ಮೈಸೂರು, ಜುಲೈ 23: ಮೈಸೂರು ಚೆಸ್ ಸೆಂಟರ್, ಕರ್ನಾಟಕ ರಾಜ್ಯ ಚದುರಂಗ ಸಂಸ್ಥೆಯ ಸಹಯೋಗದೊಂದಿಗೆ ಆಗಸ್ಟ್ 03ರಿಂದ 05ರವರೆಗೆ ರಾಜ್ಯದ 17 ವರ್ಷದೊಳಗಿನ ಬಾಲಕ ಬಾಲಕಿಯರ ಚದುರಂಗ ಸ್ಪರ್ಧೆ ಆಯೋಜಿಸಿದೆ.
ಪಂದ್ಯಾವಳಿಯು ಕೃಷ್ಣಮೂರ್ತಿಪುರಂನ ಬಲ್ಲಾಳ್ ವೃತ್ತದ ಬಳಿಯಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ಜರುಗಲಿದೆ.
ಸ್ಮೃತಿ ಮಂದಾನ ಸ್ಫೋಟಕ 48 ರನ್, ಡೈಮಂಡ್ಸ್ ಸೋಲಿಸಿದ ಸ್ಟೋರ್ಮ್
ಅಗ್ರ 2 ಸ್ಪರ್ಧಾಳುಗಳು ರಾಷ್ಟ್ರೀಯ 17 ವರ್ಷದೊಳಗಿನ ಬಾಲಕ ಬಾಲಕಿಯರ ಫಿಡೆ ರೇಟಿಂಗ್ ಚದುರಂಗ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ವಿಜೇತರಿಗೆ 30ಸಾವಿರ ರೂ. ನಗದು ಬಹುಮಾನ ಹಾಗು ವಿವಿಧ ವಿಭಾಗಗಳಲ್ಲಿ ಪಾರಿತೋಷಕ ಫಲಕಗಳನ್ನು ನೀಡಲಾಗುತ್ತದೆ.
ಆಸಕ್ತರು ಪ್ರವೇಶ ಶುಲ್ಕ ರೂ.550ನೊಂದಿಗೆ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಬಹುದು. ಪ್ರವೇಶ ಕೆಳುಹಿಸಲು ಕೊನೆಯ ಆಗಸ್ಟ 1. ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲತಾಣ mysorechess.in ಕ್ಕೆ ಭೇಟಿ ನೀಡಬಹುದು ಎಂದು ಮೈಸೂರು ಚೆಸ್ ಸೆಂಟರ್ ನ ನಿರ್ದೇಶಕ ನಾಗೆಂದ್ರ ಮುರಳೀಧರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.