ಏಪ್ರಿಲ್ 7,2016 ಕೊನೆಯ ದಿನ
ಓಪನ್ 10ಕೆಗೆ ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 7,2016 ಕೊನೆಯ ದಿನವಾಗಿದ್ದು, ಇದು ರನ್ನಿಂಗ್ ಸ್ಲಾಟ್ಸ್ ಲಭ್ಯತೆಯನ್ನು ಅವಲಂಭಿಸಿರುತ್ತದೆ. ಈ ಮಧ್ಯೆ ಇತರ ಮೂರು ವಿಭಾಗಗಳಿಗೆ ಏಪ್ರಿಲ್ 22, 2016 ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನವಾಗಿದೆ.
ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಟ ಪುನಿತ್ ರಾಜ್ ಕುಮಾರ್ ಅವರು ಬೆಂಗಳೂರು ವಲ್ಡ್ 10ಕೆಗೆ ತಮ್ಮ ಬೆಂಬಲ ವಿಸ್ತರಿಸಿದ್ದು, ಮತ್ತೆ ಸ್ಪರ್ಧಾಳುಗಳೊಂದಿಗೆ ಓಡಲಿದ್ದಾರೆ.ನಟ ಪುನಿತ್ ರಾಜ್ ಕುಮಾರ್ ಮಾತನಾಡಿ
ಟಿಸಿಎಸ್ ವಿಶ್ವ 10ಕೆ ಓಟ ಈಗ ನಮ್ಮ ಬೆಂಗಳೂರಿನ ಪರ್ಯಾಯ ಪದವಾಗಿ ಮಾರ್ಪಟ್ಟಿದೆ. ಹಲವು ವರ್ಷಗಳಿಂದ ಓಟಕ್ಕೆ ಬೇಕಾದ ಎಲ್ಲಾ ಸವಲತ್ತು ಗಳನ್ನು ನಮ್ಮ ನಗರ ಒಳಗೊಂಡಿದೆ, ಟಿಸಿಎಸ್ ವಿಶ್ವ 10ಕೆ ಇಡೀ ನಗರದ ಜತೆಗೆ ಹಣ ಸಂಗ್ರಹಿಸಲು ಹಲವು ದತ್ತಿ ಸಂಸ್ಥೆಗಳಿಗೆ ವೇದಿಕೆಯಾಗುತ್ತಿದೆ. ಬೆಂಗಳೂರಿಗರು ರನ್ನಿಂಗ್ ನಲ್ಲಿ ಪಾಲ್ಗೊಳ್ಳುವಂತೆ," ಕರೆ ನೀಡಿದ್ದಾರೆ.
ನೋಂದಾವಣೆ ಶುಲ್ಕ ಎಷ್ಟಿದೆ?
ಭಾರತೀಯರು ಸ್ರ್ಪಗಳು ಓಪನ್ 10ಕೆ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಳ್ಳಲು 1,250 ರೂ., ಮಜ್ಜ ರನ್ ಗೆ 800 ರೂ., ಹಿರಿಯ ನಾಗರಿಕ ರನ್ ಮತ್ತು ಚಾಂಪಿಯನ್ಸ್ ವಿತ್ ವಿಶೇಷ ಚೇತನರ ರನ್ ಗೆ 300 ರೂ.ಶುಲ್ಕ ಪಾವತಿಸಬೇಕಾಗಿದೆ. ವಿದೇಶಿ ಸ್ರ್ಪಗಳು ಓಪನ್ 10ಕೆ ವಿಭಾಗದಲ್ಲಿ 45 ಅಮೆರಿಕನ್ ಡಾಲರ್, ಮಜ್ಜ ರನ್ ವಿಭಾಗದಲ್ಲಿ 25 ಅಮೆರಿಕನ್ ಡಾಲರ್, ಹಿರಿಯ ನಾಗರಿಕ ಮತ್ತು ವಿಶೇಷ ಚೇತನರ ರನ್ ವಿಭಾಗದಲ್ಲಿ 10 ಅಮೆರಿಕ ಡಾಲರ್ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗಿದೆ.
ಈ ವರ್ಷದ ಓಟದ ವಿಶೇಷತೆ ಏನು?
