ದಾಖಲೆ ಬರೆದ ಶ್ರೇಯಸ್ ಹೊಸೂರು
ಕರ್ನಾಟಕದ ಶ್ರೇಯಸ್ ಹೊಸೂರು ಇಷ್ಟು ದೊಡ್ಡ ಸವಾಲನ್ನು 13 ಗಂಟೆ 26 ನಿಮಿಷಗಳಲ್ಲಿಯೇ ಸಂಪೂರ್ಣವಾಗಿ ಮುಗಿಸಿದ್ದು, ಇದನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ರೈಲ್ವೆ ಇಲಾಖೆ ಅಧಿಕಾರಿ ಹಾಗೂ ಮೊದಲ ಕನ್ನಡಿಗ ಎಂಬ ದಾಖಲೆಯನ್ನು ಬರೆದಿದ್ದಾರೆ. ಜರ್ಮನಿಯಲ್ಲಿ ನಡೆದ ಈ ಕ್ರೀಡೆಯನ್ನು ಪೂರೈಸಲು ಸಾಮಾನ್ಯವಾಗಿ 16ರಿಂದ 17 ಗಂಟೆಗಳ ಕಾಲಾವಕಾಶವಿತ್ತು. ಆದರೆ ಇದಕ್ಕೂ ಮುನ್ನ ಈ ಸವಾಲನ್ನು ಪೂರ್ಣಗೊಳಿಸಿರುವ ಶ್ರೇಯಸ್ ಹೊಸೂರು ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಶ್ರೇಯಸ್ ಹೊಸೂರು ಕಿರುಪರಿಚಯ
ನಿವೃತ್ತ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಗೋಪಾಲ್ ಹೊಸೂರು ಅವರ ಪುತ್ರನಾಗಿರುವ ಶ್ರೇಯಸ್ ಹೊಸೂರು ಅವರು ಮೂಲತಃ ಧಾರವಾಡ ಜಿಲ್ಲೆಯವರು. 2012ರಲ್ಲಿ ರೈಲ್ವೆ ಅಧಿಕಾರಿಯಾದ ಇವರು ಪ್ರಸ್ತುತ ನೈರುತ್ಯ ರೈಲ್ವೆ, ಬೆಂಗಳೂರಿನಲ್ಲಿ ಆರ್ಥಿಕ ಸಲಹೆಗಾರ ಮತ್ತು ಮುಖ್ಯ ಖಾತಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
4 ಬಾರಿ ಹಾಫ್ ಐರನ್ಮ್ಯಾನ್ ಪೂರೈಸಿದ್ದ ಶ್ರೇಯಸ್
ಇನ್ನು 4 ಬಾರಿ ಹಾಫ್ ಐರನ್ಮ್ಯಾನ್ ಅನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದ ಶ್ರೇಯಸ್ ಹೊಸೂರು ಅವರು ಪೂರ್ಣ ಐರನ್ಮ್ಯಾನ್ ಟ್ರಯಥ್ಲಾನ್ ಪೂರೈಸಬೇಕೆಂದು ಹಾತೊರೆಯುತ್ತಿದ್ದರು. ಅವರ ಕನಸು ಈ ಬಾರಿ ನನಸಾಗಿದ್ದು, ತಮ್ಮ ಈ ಸಾಧನೆಯನ್ನು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಗೆ ಅರ್ಪಣೆ ಮಾಡುವುದಕ್ಕೆ ಇಚ್ಛೆ ಪಡುತ್ತೇನೆ ಎಂದು ಶ್ರೇಯಸ್ ಹೊಸೂರು ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.