ಬೆಂಗಳೂರು, ಜನವರಿ 15: ಅಸ್ಸಾಂನ ಗುವಾಹಟಿಯಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ 2020 ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದ ಅಂಡರ್ 17 ತ್ರಿವಿಧ ಜಿಗಿತ (ತ್ರಿಪಲ್ ಜಂಪ್) ಸ್ಪರ್ಧೆಯಲ್ಲಿ ಕರ್ನಾಟಕದ, ಉಡುಪಿ ಜಿಲ್ಲೆಯ ಅಖಿಲೇಶ್ ಚಿನ್ನದ ಪದಕ ಗೆದ್ದಿದ್ದಾರೆ.
ICC Awards: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಪ್ರಶಸ್ತಿ ಗೆದ್ದ ಎಲ್ಲರ ಪಟ್ಟಿ
ಉಡುಪಿಯ ಕೋಟದಲ್ಲಿರುವ ವಿವೇಕಾ ವಿದ್ಯಾ ಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಅಖಿಲೇಶ್, ಜನವರಿ 14ರಂದು ನಡೆದಿದ್ದ ಅಂಡರ್ 17 ಬಾಲಕರ ವಿಭಾಗದ ತ್ರಿಪಲ್ ಜಂಪ್ನಲ್ಲಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.
ಭಾರತ vs ಆಸ್ಟ್ರೇಲಿಯಾ: ಕೊಹ್ಲಿ ನಿರ್ಧಾರಕ್ಕೆ ಮಾಜಿ ಆಟಗಾರರ ಅಸಮಾಧಾನ
ಕರ್ನಾಟಕ ಪ್ರತಿನಿಧಿಸಿ ಬಂಗಾರ ಜಯಿಸಿರುವ ಅಖಿಲೇಶ್ಗೆ ವಿದ್ಯಾ ಸಂಸ್ಥೆಯ ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. ಅಂಡರ್ 17 ತ್ರಿಪಲ್ ಜಂಪ್ನಲ್ಲಿ ತಮಿಳುನಾಡಿನ ಎಸ್ ಮಿಥಿಲೇಶ್ ಕುಮಾರ್ಗೆ ಬೆಳ್ಳಿ, ಅಸ್ಸಾಂನ ಜ್ವಾಂಗ್ಸರ್ ಬಾಸುಮತರಿಗೆ ಕಂಚು ಲಭಿಸಿತ್ತು.