ವ್ಯರ್ಥವಾದ ರೋಹಿತ್ ಶ್ರಮ
ಪ್ರತೀ ಪಂದ್ಯದಲ್ಲೂ ಬೆಂಗಳೂರು ತಂಡದ ಮುಂಚೂಣಿಯ ಆಟಗಾರ ರೋಹಿತ್ ಕುಮಾರ್ ತಂಡದ ಬೆಂಗಾವಲಿಗೆ ನಿಲ್ಲುತ್ತಿದ್ದು ಕಾಣಿಸುತ್ತಿದೆ. ಈ ಪಂದ್ಯದಲ್ಲೂ ರೋಹಿತ್ ಒಟ್ಟು 13 ಪಾಯಿಂಟ್ ಗಳನ್ನು ತಂಡಕ್ಕೆ ಸೇರಿಸಿದರಾದರೂ ಅವರಿಂದ ಬೆಂಗಳೂರನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.
ಪವನ್ ಕೊಸರಾಟ
ಬೆಂಗಳೂರಿನ ಮತ್ತೊಬ್ಬ ಆಟಗಾರ ಪವನ್ ಕುಮಾರ್ ಕೂಡ ತಂಡದ ಗೆಲುವಿನ ನಿಟ್ಟಿನಲ್ಲಿ ಕೊಸರಾಡಿದರು. ಪವನ್ 6 ಅಂಗಳನ್ನು ತಂಡದ ಖಾತೆಗೆ ಸೇರಿಸಿದರು. ಆದರೆ ಇನ್ನುಳಿದ ಆಟಗಾರರ ಬೆಂಬಲ ತಂಡಕ್ಕೆ ಗಮನಾರ್ಹವೆನಿಸಲಿಲ್ಲ.
ಬೆನ್ನು ಬಿದ್ದ ಪಾಟ್ನಾ
ಬಿ ಝೋನ್ ಪಾಯಿಂಟ್ ಟೇಬಲ್ ನಲ್ಲಿ ಬೆಂಗಳೂರು ಈಗಲೂ ಅಗ್ರ ಸ್ಥಾನದಲ್ಲಿದೆ. ಆದರೆ ಪಾಟ್ನಾ ಪೈರೇಟ್ಸ್ ಬೆಂಗಳೂರಿನ ಬೆನ್ನು ಬಿದ್ದಿದೆ. ಸೋಮವಾರ (ನವೆಂಬರ್ 26) ಬೆಂಗಳೂರಿಗೆ ಮತ್ತೆ ಯುಪಿ ಯೋಧಾ ಎದುರು ಪಂದ್ಯವಿದ್ದು ಅದನ್ನು ಗೆಲ್ಲಬೇಕಿದೆ.
ಒಗ್ಗಟ್ಟು ಪಾಟ್ನಾದ ಬಲ
ಈಚಿನ ಎಲ್ಲಾ ಪಂದ್ಯದಲ್ಲೂ ಪಾಟ್ನಾ ಮೈಲುಗೈ ಸಾಧಿಸುವಲ್ಲಿ ತಂಡದ ಒಗ್ಗಟ್ಟಿನಾಟ ಪರಿಣಾಮಕಾರಿಯೆನಿಸಿದ್ದು ಕಂಡು ಬಂದಿದೆ. ಬೆಂಗಳೂರಿನ ಸೋಲಿಗೂ ಒಗ್ಗಟ್ಟಿನ ಕೊರತೆಯೇ ಕಾರಣ. ಅಂದರೆ ತಂಡದ ಮುಂಚೂಣಿ ಆಟಗಾರರ ಹೊರತಾಗಿ ಇತರ ಆಟಗಾರರ ಬೆಂಬಲವೂ ತಂಡಕ್ಕೆ ಬೇಕು. ಕಬಡ್ಡಿ ಆಟ ಇಡೀ ತಂಡದ ಬೆಂಬಲವನ್ನು ಬೇಡುವುದರಿಂದ ಇಡೀ ತಂಡ ಒಟ್ಟಾಗಿ ಹೆಚ್ಚು ಅಂಕ ಕದ್ದಷ್ಟು ಅನುಕೂಲವಾಗಲಿದೆ.