ಜಯದ ನಿರೀಕ್ಷೆ
ಕೇರಳ ಬ್ಲಾಸ್ಟರ್ಸ್ ಹಾಗೂ ಈಸ್ಟ್ ಬೆಂಗಾಲ್ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ ನ 59ನೇ ಪಂದ್ಯದಲ್ಲಿ ಜಯದ ನಿರೀಕ್ಷೆ ಹೊತ್ತು ಅಂಗಣಕ್ಕಿಳಿದವು. ಲೀಗ್ ನಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಇತ್ತಂಡಗಳು 1-1 ಡ್ರಾದಲ್ಲಿ ಸಮಬಲ ಸಾಧಿಸಿದ್ದವು. ಜೇಕ್ಸನ್ ಸಿಂಗ್ ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತ್ತು. ಕಳೆದ ಐದು ಪಂದ್ಯಗಳಲ್ಲಿ ಈಸ್ಟ್ ಬೆಂಗಾಲ್ ಸೋಲು ಅನುಭವಿಸಿರಲಿಲ್ಲ. ಅಂಕಿತ್ ಮುಖರ್ಜಿ ಹಾಗೂ ರಾಜು ಗಾಯಕ್ವಾಡ್ ಈಸ್ಟ್ ಬೆಂಗಾಲ್ ತಂಡದ ಡಿಫೆನ್ಸ್ ವಿಭಾಗದ ಆಧಾರ ಸ್ತಂಭ ಎನಿಸಿದ್ದಾರೆ.
ತಂಡದ ಶಕ್ತಿಯನ್ನು ಹೆಚ್ಚಿಸಿದೆ
ಎನೊಬಾಖರ್ಸ್ ಅವರ ಆಗಮನ ಈಸ್ಟ್ ಬೆಂಗಾಲ್ ತಂಡದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆ ಬಳಿಕ ಈಸ್ಟ್ ಬೆಂಗಾಲ್ ತಂಡ ಪ್ರತಿಯೊಂದು ಪಂದ್ಯದಲ್ಲೂ ಗೋಲು ಗಳಿಸಿರುವುದು ಗಮನಾರ್ಹ. ದೇವಜಿತ್ ಮಜುಂದಾರ್ ಗೋಲ್ ಕೀಪಿಂಗ್ ನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದು, ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದನ್ನು ಮರೆಯುವಂತಿಲ್ಲ. ಜೆಮ್ಷೆಡ್ಪುರ ವಿರುದ್ಧದ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕೇರಳ ಬ್ಲಾಸ್ಟರ್ಸ್ ಮತ್ತೊಂದು ಪಂದ್ಯವನ್ನು ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಆ ಪಂದ್ಯದಲ್ಲಿ ಜೋರ್ಡನ್ ಮರ್ರೆ ಎರಡು ಗೋಲುಗಳನ್ನು ಗಳಿಸಿ ತಮ್ಮ ಗೋಲಿನ ಸಂಖ್ಯೆಯನ್ನು 5ಕ್ಕೆ ಏರಿಸಿಕೊಂಡಿದ್ದರು.
ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಬ್ಲಾಸ್ಟರ್ಸ್ ಪರ ಅತಿ್ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತಿಮ ಕ್ಷಣದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸುವ ಕೇರಳ ಬ್ಲಾಸ್ಟರ್ಸ್ ಅಂತಿಮ 15 ನಿಮಿಷಗಳ ಆಟದಲ್ಲಿ ಇದುವರೆಗೂ 6 ಗೋಲುಗಳನ್ನು ಗಳಿಸಿದೆ. ರಾಬಿ ಫ್ಲವರ್ ಪಡೆ ಅಜೇಯ ಓಟಕ್ಕೆ ಕಿಬು ವಿಕುನಾ ಪಡೆ ಯಾವ ರೀತಿಯಲ್ಲಿ ಬ್ರೇಕ್ ನೀಡುತ್ತದೆ ಎಂಬುದು ಕುತೂಹಲದ ಅಂಶ.