ಪೆನಾಲ್ಟಿ ಪ್ರವೇಶದ ಮೇಲೆ ಹೆಚ್ಚು ನಂಬಿಕೆ ಇಟ್ಟಿಲ್ಲ
'ನಾವು ಪೆನಾಲ್ಟಿ ಪ್ರವೇಶದ ಮೇಲೆ ಹೆಚ್ಚು ನಂಬಿಕೆ ಇಟ್ಟಿಲ್ಲ, ಏಕೆಂದರೆ ಇದು ಅನೇಕ ಬಾರಿ ಲಾಟರಿಯಾಗಿ ಪರಿಣಮಿಸುತ್ತದೆ. ಒಂದು ಬಾರಿ ಚೆಂಡನ್ನು ನೆಟ್ಗೆ ತಲುಪಿಸಿದ್ದು ಖುಷಿ ಕೊಟ್ಟಿದೆ. ಐಎಸ್ಎಲ್ ಫೈನಲ್ನಲ್ಲಿ ಇದುವರೆಗೂ 14 ಗೋಲುಗಲು ದಾಖಲಾಗಿದೆ, ಅದರಲ್ಲಿ ನಿನ್ನೆಯ ಗೋಲು ಅತ್ಯಂತ ಅದ್ಭುತವಾದದು, ಈ ಬಗ್ಗೆ ನಾವು ಕಠಿಣ ಶ್ರಮವಹಿಸಿದ್ದೇವೆ,‘ ಎಂದು ಸ್ಪೇನ್ ಮೂಲದ ಕೋಚ್ ಹೇಳಿದರು.
ಗೋವಾ ತಂಡಕ್ಕೆ ಗೋಲು ಗಳಿಸಲು ಹೆಚ್ಚಿನ ಅವಕಾಶ ಸಿಗಲಿಲ್ಲ
ಈ ಋತುವಿನಲ್ಲಿ ಬೆಂಗಳೂರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಲ್ಬರ್ಟ್ ಸರಾನ್ ಅವರನ್ನು ಕೈ ಬಿಟ್ಟಿರುವುದು ಅಪಾಯದ ತೀರ್ಮಾನವಾಗಿತ್ತು. ಆದರೆ ಅದು ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರಿತು.
‘ಆ ಡಿಫೆನ್ಸ್ ವಿರುದ್ಧ ಆಡುವುದು ಅಪಾಯಕಾರಿ, ಅಲ್ಪರ್ಟ್ ಸರಾನ್ ನಮ್ಮ ಪಾಲಿಗೆ ಅಮೂಲ್ಯ ಆಟಗಾರ, ‘ಭಾರತದ ಡಿಫೆಂಡರ್ಗಳಾದ ರಾಹುಲ್ ಭಿಕೆ, ನಿಶು ಕುಮಾರ್ ಹಾಗೂ ಹರ್ಮನ್ಜೋತ್ ಖಬ್ರಾ ಅವರು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿರುವುದು ಖುಷಿ ಪಟ್ಟಿದೆ. ಗೋವಾ ತಂಡಕ್ಕೆ ಗೋಲು ಗಳಿಸಲು ಹೆಚ್ಚಿನ ಅವಕಾಶ ಸಿಗಲಿಲ್ಲ, ಫೆರಾನ್ ಕೊರೊಮಿನಾಸ್ ನಮ್ಮ ವಿರುದ್ಧ ನಡೆದ ಮೂರು ಪಂದ್ಯಗಳಲ್ಲಿ ಅಷ್ಟು ಪರಿಣಾಮಕಾರಿಯಾಗಿ ಆಡಿರಲಿಲ್ಲ.‘ ಎಂದು ಕ್ವಾಡ್ರಾಟ್ ಹೇಳಿದರು.
