ಮುಂಬೈ, ಫೆಬ್ರವರಿ 22: ಲೂಸಿಯಾನ್ ಗೊಯಿಯಾನ್ (83ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಮುಂಬೈ ಸಿಟಿ ಎಫ್ ಸಿ ತಂಡವನ್ನು 1-0 ಗೋಲಿನಿಂದ ಮಣಿಸಿದ ಚೆನ್ನೈಯಿನ್ ಎಫ್ ಸಿ ಪ್ರಸಕ್ತ ಸಾಲಿನ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ತಲುಪಿದೆ. ಕಳೆದ ವರ್ಷ ಮುಂಬೈ ತಂಡದಲ್ಲಿದ್ದ ಗೊಯೆನ್ ಈಗ ಚೆನ್ನೈ ತಂಡದ ನಾಯಕರಾಗಿದ್ದು ತಂಡಕ್ಕೆ ಐತಿಹಾಸಿಕ ಜಯ ತಂದಿತ್ತು. ಇದರೊಂದಿಗೆ ಮುಂಬೈ ಹಾಗೂ ಒಡಿಶಾ ತಂಡಗಳ ಸೆಮಿಫೈನಲ್ ಕನಸು ನುಚ್ಚು ನೂರಾಯಿತು. ಇನ್ನುಳಿದಿರುವುದು ಬರೇ ಔಪಚಾರಿಕ ಪಂದ್ಯಗಳು.
ಗೋಲಿಲ್ಲದ ಪ್ರಥಮಾರ್ಧ
ಎರಡೂ ತಂಡಗಳ ಡಿಫೆನ್ಸ್ ವಿಭಾಗ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದಾಗ ಅಲ್ಲಿ ಗೋಲಿಗೆ ಅವಕಾಶ ಕಡಿಮೆ ಇರುತ್ತದೆ. ಮುಂಬೈ ಹಾಗೂ ಚೆನ್ನೈಯಿನ್ ತಂಡಗಳ ನಡುವಿನ ಪ್ರಥಮಾರ್ಧ ಅತ್ಯಂತ ಆತಂಕದಲ್ಲೇ ಕೊನೆಗೊಂಡಿತು. 15ನೇ ನಿಮಿಷದಲ್ಲಿ ಮುಂಬೈ ಸಿಟಿ ತಂಡ ಪೆನಾಲ್ಟಿಗಾಗಿ ಮನವಿ ಮಾಡಿತ್ತು, ಆದರೆ ರೆಫರಿಗೆ ಪ್ರಮಾದದ ಅರಿವಾಗದ ಕಾರಣ ಅವಕಾಶದಿಂದ ವಂಚಿತವಾಯಿತು. 25ನೇ ನಿಮಿಷದಲ್ಲಿ ಅಮೈನ್ ಚೆರ್ಮಿಟಿ ಗೋಲ್ ಬಾಕ್ಸ್ ನ ಆರು ಅಡಿ ಅಂತರದಲ್ಲೇ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು, ಆದರೆ ಅವರು ಹೆಡರ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡರು. ಚೆನ್ನೈಯಿನ್ ತಂಡಕ್ಕೆ ಸಮರ್ಪಕವಾದ ಅವಕಾಶ ಸಿಕ್ಕಲಿಲ್ಲ, ಇದರಿಂದಾಗಿ ಪ್ರಥಮಾರ್ಧದ ಪಂದ್ಯ ಗೋಲಿಲ್ಲದೆ ಡ್ರಾಗೊಂಡಿತು. ಕುತೂಹಲ ದ್ವಿತಿಯಾರ್ಧಕ್ಕೆ ತಲುಪಿತು.
