ಪಲ್ಲಿಕೆಲ್ಲೆ, ಆಗಸ್ಟ್ 24: ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಭಾರತಕ್ಕೆ ಗೆಲ್ಲಲು 237 ರನ್ ಗಳ ಗುರಿ ನೀಡಿದೆ.
ಮೊದಲು ಟಾಸ್ ಗೆದ್ದು ಬ್ಯಾಟಿಗ್ ಮಾಡಿದ ಶ್ರೀಲಂಕಾ ನಿಗದಿ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದೆ.
ಶ್ರೀಲಂಕಾ ಪರ ಸಿರಿವರ್ದನ 58, ಚಮರಾ ಕಪುಗೆದೆರಾ 40 ರನ್ ಗಳಿಸಿದರು. ಭಾರತ ಪರ ಬೂಮ್ರಾ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 25 ಓವರ್ ಗಳಲ್ಲಿ ಲಂಕಾ 111 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮುಂದುವರೆಸಿದೆ.
ಸರಣಿಯಲ್ಲಿ ಭಾರತ 1-0ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೊದಲ ಪಂದ್ಯ ಆಡಿದ್ದ ರೋಹಿತ್ ಶರ್ಮ ನಾಲ್ಕು ರನ್ ಗಳಿಸಿ ರನ್ ಔಟ್ ಆಗಿ ನಿರಾಶೆ ಮೂಡಿಸಿದ್ದರು. ಮೊದಲ ಪಂದ್ಯದಲ್ಲಿ 6 ಓವರ್ ಬೌಲ್ ಮಾಡಿದ್ದ ಬೂಮ್ರಾ 22ರನ್ ನೀಡಿ 2 ವಿಕೆಟ್ ಕೆಡವಿದ್ದರು.

ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಲೋಕೇಶ್ ರಾಹುಲ್, ಎಂಎಸ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ ಸ್ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್.