ಮಂಗಳೂರು, ಜೂನ್ 13: ಸಬ್ ಜೂನಿಯರ್ ಮತ್ತು ಜೂನಿಯರ್ ಮಟ್ಟದ ಪಿಎಸ್ಎಮ್ ರಾಜ್ಯಮಟ್ಟದ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಯುಶ್ ಶೆಟ್ಟಿ ಪ್ರಶಸ್ತಿ ಗೆದ್ದುಕೊಂಡಿದ್ದಾನೆ. ಈತ 'ಬ್ಯಾಡ್ಮಿಂಟನ್ ಮಂಗಳೂರು' ಕ್ಲಬ್ ನ ಹಳೇ ವಿದ್ಯಾರ್ಥಿ.
ಆಯುಷ್ ಶೆಟ್ಟಿ ಫೈನಲ್ ನಲ್ಲಿ ತುಷಾರ್ ನನ್ನು 21-15, 21-14 ಸೆಟ್ ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾನೆ. ಅಷ್ಟೇ ಅಲ್ಲ ಅತ್ತ ನಿಕೋಲಸ್ ರಾಜ್ ಜತೆಗೂಡಿ ಡಬಲ್ಸ್ ಕಿರೀಟವನ್ನೂ ಆಯುಷ್ ಗೆದ್ದುಕೊಂಡಿದ್ದಾರೆ.

ಮಂಗಳೂರಿನ ಇತಿಹಾಸದಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಜೂನಿಯರ್ ಪ್ರಶಸ್ತಿ ಗೆದ್ದುಕೊಂಡ ಮೊದಲ ಬಾಲಕ ಎಂಬ ಕೀರ್ತಿಗೆ ಆಯುಶ್ ಶೆಟ್ಟಿ ಪಾತ್ರನಾಗಿದ್ದಾನೆ.
ಆಯುಷ್ ಕಾರ್ಕಳದ ಪ್ರಕೃತಿ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಯಾಗಿದ್ದು, ಆತನಿಗೆ ಬೆಂಗಳೂರಿನ ಮೋಹಿತ್ ಕಾಮತ್ ಮತ್ತು ಮಂಗಳೂರಿನ ಚೇತನ್ ಸಾಗರ್ ತರಬೇತಿ ನೀಡಿದ್ದಾರೆ.