ಯಾರೂ ಊಹಿಸಿರಲಿಲ್ಲ
ಐಎಸ್ಎಲ್ ಆರಂಭಗೊಳ್ಳುವುದಕ್ಕೆ ಮೊದಲು ನಾರ್ತ್ ಈಸ್ಟ್ ತಂಡವನ್ನು ಗಮನಿಸಿದವರು ಈ ತಂಡ ಇತಿಹಾಸ ಬರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈ ಋತು ಅಂತ್ಯಗೊಳ್ಳುಲು ಸಮೀಪಿಸುತ್ತಿದ್ದಂತೆ ನಾರ್ತ್ ಈಸ್ಟ್ ತಂಡ ಪ್ಲೇ ಆಫ್ ಹಂತವನ್ನು ತಲುಪಿತ್ತಲ್ಲದೆ, ಫೈನಲ್ ಹತ್ತಿರ ಲಗ್ಗೆ ಇಟ್ಟಿತು. ಗಾಯದ ಸಮಸ್ಯೆ ಇಲ್ಲದೆ ಇರುತ್ತಿದ್ದರೆ ನಾರ್ತ್ ಈಸ್ಟ್ನ ತಂಡದ ಬಗ್ಗೆ ಬೆರೆಯೇ ಕತೆ ಬರೆಯಬೇಕಾಗಿರುತ್ತಿತ್ತು. ಬಾರ್ತಲೋಮ್ಯೊ ಒಗ್ಬಚೆ ಹಾಗೂ ರೌಲಿನ್ ಬೋರ್ಜಸ್ ಅವರ ಅನುಪಸ್ಥಿತಿಯಲ್ಲಿ ಮೊದಲ ಸೆಫೈನಲ್ನ ದ್ವಿತೀಯ ಅವಧಿಯನ್ನು ಪೂರ್ಣಗೊಳಿಸಿತ್ತು. ಅದೇ ರೀತಿ ಬೆಂಗಳೂರು ವಿರುದ್ಧ ನಡೆದ ಎರಡನೇ ಹಂತದ ಸೆಫೈನಲ್ನಲ್ಲಿ ತಂಡದ ಭರವಸೆಯ ಆಟಗಾರ ಫೆಡ್ರಿಕೊ ಗಲ್ಲೆಗೋ ಗಂಭೀರವಾಗಿ ಗಾಯಗೊಂಡಿದ್ದು ತಂಡಕ್ಕೆ ತುಂಬಲಾರದ ನಷ್ಟವಾಯಿತು. ಪ್ರಮುಖ ಮೂವರರು ಆಟಗಾರರಿಲ್ಲದೆ ಆಡಿರುವುದು ತಂಡದ ಯಶಸ್ಸಿಗೆ ಅಡ್ಡಿಯಾಯಿತು.
ಅಂತಿಮ ಫಲಿತಾಂಶದಲ್ಲಿ ಆಘಾತ
ಅಂತಿಮವಾಗಿ ಫಲಿತಾಂಶ ತಂಡಕ್ಕೆ ನೋವನ್ನುಂಟು ಮಾಡಿತ್ತು. ಬೆಂಗಳೂರು ತಂಡ ಫೈನಲ್ ತಲುಪಿತಲ್ಲದೆ, ಷೆಟೋರಿ ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ. ‘ಈ ಋತು ನಮ್ಮ ಪಾಲಿಗೆ ಸ್ಮರಣೀಯವಾದುದು. ಈ ಋತುವಿನಲ್ಲಿ ನಾವು ಸೋತಿರುವುದು ಕೇವಲ ನಾಲ್ಕು ಬಾರಿ. ಇದರರ್ಥ ನಾವು ಸಮರ್ಪಕ ರೀತಿಯಲ್ಲೇ ಆಡಿದ್ದೇವೆ. ನಾವು ಪ್ರತಿಯೊಂದು ಪಂದ್ಯಕ್ಕೂ ಉತ್ತಮ ಆಟಗಾರರನ್ನೇ ಆಯ್ಕೆ ಮಾಡಿದೆವು. ಅದೇ ರೀತಿ ನಮ್ಮ ತಂಡ ಉತ್ತಮವಾಗಿಯೇ ಆಡಿತ್ತು. ಇಂದು ಇಬ್ಬರು ಪ್ರಮುಕ ಆಟಗಾರರ ಅನುಪಸ್ಥಿತಿಯಲ್ಲಿ ನಾವು ಪಂದ್ಯವನ್ನು ಆರಂಭಿಸಿದೆವು. ತಂಡದಲ್ಲಿ ಸಮತೋಲನವೆಂಬುದು ಪ್ರಮುಖವಾದುದು,‘ ಎಂದು ಸೆಮಿಫೈನಲ್ನಿಂದ ನಿರ್ಗಮಿಸಿದ ನಂತರ ಷೆಟೋರಿ ಹೇಳಿದ್ದಾರೆ.