ಸೆಮಿಫೈನಲ್ ಗಾಗಿ ಫೈಟ್
ಹೀರೋ ಇಂಡಿಯನ್ ಸೂಪರ್ ಲೀಗ್ ನ ಸೆಮಿಫೈನಲ್ ತಲಪುವ ನಾಲ್ಕನೇ ತಂಡದ ತೀರ್ಮಾನ ಮುಂಬೈ ಸಿಟಿ ಎಫ್ ಸಿ ಮತ್ತು ಹಾಗೂ ಚೆನ್ನೈಯಿನ್ ಎಫ್ ತಂಡಗಳ ಹೋರಾಟದಲ್ಲಿ ತೀರ್ಮಾನವಾಗಲಿದೆ. ಇದು ಅತ್ಯಂತ ರೋಚಕ ಪಂದ್ಯವೆಂಬುದು ಇತ್ತಂಡಗಳಿಗಿರುವ ಜಯದ ಅನಿವಾರ್ಯತೆಯಿಂದ ಸ್ಪಷ್ಟವಾಗುತ್ತದೆ. ಮನೆಯಂಗಣವಾಗಿರುವುದರಿಂದ ಮುಂಬೈ ತಂಡಕ್ಕೆ ಹೆಚ್ಚಿನ ಲಾಭವಾಗುವುದು ಸಹಜ. ಯಾವುದೇ ಲೆಕ್ಕಾಚಾರ ಬೇಡ, ಇಂದು ಗೆಲ್ಲುವ ತಂಡವು ಸೆಮಿಫೈನಲ್ ಗೆ ಲಗ್ಗೆ ಇಡಲಿದೆ. ಗೋವಾ ವಿರುದ್ಧ ಸೋಲನುಐವಿಸಿದ ಬಳಕಿ ಮುಂಬೈ ತಂಡ ಈ ಪಂದ್ಯಕ್ಕೆ ಸಜ್ಜಾಯಿತು.
ಆದರೆ ಮನೆಯಂಗಣದಲ್ಲಿ ಮುಂಬೈ ಈ ಬಾರಿ ಮೂರು ಪಂದ್ಯಗಳನ್ನು ಗೆದ್ದು ಉತ್ತಮ ಪ್ರದರ್ಶನವನ್ನೇ ನೀಡಿದೆ. ಮುಂಬೈ ಫುಟ್ಬಾಲ್ ಅಭಿಮಾನಿಗಳ ಬೆಂಬಲ ಇನ್ನೊಂದೆಡೆ ತಂಡಕ್ಕೆ ಶ್ರೀರಕ್ಷೆ. ಅಮ್ರಿಂದರ್ ಸಿಂಗ್, ಮಾಟೋ ಗ್ರಾಜಿಕ್, ರೌಲಿನ್ ಬೋರ್ಗಸ್, ಮೊಟೌ ಸೌಗೌ ಅವರು ಮುಂಬೈ ಜಯಕ್ಕೆ ಶ್ರಮಿಸಬೇಕಾಗಿದೆ. ಏಕೆಂದರೆ ಇದುವರೆಗೂ ತಂಡದ ಯಶಸ್ಸಿನಲ್ಲಿ ಈ ಆಟಗಾರರು ಪ್ರಮುಖ ಪಾತ್ರವಹಿಸಿರುತ್ತಾರೆ.
ಇಂದು ಜಯದ ಹೊರತು ಬೇರೇನೂ ಬೇಕಾಗಿಲ್ಲ ಎಂದು ಕೋಚ್ ಜಾರ್ಜ್ ಕೋಸ್ಟಾ ಹೇಳಿರುವುದು ತಂಡದ ಗುರಿಯನ್ನು ಸ್ಪಷ್ಟಗೊಳಿಸಿದೆ. ಒಂದು ವೇಳೆ ಮುಂಬೈ ಸೋತರೆ ಚೆನ್ನೈಯಿನ್ ಹಾಗೂ ಒಡಿಶಾ ತಂಡಕ್ಕೆ ಅವಕಾಶ ತೆರದುಕೊಳ್ಳುತ್ತದೆ. ಚೆನ್ನೈಯಿನ್ ತಂಡ ಕಳೆದ ಆರು ಪಂದ್ಯಗಳಲ್ಲಿ ಐದರಲ್ಲಿ ಜಯ ಗಳಿಸಿದೆ. ಇಂದು ಡ್ರಾ ಸಾಧಿಸಿದರೆ ಚೆನ್ನೈಯಿನ್ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಸೆಮಿಫೈನಲ್ ತಲಪುವ ಅವಕಾಶವನ್ನು ಪಡೆಯಲಿದೆ.
ತಂಡದ ಕೋಚ್ ಬದಲಾದಾಗಿನಿಂದ ಚೆನ್ನೈಯಿನ್ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿ ಇಲ್ಲಿಯವರೆಗೂ ಸಾಗಿ ಬಂದಿದೆ, ಆಂಡ್ರೆ ಷೆಮುರಿ ಮತ್ತು ನೆರಿಜುಸ್ ವಾಸ್ಕಿಸ್ ಇದುವರೆಗೂ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ, ಅದೇ ರೀತಿಯ ಸಂಘಟಿತ ಹೋರಾಟ ಮುಂದುವರಿಸಿದರೆ ಮುಂಬೈ ವಿರುದ್ಧ ಜಯ ಗಳಿಸುವುದು ಕಷ್ಟವೆನಿಸದು.