ಎದುರಾಳಿಯ ಬಗ್ಗೆ ಚೆನ್ನಾಗಿ ಗೊತ್ತು
"ನಮಗೆ ನಮ್ಮ ಎದುರಾಳಿಯ ಬಗ್ಗೆ ಚೆನ್ನಾಗಿ ಗೊತ್ತು," ಎಂದಿರುವ ಲಾಜ್ಲೊ, " ನಾವು ಪಂದ್ಯವನ್ನು ನಿಯಂತ್ರಿಸುವ ಬಗ್ಗೆ ಯತ್ನಿಸಬೇಕು. ಕೇರಳ ಉತ್ತಮ ತಂಡ. ಅವರ ಕೋಚ್ (ಕಿಬು ವೆಕುನಾ) ಭಾರತದ ಫುಟ್ಬಾಲ್ ನಲ್ಲಿ ಎರಡನೇ ವರ್ಷವನ್ನು ಕಳೆದಿದ್ದು, ಇಲ್ಲಿಯ ಫುಟ್ಬಾಲ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ತಂಡಕ್ಕೆ ಮಾತ್ರ ಹೊಸಬರು ಅಷ್ಟೆ, ತಂಡದ ಪ್ರತಿಕ್ರಿಯೆ ಮತ್ತು ಅವರ ಆಸೆ ಇದು ಸಾಮಾನ್ಯವಾಗಿ ಪ್ರಮುಖವಾಗಿರುತ್ತದೆ. ಇದು ಡರ್ಬಿ ಪಂದ್ಯ, ಕೇವಲ ಮತ್ತೊಂದು ಪಂದ್ಯವಲ್ಲ,'' ಎಂದರು.
ಅದೇ ಮಾರ್ಗದಲ್ಲಿ ಸಾಗುವೆವು
"ನಾವು ಯಾವ ರೀತಿಯಲ್ಲಿ ಆರಂಭ ಕಂಡಿದ್ದೇವೊ ಅದೇ ರೀತಿಯಲ್ಲಿ ಮುಂದುವರಿಯಲಿದ್ದೇವೆ. ನಮ್ಮ ಫುಟ್ಬಾಲ್ ಅಟ ಮತ್ತು ನಮ್ಮ ಶೈಲಿಯನ್ನು ಖುಷಿ ಪಡುವುದಕ್ಕಾಗಿ ಅದೇ ಮಾರ್ಗದಲ್ಲಿ ಸಾಗುವೆವು. ಜಯದೊಂದಿಗೆ ಮೂರು ಅಂಕಗಳನ್ನು ಗಳಿಸುತ್ತೇವೆಂಬ ಭರವಸೆ ಇದೆ,'' ಎಂದರು. ಮೊದಲ ಎರಡು ಪಂದ್ಯಗಳಲ್ಲಿ ಕೇರಳ ತಮ್ಮ ಎದುರಾಳಿ ತಂಡದ ವಿರುದ್ಧ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರೂ ಅವಕಾಶಗಳನ್ನು ನಿರ್ಮಿಸಲು ಹೆಣಗಾಡುತ್ತಿತ್ತು. ಅಟ್ಯಾಕ್ ಜತೆಯಲ್ಲಿ ವಿಕುನಾ ತಮ್ಮ ತಂಡದ ಡಿಫೆನ್ಸ್ ವಿಭಾಗ ಸುಧಾರಿಸಬೇಕು ಎಂದಿದ್ದಾರೆ.
ಸಹಾಲ್ ಆಡೋದು ಅನುಮಾನ
ಕೇರಳ ಬ್ಲಾಸ್ಟರ್ಸ್ ತಂಡ ದ್ವಿತಿಯಾರ್ಧದಲ್ಲಿ ಎಲ್ಲ ಮೂರು ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶ ಮಾಡಿಕೊಟ್ಟಿತ್ತು. ಸರ್ಗಿಯೋ ಸಿಡೊಂಚಾ ಅವರು ಮಿಡ್ ಫೀಲ್ಡ್ ನಲ್ಲಿರುವುದು ತಂಡದ ಆಧಾರ ಸ್ತಂಭ ಎನಿಸಿದ್ದಾರೆ. ಆದರೆ ಸಹಾಲ್ ಅಬ್ದುಲ್ ಸಮದ್ ನೇರವಾಗಿ ಆಡುವ ಹನ್ನೊಂದು ಮಂದಿಯಲ್ಲಿ ಸ್ಥಾನ ಪಡೆಯುವುದು ಸಂಶಯವೆನಿಸಿದೆ.
ಮತ್ತೆ ಮುಂದೆ ಸಾಗುತ್ತೇವೆ
"ನಮ್ಮ ಎರಡೂ ಎದುರಾಳಿ ತಂಡಗಳ ವಿರುದ್ಧ ಚೆಂಡಿನ ಮೇಲೆ ಹೆಚ್ಚು ಕಾಲ ನಿಯಂತ್ರಣ ಸಾಧಿಸಿದ್ದು ನಿಜ, ಆದರೆ ನಾವು ಮಾಡಬೇಕಾಗಿರುವುದೇನೆಂದರೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸುವುದು." ಎಂದು ಹೇಳಿರುವ ವಿಕುನಾ, "ನಾವು ಪಂದ್ಯಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಯಾವ ವಿಭಾಗದಲ್ಲಿ ಸುಧಾರಣೆ ಆಗಬೇಕು ಎಂಬುದರ ಬಗ್ಗೆ ಮಾತನಾಡುತ್ತೇವೆ. ಮತ್ತೆ ಮುಂದೆ ಸಾಗುತ್ತೇವೆ. ಅದೊಂದು ಅಂಶ ಆದರೆ ನಾವು ಹಲವಾರು ಒಳ್ಳೆಯ ಅಂಶಗಳಲ್ಲಿ ಯಶಸ್ಸು ಕಂಡಿರುತ್ತೇವೆ, ನಮಗೆ ನಮ್ಮದೇ ಆದ ಯೋಜನೆಗಳಿರುತ್ತವೆ, ಅದಕ್ಕೆ ನಾವು ಅಂಟಿಕೊಂಡಿರುತ್ತೇವೆ. ನಾವು ದಾಳಿ ಮತ್ತು ರಕ್ಷಣೆ ಎರಡೂ ವಿಭಾಗಗಳಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿದೆ, ನಾವು ಆ ಬಗ್ಗೆ ಕಾರ್ಯಪ್ರವ್ರತ್ತರಾಗಿದ್ದೇವೆ. ನಾಳೆಯ ಪಂದ್ಯ ಕಠಿಣ ಸವಾಲಾಗಲಿದೆ,'' ಎಂದರು.