೋಚಿಸುವುದಿಲ್ಲ," ಎಂದು ಹಬ್ಬಾಸ್ ಹೇಳಿದ್ದಾರೆ. ಕೋಲ್ಕತಾದ ಆಟಗಾರರು ಲೀಗ್ ನಲ್ಲಿ ಅತಿ ಹೆಚ್ಚು ಟ್ಯಾಕಲ್ (233) ಮತ್ತು ಎರಡನೇ ಅತಿ ಹೆಚ್ಚು ಕ್ಲಿಯರೆನ್ಸ್ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಬೆಂಗಳೂರು ಬಲಿಷ್ಠ ತಂಡ
"ನಮ್ಮದೇ ಆದ ವಲಯವನ್ನು ನಿರ್ಮಿಸಿಕೊಳ್ಳುವುದು ಮತ್ತು ಅಂತರವನ್ನು ಮುಕ್ತಗೊಳಿಸುವುದು ಇದು ನಮ್ಮ ಯೋಜನೆ, ಚೆಂಡಿನ ಚಲನೆಗೆ ಅವಕಾಶ ಬೇಕಾಗುತ್ತದೆ. ಇದನ್ನು ನಿಯಂತ್ರಿಸಿದರೆ ಎದುರಾಳಿ ತಂಡದ ಅವಕಾಶಕ್ಕೆ ಅಡ್ಡಿ ತರಬಹುದು," ಎಂದರು. " ಬೆಂಗಳೂರು ಬಲಿಷ್ಠ ತಂಡ. ನಮಗೆ ಮೂರು ಅಂಕಗಳೆಂದರೆ ಇತರ ಪಂದ್ಯದಲ್ಲಿ ಗಳಿಸಿದಂತೆಯೇ. ಆದರೆ ಬೆಂಗಳೂರು ಮತ್ತ ಎಟಿಕೆ ಮೋಹನ್ ಬಾಗನ್ ನಡುವಿನ ಪಂದ್ಯವೆಂದರೆ ಅದು ಅತ್ಯಂತ ಪ್ರಮುಖವಾದುದು. ನಾವು ಎದುರಾಳಿಯನ್ನು ಯಾವಾಗಲೂ ಗೌರವಿಸುತ್ತೇವೆ, ಮತ್ತು 90 ನಿಮಿಷಗಳ ಪಂದ್ಯ ಫಲಿತಾಂಶವನ್ನು ತೀರ್ಮಾನಿಸಲಿದೆ," ಎಂದರು.
ಎಟಿಕೆ ಮೋಹನ್ ಬಾಗನ್ ತಂಡದ ಆಟಗಾರರು ಆಕ್ರಮಣಕಾರಿ ಆಟವನ್ನು ಆಡುವುದರಿಂದ ಬೆಂಗಳೂರು ತಂಡದ ಕೋಚ್ ಕಾರ್ಲಸ್ ಕ್ವಾಡ್ರಾಟ್ ಅವರಿಗೆ ಈ ಅಜೇಯವನ್ನು ಕಾಯ್ದುಕೊಳ್ಳುವುದು ಸವಾಲಾಗಿದೆ.
ಆಕ್ರಮಣಕಾರಿಯಾಗಿ ಆಡಬಲ್ಲರು
"ಎಟಿಕೆ ಮೋಹನ್ ಬಾಗನ್ ಕಠಿಣ ಆಟಗಾರರಿಂದ ಕೂಡಿದ ಬಲಿಷ್ಠ ತಂಡ. ಅವರ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ದೈಹಿಕವಾಗಿ ಬಲಿಷ್ಠರಾಗಿದ್ದು, ಅತ್ಯಂತ ಆಕ್ರಮಣಕಾರಿಯಾಗಿ ಆಡಬಲ್ಲರು. ಗೋವಾ ವಿರುದ್ಧದ ಪಂದ್ಯವನ್ನು ನಾವು ವೀಕ್ಷಿಸಿದ್ದೇವೆ. ಅವರ ಆಟಗಾರರು ಯಾವ ರೀತಿಯಲ್ಲಿ ಸಂಘಟಿತರಾಗಿ ಆಡುತ್ತಾರೆ ಎಂಬುದು ಗೊತ್ತಿದೆ. ಪ್ರತಿದಾಳಿಯ ಮೂಲಕ ಅವಕಾಶವನ್ನು ನಿರ್ಮಿಸುವಲ್ಲಿ ಅವರು ನಿಸ್ಸೀಮರು.," ಎಂದು ಕ್ಬಾಡ್ರಾಟ್ ಹೇಳಿದ್ದಾರೆ.
"ಹಬ್ಬಾಸ್ ತಂಡ ಹಲವು ಕಾರಣಕ್ಕೆ ಚಾಂಪಿಯನ್ ತಂಡವಾಗಿದೆ. ಅವರ ದಾಳಿ ಅಪಾಯದಿಂದ ಕೂಡಿರುತ್ತದೆ. ಅದನ್ನು ನಾವು ತಪ್ಪಿಸಿಕೊಳ್ಳಲು ಯತ್ನಿಸುವೆವು. ಅವರು ಡಿಫೆನ್ಸ್ ವಿಭಾಗದಲ್ಲಿ ಉತ್ತಮವಾಗಿರುವುದರಿಂದ ನಾವು ಸಾಕಷ್ಟು ಅವಕಾಶಗಳನ್ನು ನಿರ್ಮಿಸಬೇಕಿದೆ. ಇದುವರೆಗೂ ಅವರು ಎದುರಾಳಿ ತಂಡಕ್ಕೆ ಅತಿ ಕಡಿಮೆ ಸಂಖ್ಯೆಯಲ್ಲಿ ಗೋಲು ಗಳಿಸಲು ಅವಕಾಶ ನೀಡಿದ್ದಾರೆ. ಅವರನ್ನು ಸೋಲಿಸಲು ನಾವು ಪ್ರಯತ್ನಿಸುತ್ತೇವೆ," ಎಂದರು.