ಉತ್ತಮ ಆಯ್ಕೆ ಅವಕಾಶವಿರಲಿಲ್ಲ
ತಂಡದ ಆಯ್ಕೆಯ ವಿಷಯ ಬಂದಾಗ ಷೆಟೋರಿ ಅವರಿಗೆ ಉತ್ತಮವಾದುದನ್ನು ಆಯ್ಕೆ ಮಾಡುವ ಅವಕಾಶವೇ ಇರಲಿಲ್ಲ. ಏಕೆಂದರೆ ಪ್ರಸಿದ್ಧ ಆಟಗಾರರು ತಂಡದಲ್ಲಿರಲಿಲ್ಲ. ಯಾವಾಗಲೂ ಆಟಗಾರಲ್ಲಿ ಒಬ್ಬರಾದರರೂ ಗಾಯದ ಸಮಸ್ಯೆ ಅಥವಾ ಅಮಾನತಿನ ಶಿಕ್ಷೆಯನ್ನು ಎದುರಿಸುತ್ತಿದ್ದರು. ಆದರೆ ಉತ್ತಮ ರಣಂತ್ರ ಹಾಗೂ ಯೋಜನಾಬದ್ಧವಾದ ಆಟ ಈ ಎಲ್ಲ ಸಮಸ್ಯೆಗಳನ್ನು ಮೂಲೆಗುಂಪು ಮಾಡಿತ್ತು. ಷೆಟೋರಿಯ ತಂಡದ ಆಟಗಾರರು ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಅವರು ಎಲ್ಲ ರೀತಿಯ ಅಭಿನಂದನೆಗೆ ಅರ್ಹರು.
ಫೆರಾರಿಯನ್ನಾಗಿಸಿದ್ದು ವಿಶೇಷ
ಆರಂಭದಲ್ಲಿ ಮಿನಿ ಕೂಪರ್ ರೀತಿಯಲ್ಲಿ ಕಂಡು ಬಂದ ತಂಡವನ್ನು ಷೆಟೋರಿ ಬಲಿಷ್ಠ ಹಾಗೂ ಎಲ್ಲರ ಆಕರ್ಷಣೆಯ ಫೆರಾರಿಯನ್ನಾಗಿ ರೂಪುಗೊಳಿಸಿದ್ದು ವಿಶೇಷ. ಒಂದು ವೇಳೆ ಆ ತಂಡದ ಎಲ್ಲ ಆಟಗಾರರು ಫಿಟ್ ಆಗಿರುತ್ತಿದ್ದರೆ? ಮಿಕುವಿಗೆ ಡಿಕ್ಕಿ ಹೊಡೆದಾಗ ಗೆಲ್ಲೆಗೋ ಗಂಭೀರವಾಗಿ ಗಾಯಗೊಳ್ಳದೇ ಇರುತ್ತಿದ್ದರೆ ಏನಾಗುತ್ತಿತ್ತು?, ನಾರ್ತ್ ಈಸ್ಟ್ ತಂಡದ ಅಭಿಮಾನಿಗಳು ಈ ರೀತಿಯಲ್ಲಿ ಯೋಚಿಸುತ್ತಿರುವುದು ಸಹಜ. ಆದರೆ ಸೋಲಿನ ನಡುವೆಯೂ ನಾರ್ತ್ ಈಸ್ಟ್ ತಂಡ ಎಲ್ಲರ ಹೃದಯ ಗೆದ್ದಿರುವುದು ಸ್ಪಷ್ಟ.