ನವದೆಹಲಿ, ಏಪ್ರಿಲ್ 1: ಮಾರಕ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಾಕಿ ಇಂಡಿಯಾ ಆರ್ಥಿಕ ನೆರವು ನೀಡಿದೆ. ಸಂಕಷ್ಟದ ಸಮಯವನ್ನು ನಿಭಾಯಿಸುವುದಕ್ಕಾಗಿ ಹಾಕಿ ಇಂಡಿಯಾವು ಪ್ರಧಾನಿ ಪರಿಹಾರ ನಿಧಿ(ಪಿಎಂ ಕೇರ್ಸ್)ಗೆ 25 ಲಕ್ಷ ರೂ.ಗಳ ಹಣ ದೇಣಿಗೆ ನೀಡಿದೆ.
ಒಂದು ಟ್ವೀಟ್ ಮೂಲಕ ವಿಲನ್ ಆದ ಯುವರಾಜ್, ಹರ್ಭಜನ್ ಸಿಂಗ್
ಭಾರತದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ವಿಶೇಷ ತುರ್ತು ನಿಧಿ ಘೋಷಿಸಿದ ಬಳಿಕ ಹಾಕಿ ಇಂಡಿಯಾ(ಎಚ್ಐ)ದ ಕಾರ್ಯಕಾರಿ ಮಂಡಳಿ ದೇಣಿಗೆ ನೀಡುವ ನಿರ್ಧಾರ ಪ್ರಕಟಿಸಿದೆ. ಈಗಾಗಲೇ ಭಾರತದ ಬಹಳಷ್ಟು ಕ್ರೀಡಾ ಸಂಸ್ಥೆಗಳು ಮತ್ತು ಕ್ರೀಡಾಪಟುಗಳು ದೇಣಿಗೆ ಮೂಲಕ ನೆರವಿತ್ತಿದ್ದಾರೆ.
ಯಾರು ಶ್ರೇಷ್ಟ: ಲಾರಾ, ಸಚಿನ್ ಇವರಲ್ಲಿ ಶೇನ್ ವಾರ್ನ್ ಆರಿಸಿದ್ದು ಯಾರನ್ನು ಗೊತ್ತಾ?
ಇಂಥ ಕಷ್ಟಕರ ಸಂದರ್ಭದಲ್ಲಿ ಖಂಡಿತಾ ಇದು ನಾವೆಲ್ಲರೂ ನಾಗರಿಕರಾಗಿ ಒಂದಾಗಿ ಪಿಡುಗಿನ ವಿರುದ್ಧ ನಮ್ಮ ರಾಷ್ಟ್ರಕ್ಕೆ ನೆರವಾಗೋದು ನಮ್ಮ ಜವಾಬ್ದಾರಿಯಾಗಿದೆ. ಪಿಎಂ ಕೇರ್ಸ್ ಫಂಡ್ಗೆ 25 ಲಕ್ಷ ರೂ. ದೇಣಿಗೆ ನೀಡಲು ಹಾಕಿ ಇಂಡಿಯಾ ಸರ್ವಾನುಮತದಿಂದ ನಿರ್ಧರಿಸಿದೆ,' ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್ ಮುಷ್ತಾಕ್ ಅಹ್ಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಟಿ20 ವಿಶ್ವಕಪ್ 2020' ನನ್ನ ಕಡೇಯ ಅಂತಾರಾಷ್ಟ್ರೀಯ ಟೂರ್ನಿ: ಹಫೀಝ್
'ಹಾಕಿ ಇಂಡಿಯಾವು ಯಾವಾಗಲೂ ಈ ದೇಶದ ಜನರಿಂದ ಅಪಾರವಾದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತಿದೆ. ಈ ಸಾಂಕ್ರಾಮಿಕ ರೋಗದಿಂದ ವಿಜಯಶಾಲಿಯಾಗಿ ಹೊರಹೊಮ್ಮಲು ನಮ್ಮ ದೇಶವಾಸಿಗಳಿಗೆ ಸಹಾಯ ಮಾಡಲು ನಾವು ಏನು ಬೇಕಾದರೂ ನೆರವೀಯಲು ಸಿದ್ಧರಿದ್ದೇವೆ,' ಮುಂದುವರೆದ ಹೇಳಿಕೆಯಲ್ಲಿ ಎಚ್ಐ ತಿಳಿಸಿದೆ.