ಉತ್ತಮ ಪ್ರದರ್ಶನ ತೋರಿಲ್ಲ
ಕ್ಲಬ್ ನಲ್ಲಿ ಆಡುತ್ತಿರುವ ಭಾರತೀಯ ಆಟಗಾರರು ಕೂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿಲ್ಲ. ಜೆಜೆ ಲಾಲ್ ಪೆಲ್ಖುವಾ, ಸಿ ಕೆ ವಿನೀತ್ ಹಾಗೂ ಬಲ್ವಂತ್ ಸಿಂಗ್ ಅವರಂಥ ಆಟಗಾರರು ಕೂಡ ಮಿಂಚುವಲ್ಲಿ ವಿಫಲರಾದರು. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.
ಸಮಸ್ಯೆಗಳನ್ನು ಎದುರಿಸಿತ್ತು
ಒಡಿಶಾ ಕೂಡ ಈ ಋತುವಿನಲ್ಲಿ ಅದೇ ರೀತಿಯ ಸಮಸ್ಯೆಗಳನ್ನು ಎದುರಿಸಿತ್ತು. ಡಿಗೋ ಮೌರಾಸಿಯೋ ಹೊರತಾಗಿ ಇತರ ಆಟಗಾರರು ಗೋಲು ಗಳಿಸಿರಲಿಲ್ಲ. ತಂಡ ಗಳಿಸಿದ ಒಟ್ಟು ಗೋಲುಗಳಲ್ಲಿ ಶೇ 75ರಷ್ಟನ್ನು ಮೌರಾಸಿಯೊ ಒಬ್ಬರೇ ಗಳಿಸಿರುತ್ತಾರೆ. ತಮ್ಮ ತಂಡವು ಮಾಡಿರುವ ತಪ್ಪುಗಳಿಂದ ಪಾಠ ಕಲಿಯಲಿದೆ ಎಂದು ನಂಬಿಕೆ ಇಟ್ಟಿರುವ ಕೋಚ್ ಸ್ಟೀವನ್ ಡಯಾಸ್, ಮುಂದಿನ ಋತುವಿನಲ್ಲಿ ತಮ್ಮತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದಿದ್ದಾರೆ. " ನೀವು ಒಂದು ಋತುವಿನಲ್ಲಿ ಕೆಟ್ಟ ಪ್ರದರ್ಶನ ತೋರಿರಬಹುದ, ಅದೇ ರೀತಿ ಕಲಿಯಲು ಬಹಳ ಅವಕಾಶ ಸಿಕ್ಕಿದೆ. ಈ ಋತು ನಮ್ಮ ಪಾಲಿಗೆ ಬಹಳ ನಿರಾಸೆಯನ್ನುಂಟುಮಾಡಿದೆ. ಇಲ್ಲಿರುವ ತಪ್ಪುಗಳನ್ನು ಸರಿಪಡಿಸಕೊಂಡು ಮುಂದಿನ ವರ್ಷ ಬಲಿಷ್ಠರಾಗಿ ಬರುವೆವು," ಎಂದರು.
ಕ್ಲೀನ್ ಶೀಟ್ ನಲ್ಲೂ ಕಳಪೆ
ಒಡಿಶಾ ತಂಡ ಸತತ ಹತ್ತು ಪಂದ್ಯಗಳಲ್ಲಿ ಜಯ ಕಾಣದೆ ಸಾಗಿ ಬಂದಿದೆ. ಅತಿ ಕಡಿಮೆ ಕ್ಲೀನ್ ಶೀಟ್ ನಲ್ಲೂ ತಂಡ ಕಳಪೆಯಾಗಿದೆ. ಈ ಪಂದ್ಯದಲ್ಲಿ ಜಯ ಅಥವಾ ಸೋಲು ಯಾವುದೇ ರೀತಿಯ ಪರಿಣಾಮಬೀರದು, ಆದರೆ ಗೌರವಕ್ಕಾಗಿ ಆಡಲಿವೆ. ಆದರೆ ಈ ಪಂದ್ಯದಲ್ಲಿ ಜಯ ಗಳಿಸುವುದು ನಮ್ಮ ಗುರಿಯಾಗಿದೆ ಎಂದು ಡಯಾಸ್ ಹೇಳಿದ್ದಾರೆ. "ನಾವು ಈ ಪಂದ್ಯವನ್ನು ಗೆಲ್ಲಲಿದ್ದೇವೆ, ಗೆಲ್ಲುವುದಕ್ಕಾಗಿಯೇ ಬಂದಿದ್ದೇವೆ. ಜಯದೊಂದಿಗೆ ಋತುವನ್ನು ಮುಗಿಸಲಿದ್ದೇವೆ, ನಾವು ಉತ್ತಮವಾಗಿಯೇ ಆಡಲಿದ್ದೇವೆ," ಎಂದರು.