
ಧ್ವನಿಯೆತ್ತುವವರನ್ನು ಗೌರವಿಸುತ್ತೇನೆ
'ಇಂಥ ಅನಿಷ್ಠದ ಬಗ್ಗೆ ಮುಂದೆ ಬಂದು ಮಾತನಾಡುವ ಧೈರ್ಯ ಮಾಡುವ ಎಲ್ಲರನ್ನೂ ನಾನು ಪ್ರಶಂಸಿಸುತ್ತೇನೆ, ಗೌರವಿಸುತ್ತೇನೆ' ಎಂದು ಮಹಿಳೆಯರಿಗೆ ಹೆಚ್ಚು ಪೂರಕವೆನಿಸುವ ವೋಡಾಫೋನ್ ಸೇವೆ 'ಸಖಿ'ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಂಧು ಹೇಳಿದರು.

ನಿಮ್ಮ ಗಮನಕ್ಕೆ ಬಂದಿದ್ಯಾ ಎಂದಾಗ..
ಕ್ರೀಡೆಗೆ ಸಂಬಂಧಿಸಿ ನಿಮ್ಮ ಗಮನಕ್ಕೆ ಬಂದಿರುವಂತೆ ಇಂಥ ಘಟನೆಗಳಾಗಿದ್ದಿದೆಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಧು, 'ನನ್ನ ಹಿರಿಯ ಆಟಗಾರರು ಮತ್ತು ತರಬೇತುದಾರರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಕೆಲವಾರು ಕ್ರೀಡಾದಿನಗಳನ್ನು ಕುರಿತು ಹೇಳೋದಾದ್ರೆ ಇಂಥದ್ದಾಗಿದ್ದಿಲ್ಲ' ಎಂದರು.

ಮಾನಸಿಕ ಕಿರುಕುಳ
ಇದಕ್ಕೂ ಮುನ್ನ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾಗುಟ್ಟಾ ಅವರು ತರಬೇತುದಾರರೊಬ್ಬರು ನನಗೆ ಮಾನಸಿಕ ಕಿರುಕುಳ ನೀಡಿದ್ದರು ಎಂದು ದೂರಿದ್ದರು. ಸರಣಿ ಟ್ವೀಟ್ ಗಳ ಮೂಲಕ, ಕೋಚ್ ಒಬ್ಬರು ನನಗೆ ಕಿರುಕುಳ ನೀಡಿದ್ದರು ಎಂದು ದೂರಿದ್ದ ಗುಟ್ಟಾ, ಕೋಚ್ ಹೆಸರನ್ನಾಗಲಿ, ಕಿರುಕುಳ ಲೈಂಗಿಕತೆಗೆ ಸಂಬಂಧಿಸಿದ್ದೇ ಎಂಬುದನ್ನಾಗಲಿ ಎಲ್ಲೂ ತಿಳಿಸಿರಲಿಲ್ಲ.

ಆಟ ನಿಲ್ಲಿಸಲು ಇದೂ ಕಾರಣ
'ನ್ಯಾಷನಲ್ ಚಾಂಪಿಯನ್ ಆಗಿ ನಾನು ಗುರುತಿಸಿಕೊಂಡಿದ್ದರೂ ಮುಖ್ಯ ಸ್ಥಾನದಲ್ಲಿದ್ದ ಆ ವ್ಯಕ್ತಿ ನನ್ನನ್ನು ರಾಷ್ಟ್ರೀಯ ತಂಡದಿಂದ ಹೊರಗಿಟ್ಟರು. ರಿಯೋ ಒಲಿಂಪಿಕ್ಸ್ ನಿಂದ ವಾಪಸ್ಸಾಗಿದ್ದೆನಷ್ಟೆ; ಆಗಲೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು. ನಾನು ಬ್ಯಾಡ್ಮಿಂಟನ್ ಆಟ ನಿಲ್ಲಿಸಲು ಇದೂ ಒಂದು ಕಾರಣ' ಎಂದು ಗುಟ್ಟಾ (ಅರೆ)ಗುಟ್ಟು ಬಿಚ್ಚಿಟ್ಟಿದ್ದರು.


Click it and Unblock the Notifications