ಕೋಚ್ ಮಾಡಿದ ಬದಲಾವಣೆ ಮೆಚ್ಚಿದ ನಾಯಕ ಛೆಟ್ರಿ
ತಂಡದ ನಾಯಕ ಸುನಿಲ್ ಛೆಟ್ರಿ ಕೂಡ ತಂಡದಲ್ಲಿ ಕೋಚ್ ಮಾಡಿರುವ ಬದಲಾವಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರೋಕಾ ಅವರ ತರಬೇತಿಯಲ್ಲಿ ಆಡುತ್ತಿರುವುದಕ್ಕೂ ಕ್ವಾಡ್ರಾಟ್ ಅವರ ತರಬೇತಿಯಲ್ಲಿ ಆಡಿದ ತಂಡಕ್ಕೂ ವ್ಯತ್ಯಾಸವಿದೆ. ಈ ತಂಡ ಹೆಚ್ಚು ಪ್ರಗತಿಶೀಲವಾಗಿದೆ,‘ ಎಂದು ಅವರು ಹೇಳಿದ್ದಾರೆ. ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಕೂಡ ತಮ್ಮ ತಂಡದ ಆಟಗಾರರ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಸಮಯದ ಪ್ರಥಮಾರ್ಧದಲ್ಲಿ ಅಹಮ್ಮದ್ ಜಾಹೋವ್ ಅವರಿಗೆ ರೆಡ್ ಕಾರ್ಡ್ ಸಿಕ್ಕಿದ್ದು ಪಂದ್ಯದ ಗತಿಯನ್ನೇ ಬದಲಾಯಿಸಿತು ಎಂದು ಗೋವಾದ ಕೋಚ್ ಹೇಳಿದ್ದಾರೆ.
ನಮ್ಮ ತಂಡದ ಆಟಗಾರರು ತೋರಿದ ಸಾಧನೆಯ ಬಗ್ಗೆ ಖುಷಿ ಇದೆ
‘ಹೆಚ್ಚುವರಿ ಸಮಯದ ಪ್ರಥಮಾರ್ಧದಲ್ಲಿ ನಾವು ಒಬ್ಬ ಆಟಗಾರರನ್ನು ಕಳೆದುಕೊಂಡಿದ್ದು ಪಂದ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿತು, ಅತ್ಯಂತ ರೋಚಕ ಹಂತದಿಂದ ಕೂಡಿದ್ದ ಪಂದ್ಯ, ಅಲ್ಪ ಬದಲಾವಣೆ ಪಂದ್ಯದ ಗತಿಯನ್ನೇ ಬದಲಾಯಿಸಿತು. ರೆಡ್ ಕಾರ್ಡ್ ನಮ್ಮನ್ನು ಅಂಗವಿಕಲರನ್ನಾಗಿ ಮಾಡಿತು, ಬೆಂಗಳೂರು ತಂಡ ನಮಗಿಂತ ಉತ್ತಮವಾಗಿ ಕಾಣಲಿಲ್ಲ, ಅದೇ ರೀತಿ ನಮ್ಮ ತಂಡ ಕೂಡ ಬೆಂಗಳೂರಿಗಿಂತ ಉತ್ತಮವಾಗಿ ಕಾಣಲಿಲ್ಲ, ಅದೊಂದು ಉತ್ತಮ ಪಂದ್ಯವಾಗಿತ್ತು, ಬೆಂಗಳೂರು ತಂಡಕ್ಕೆ ನಮ್ಮ ನೈಜ ಆಟವನ್ನು ನಿಯಂತ್ರಿಸಲಾಗಲಿಲ್ಲ, ನಾವು ಹೇಗೆ ಆಡಬೇಕೆಂದು ತೀರ್ಮಾನಿಸಿದ್ದೆವೋ ಅದೇ ರೀತಿಯಲ್ಲಿ ಆಡಿದೆವು, ನಮ್ಮ ತಂಡದ ಆಟಗಾರರು ತೋರಿದ ಸಾಧನೆಯ ಬಗ್ಗೆ ಖುಷಿ ಇದೆ, ‘ ಎಂದು ಲೊಬೆರಾ ಹೇಳಿದ್ದಾರೆ.