ಜಕಾರ್ತ, ಜೂನ್ 18 : ಇಲ್ಲಿ ನಡೆದ ಇಂಡೋನೇಷಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ಭಾರತದ ಕಿಡಾಂಬಿ ಶ್ರೀಕಾಂತ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಜಪಾನಿನ ಕಜುಮಸಾ ಸಕೈ ವಿರುದ್ಧ 21-11, 21-19 ಅಂತರದಲ್ಲಿ ಭರ್ಜರಿ ಜಯಗಳಿಸಿದರು.

24 ವರ್ಷದ ಶ್ರೀಕಾಂತ್ ಸೆಮಿಫೈನಲ್ ನಲ್ಲಿ 21-15, 18-21, 24-22 ಅಂತರದಲ್ಲಿ ಅಗ್ರ ಶ್ರೇಯಾಂಕಿತ ಕೊರಿಯಾದ ಸನ್ ವಾನ್ ಅವರನ್ನು ಮಣಿಸಿ ಅಂತಿಮ ಘಟಕ್ಕೆ ಪ್ರವೇಶಿಸಿದ್ದರು.