ಪ್ರಶಸ್ತಿ ಮೊತ್ತ ಹೆಚ್ಚಳ: ಕಳೆದ ವರ್ಷದ ನೀಡಲಾದ ಪ್ರಶಸ್ತಿ ಮೊತ್ತಕ್ಕಿಂತ ಒಂಬತ್ತನೆ ಆವೃತ್ತಿಯಲ್ಲಿ ಒಟ್ಟಾರೆ ಪ್ರಶಸ್ತಿ ಮೊತ್ತವನ್ನು ಒಟ್ಟಾರೆ 1,97,768 ಅಮೆರಿಕನ್ ಡಾಲರ್ ಮೊತ್ತಕ್ಕೆ ವಿಸ್ತರಿಸಲಾಗಿದೆ. ಎರಡು ಆಕರ್ಷಣೆಯ ಬಹುಮಾನದ ವಿಭಾಗದಲ್ಲಿ ಕೂಟ ದಾಖಲೆ ಮುರಿದ ಎಲೈಟ್ ಓಟಗಾರರಿಗೆ ಹೆಚ್ಚುವರಿಯಾಗಿ ಉತ್ತೇಜನ ಬಹುಮಾನ ನೀಡಲಾಗುವುದು
ಬೋನಸ್ ನಿರ್ಮಿಸಿದವರಿಗೆ
ಹೊಸ ಕೂಟ ದಾಖಲೆ ಬೋನಸ್ ನಿರ್ಮಿಸಿದವರಿಗೆ ಎಲೈಟ್ ವಿಭಾಗ ಪುರುಷ ಮತ್ತು ಮಹಿಳೆಯರಿಗೆ 2,000 ಸಾವಿರ ಅಮೆರಿಕನ್ ಡಾಲರ್ ಮೊತ್ತ ಮತ್ತು ಭಾರತೀಯ ವಿಜೇತರಿಗೆ 50,000 ರೂ ಮೊತ್ತವನ್ನು ನೀಡಲಾಗುತ್ತದೆ. ಒಂದು ವೇಳೆ ಹಿಂದಿನ ಕೂಟದಾಖಲೆ ಮುರಿದ ಸ್ರ್ಪಗಳಿಗೆ ಎಲೈಟ್ ಪುರುಷ ಮತ್ತು ಮಹಿಳೆಯರಿಗೆ 2,000 ಸಾವಿರ ಅಮೆರಿಕನ್ ಡಾಲರ್ ಮತ್ತು ಭಾರತೀಯ ವಿಜೇತರಿಗೆ 50, ಸಾವಿರ ರೂಪಾಯಿ ನೀಡಲಾಗುತ್ತದೆ.
ಚಾರಿಟಿ ಡ್ರೈವ್ ಜತೆ ಸಂಬಂಧ
ಚಾರಿಟಿ ಡ್ರೈವ್ ಜತೆ ಸಂಬಂಧ ಹೊಂದಿರುವ ಟಿಸಿಎಸ್ ವಿಶ್ವ 10ಕೆ ಬೆಂಗಳೂರಿಗೆ ಭಾರತದ ಮುಂಚೂಣಿ ಕೇರ್ಸ್, ಕೂಟದ ಪರೋಪಕಾರ ಪಾಲುದಾರಿಕೆ ಸಂಸ್ಥೆಯಾಗಿದೆ. ಟಿಸಿಎಸ್ 10ಕೆ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ನಿಧಿ ಸಂಗ್ರಹ ವೇದಿಕೆಯಾಗಿದೆ. ವಿವಿಧ ಕಾರಣಗಳಿಗಾಗಿ ಎನ್ಜಿಒ-ಸರ್ಕಾರಿಯೇತರ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಮೊತ್ತ 20.29ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ದತ್ತಿ ಕೊಡುಗೆಗಳು ಸುಧಾರಿತ ರಚನೆ ಮುಂದುವರಿಯಲಿದ್ದು, ಬೆಂಗಳೂರು ನಗರ ಮತ್ತೊಮ್ಮೆ ತನ್ನ ಕೊಡುಗೆ ನೀಡುವ ಬಗ್ಗೆ ನಿರೀಕ್ಷಿಲಾಗಿದೆ.