ನವದೆಹಲಿ: ಸೋಮವಾರ (ಫೆಬ್ರವರಿ 1) 2021ರ ಕೇಂದ್ರದ ಬಜೆಟ್ ಮಂಡಣೆಯಾಗಿದೆ. ಕೊರೊನಾವೈರಸ್ ಪಿಡುಗಿನಿಂದ ಆರ್ಥಿಕವಾಗಿ ಹದಗೆಟ್ಟಿರುವ ವ್ಯವಸ್ಥೆಯ ಮಧ್ಯೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಕ್ರೀಡಾಕ್ಷೇತ್ರಕ್ಕೆ ಅಂತಹ ಆದ್ಯತೆ ನೀಡಲಾಗಿಲ್ಲ.
ವಿಜಯ್ ಹಜಾರೆ ಟ್ರೋಫಿಗೆ 22 ಮಂದಿಯ ತಂಡ ಪ್ರಕಟಿಸಿದ ಕರ್ನಾಟಕ
ನೂತನ ಬಜೆಟ್ನಲ್ಲಿ ಕ್ರೀಡಾ ಬಜೆಟನ್ನು 230.78 ಕೋ.ರೂ.ನಷ್ಟು ಕಡಿತಗೊಳಿಸಲಾಗಿದೆ. 2021-22ರ ಆರ್ಥಿಕ ವರ್ಷಕ್ಕೆ ಕ್ರೀಡಾಕ್ಷೇತ್ರಕ್ಕೆ 2596.14 ಕೋ.ರೂ. ಅಷ್ಟೇ ಮೀಸಲಿಡಲಾಗಿದೆ. ಕಳೆದ ವರ್ಷ ಸರ್ಕಾರ 2826.92 ಕೋ.ರೂ.ವನ್ನು ಕ್ರೀಡೆಗಾಗಿ ಮೀಸಲಿಟ್ಟಿತ್ತು.
ಕಳೆದ ವರ್ಷ ಬಜೆಟ್ ಮಂಡಣೆ ವೇಳೆ 2826.92 ಕೋ.ರೂ. ಮೀಸಲಿಡಲಾಗಿತ್ತಾದರೂ ಕೊರೊನಾವೈರಸ್ ಕಾರಣ ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ನಿಲುಗಡೆಯಾಗಿದ್ದರಿಂದ ಬಜೆಟ್ ಮೀಸಲು ಹಣವನ್ನು 1800.15 ಕೋ.ರೂ.ಗೆ ಮರುಘೋಷಿಸಲಾಗಿತ್ತು.
ಬಜೆಟ್ ಭಾಷಣದಲ್ಲೂ ಉಲ್ಲೇಖವಾಯಿತು ಆಸಿಸ್ ನೆಲದಲ್ಲಿ ಟೀಮ್ ಇಂಡಿಯಾದ ಸಾಧಿಸಿದ ದಿಗ್ವಿಜಯ
ಈ ಬಾರಿಯ ಕ್ರೀಡಾ ಬಜೆಟ್ನಲ್ಲಿ 657.71 ಕೋ.ರೂ. ಹಣವನ್ನು ಖೇಲೋ ಇಂಡಿಯಾ ಕಾರ್ಯಕ್ರಮಗಳಿಗಾಗಿ ಘೋಷಿಸಲಾಗಿದೆ.