ಮಲೇಷ್ಯಾ ಓಪನ್ನ ಪುರುಚರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಹೆಚ್ಎಸ್ ಪ್ರಣಯ್ ಸೋಲು ಅನುಭವಿಸಿದ್ದಾರೆ. ಈ ಸೋಲಿನಿಂದಿಗೆ ಭಾರತೀಯ ಆಟಗಾರನ ಹೋರಾಟ ಅಂತ್ಯವಾಗಿದ್ದು ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಈ ಮೂಲಕ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಪ್ರಣಯ್ ಕೂಡ ಟೂರ್ನಿಯಿಂದ ನಿರ್ಗಮಿಸಿದಂತಾಗಿದೆ.
ಶುಕ್ರವಾರ ನಡೆದ ಜಪಾನ್ನ ಇನ್-ಫಾರ್ಮ್ ಶಟ್ಲರ್ ಕೊಡೈ ನರೋಕಾ ವಿರುದ್ಧ ನಡೆದ ಕ್ವಾಟರ್ಫೈನಲ್ ಸೆಣೆಸಾಟದಲ್ಲಿ ಸೋಲು ಅನುಭವಿಸುವ ಮೂಲಕ ಮಲೇಷ್ಯಾ ಓಪನ್ನಲ್ಲಿ ಭಾರತದ ಎಚ್ಎಸ್ ಪ್ರಣಯ್ ಅವರ ಅಭಿಯಾನವು ಕ್ವಾರ್ಟರ್-ಫೈನಲ್ನಲ್ಲಿ ಕೊನೆಗೊಂಡಿದೆ. ಈ ಪಂದ್ಯದಲ್ಲಿ ಪ್ರಣಯ್ ತೀವ್ರವಾಗಿ ಹೋರಾಟ ನಡೆಸಿದರಾದರೂ 16-21, 21-19, 10-21 ಅಂತರದಿಂದ ಸೋಲು ಒಪ್ಪಿಕೊಂಡರು. ಈ ಪಂದ್ಯ 82 ನಿಮಿಷಗಳ ಜಿದ್ದಾಜಿದ್ದಿನಿಂದ ಕೂಡಿತ್ತು.
ಇನ್ನು ಇದಕ್ಕೂ ಮುನ್ನ ಪ್ರತಿಷ್ಠಿತ ಟೂರ್ನಿಯ ಎರಡನೇ ಸುತ್ತಿನಲ್ಲಿ ಪ್ರಣಯ್ ಅವರು ಇಂಡೋನೇಷ್ಯಾದ ಚಿಕೊ ಔರಾ ದ್ವಿ ವಾಡೊಯೊ ಅವರನ್ನು ಮೂರು ಗೇಮ್ಗಳಲ್ಲಿ ಸೋಲಿಸಿದ್ದಾರೆ. ಈ ಮೂಲಕ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದರು. ವಿಶ್ವ 19ನೇ ಶ್ರೇಯಾಂಕದ ಆಟಗಾರ ಚಿಕೊ ಔರಾ ದ್ವಿ ವಾಡೊಯೊ ವಿರುದ್ಧ ಪ್ರಣಯ್ 21-9, 15-21, 21-16 ಅಂತರದಿಂದ ಮಣಿಸಿದ್ದಾರೆ. ಒಂದು ಗಂಟೆ 4 ನಿಮಿಷಗಳ ಕಾಲ ನಡೆದ ಈ ಕದನ ನಡೆದಿತ್ತು.
ಪ್ರಣಯ್ 2022 ರಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿ ಮಿಂಚಿದ್ದರು. BWF ವರ್ಲ್ಡ್ ಟೂರ್ ಫೈನಲ್ಗೆ ತಲುಪಿದ ಏಕೈಕ ಭಾರತೀ ಕೂಡ ಎನಿಸಿಕೊಂಡಿದ್ದರು. ವಿಶ್ವ 8ನೇ ಶ್ರೇಯಾಂಕದ ಆಟಗಾರ 2023ರ ಅಭಿಯಾನವನ್ನು ಕೂಡ ಅದ್ಭುತವಾಗಿ ಆರಂಭಿಸಿದ್ದಾರೆ. ಮೊದಲ ಸುತ್ತಿನಲ್ಲಿ ಭಾರತದವರೇ ಆದ 7 ನೇ ಶ್ರೇಯಾಂಕದ ಲಕ್ಷ್ಯ ಸೇನ್ ವಿರುದ್ಧ ಸೆಣೆಸಾಟ ನಡೆಸಬೇಕಾಯಿತು.
ಈ ಕಠಿಣ ಹೋರಾಟದಲ್ಲಿ ಪ್ರಣಯ್ ಗೆಲುವು ಸಾಧಿಸಿ ಮೇಲುಗೈಸ ಸಾಧಿಸಿದ್ದರು. 30ರ ಹರೆಯದ ಪ್ರಣಯ್ 24-22, 12-21, 21-18ರ ಅಂತರದಿಂದ ಪಂದ್ಯವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಒಂದು ಗಂಟೆಗೂ ಹೆಚ್ಚು ಕಾಲ ಜಿದ್ದಾಜಿದ್ದಿನಿಂದ ಕೂಡಿತ್ತು.
ಭಾರತದ ಸ್ಟಾರ್ ಶಟ್ಲರ್ಗಳಾದ ಕಿಡಂಬಿ ಶ್ರೀಕಾಂತ್ ಮತ್ತು ಪಿವಿ ಸಿಂಧು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರಿಂದ ಪ್ರಣಯ್ ಪುರುಷರ ಸಿಂಗಲ್ಸ್ನಲ್ಲಿ ರೇಸ್ನಲ್ಲಿ ಉಳಿದುಕೊಂಡಿರು ಏಕೈಕ ಭಾರತೀಯ ಶಟ್ಲರ್ ಎನಿಸಿಕೊಂಡಿದ್ದರು. ಕಾಮನ್ವೆಲ್ತ್ ಕ್ರೀಡಾಕೂಟದ ನಂತರ ಗಾಯಗೊಂಡು ವಿಶ್ರಾಂತಿ ಪಡೆದ ಬಳಿಕ ಮೊದಲ ಬಾರಿಗೆ ಆಟಕ್ಕೆ ಮರಳಿರುವ ಸಿಂಧು, ಕೆರೊಲಿನಾ ಮರಿನ್ ವಿರುದ್ಧ ಮೂರು ಗೇಮ್ಗಳ ಕಠಿಣ ಹೋರಾಟದಲ್ಲಿ ಸೋಲು ಕಂಡಿದ್ದಾರೆ.