ನವದೆಹಲಿ, ಏಪ್ರಿಲ್ 2: ಭಾರತದ ಶೂಟರ್ ಅಪೂರ್ವಿ ಚಂದೇಲಾ, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವ ಮೂಲಕ ಮಾರಕ ಕೊರೊನಾವೈರಸ್ನತ್ತ ಗುರಿ ಇಟ್ಟಿದ್ದಾರೆ. ಭಾರತದ ಭರವಸೆಯ ಶೂಟರ್ ಆಗಿ ಗುರುತಿಸಿಕೊಂಡಿರುವ ಚಂದೇಲಾ, ಕೊರೊನಾ ಹತ್ತಿಕ್ಕಲು 5 ಲಕ್ಷ ರೂ. ಆರ್ಥಿಕ ನೆರವಿತ್ತಿದ್ದಾರೆ.
ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಆಯ್ಕೆಯನ್ನೇ ವಿರೋಧಿಸಿದ್ದ ಧೋನಿ
ಅಪೂರ್ವಿ ಚಂದೇಲಾ ದೇಣಿಗೆ ನೀಡಿರುವ 5 ಲಕ್ಷ ರೂ.ನಲ್ಲಿ 3 ಲಕ್ಷ ರೂ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ, 2 ಲಕ್ಷ ರೂ. ರಾಜಸ್ಥಾನ್ ರಿಲೀಫ್ ಫಂಡ್ಗೆ ಸೇರಲಿದೆ. ಇದರೊಂದಿಗೆ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೆರವಿತ್ತಿರುವ ಭಾರತೀಯ ಕ್ರೀಡಾಪಟುಗಳ ಸಾಲಿನಲ್ಲಿ ಅಪೂರ್ವಿ ಕೂಡ ಸೇರಿಕೊಂಡಿದ್ದಾರೆ.
ರಿಷಭ್ ಪಂತ್ ಫುಲ್ ರೋಸ್ಟ್ ಮಾಡಿದ ಹಿಟ್ಮ್ಯಾನ್ ರೋಹಿತ್ ಶರ್ಮಾ!
ನೆರವು ನೀಡಿರುವುದನ್ನು ಅಪೂರ್ವಿ ಟ್ವೀಟ್ ಮೂಲಕ ತಿಳಿಸಿದ್ದಾರೆ. 'ನಾನು 3 ಲಕ್ಷ ರೂ.ವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ, 2 ಲಕ್ಷ ರೂ.ವನ್ನು ರಾಜಸ್ಥಾನ್ ಚೀಫ್ ಮಿನಿಸ್ಟರ್ಸ್ ರಿಲೀಫ್ ಫಂಡ್ಗೆ ದೇಣಿಗೆ ನೀಡಿದ್ದೇನೆ. ನಾವೆಲ್ಲರೂ ಕೊರೊನಾವೈರಸ್ ಪಿಡುಗಿನ ವಿರುದ್ಧ ಹೋರಾಡಬೇಕಿದೆ,' ಎಂದು ಅಪೂರ್ವಿ ತನ್ನ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಡಾನ್ ಬ್ರಾಡ್ಮನ್ ಬಗ್ಗೆ ತಿಳಿಯಬೇಕಾದ 5 ಕುತೂಹಲಕಾರಿ ಸಂಗತಿಗಳು!
ಇದಕ್ಕೂ ಮುನ್ನ ಭಾರತದ ಮತ್ತೊಬ್ಬ ಮಹಿಳಾ ಶೂಟರ್ ಮನು ಭಾಕರ್ ಕೂಡ ಕೊರೊನಾ ವಿಪತ್ತು ಪರಿಹಾರಕ್ಕಾಗಿ 1 ಲಕ್ಷ ರೂ.ವನ್ನು ಹರ್ಯಾಣ ರಾಜ್ಯದ ಪರಿಹಾರ ನಿಧಿಗೆ ನೀಡಿದ್ದರು. ಭಾರತದ ಅನೇಕ ಕ್ರೀಡಾಪಟುಗಳು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಸೇರಿಸಿದ್ದಾರೆ. ಈ ಕ್ರೀಡಾಪಟುಗಳಲ್ಲಿ ಕ್ರಿಕೆಟಿಗರೇ ಹೆಚ್ಚು.