ಇತ್ತೀಚೆಗಿನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಸರಣಿಯಲ್ಲಿ ಡಿಸಿಷನ್ ರಿವ್ಯೂ ಸಿಸ್ಟಮ್ (ಡಿಆರ್ಎಸ್) ಸಾಕಷ್ಟು ವಿವಾದಗಳಲ್ಲಿ ಸಿಲುಕಿತ್ತು. ಇದರಲ್ಲಿ ಅಂಪೈರ್ ಎಲ್ ಬಿಡಬ್ಲ್ಯು ತೀರ್ಪಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದ್ದಿದ್ದವು. ಡಿಆರ್ ಎಸ್ ನಿಯಮವನ್ನು ಮರುಪರಿಶೀಲಿಸಬೇಕೆಂಬ ಆಗ್ರಹವೂ ಕೇಳಿ ಬಂದಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂಪೈರ್ಗಳ ತೀರ್ಪನ್ನು ಮುಂದುವರಿಸಲು ನಿರ್ಧರಿಸಿದೆ.
ಐಸಿಸಿ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ಸಮಿತಿ ಕೂಡ ಡಿಆರ್ಎಸ್ನ 3 ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಎಲ್ ಬಿಡಬ್ಲ್ಯುಗಾಗಿ ವಿಕೆಟ್ ವಲಯದ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ, ಟಿವಿ ಅಂಪೈರ್ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.

ಗುರುವಾರ ಐಸಿಸಿ ಮಂಡಳಿ ಸಭೆ ನಡೆಸಿತು. ಸಭೆಯ ನಂತರ ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷ ಅನಿಲ್ ಕುಂಬ್ಳೆ ಮಾತನಾಡಿ, ಅಂಪೈರ್ ತೀರ್ಪಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆದವು. ಅದನ್ನು ಪರಿಶೀಲಿಸಲಾಗಿದೆ. ಡಿಆರ್ಎಸ್ ಎಂದರೆ ಪಂದ್ಯದ ವೇಳೆ ಆಗುವ ತಪ್ಪುಗಳನ್ನು ಸರಿಪಡಿಸುವುದು. ಇದರಲ್ಲಿ ಮೈದಾನದಲ್ಲಿ ಅಂಪೈರ್ ನಿರ್ಧಾರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಆದ್ದರಿಂದ ನಾವು ಅದನ್ನು ಮುಂದುವರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಇದರೊಂದಿಗೆ ಡಿಆರ್ಎಸ್ನಲ್ಲಿ ಎಲ್ಬಿಡಬ್ಲ್ಯೂ ಪರಿಶೀಲನೆಯ ನಿಯಮಗಳಲ್ಲಿ ಐಸಿಸಿ ಕೆಲವು ಬದಲಾವಣೆಗಳನ್ನು ಮಾಡಿದೆ. ಹೊಸ ನಿಯಮದ ಪ್ರಕಾರ, ಎಲ್ಬಿಡಬ್ಲ್ಯು ತೀರ್ಪನ್ನು ನೀಡಲು ಬೆಲ್ಸ್ ವರೆಗೆ ಚೆಂಡು ಬಡೆದರೂ ಅದನ್ನು ಔಟ್ ಎಂದು ನೀಡಲಾಗುತ್ತದೆ.
ಚೆಂಡು ಶೇಕಡಾ 50 ರಷ್ಟು ಬೇಲ್ಗಳ ಕೆಳ ಭಾಗವನ್ನು ಸ್ಪರ್ಷಿಸಿದರು, ಅದಕ್ಕೆ ಅಂಪೈರ್ ಕರೆ ನೀಡಲಾಗುತ್ತದೆ. ಇನ್ನು ಮುಂದೆ ಚೆಂಡಿನ ಶೇಕಡಾ 50 ರಷ್ಟಾದರೂ ಬೆಲ್ ಗಳ ಮೇಲ್ಬಾಗವನ್ನು ಮುಟ್ಟಿದರೂ ಅಂಪೈರ್ ಕಾಲ್ ನೀಡಲಾಗುವುದು.

ಎಲ್ಬಿಡಬ್ಲ್ಯು ವಿಮರ್ಶೆಗೆ ಸಂಬಂಧಿಸಿದಂತೆ ಐಸಿಸಿ ಎರಡನೇ ಬದಲಾವಣೆಯನ್ನೂ ಮಾಡಿದೆ. ಇದರ ಪ್ರಕಾರ, ಅಂಪೈರ್ ನಿರ್ಧಾರವನ್ನು ಪರಿಶೀಲಿಸುವ ಮೊದಲು, ಆಟಗಾರನು ಅಂಪೈರ್ನೊಂದಿಗೆ ಮಾತನಾಡಲು ಅವಕಾಶವಿದೆ. ಮತ್ತು ಬ್ಯಾಟ್ಸ್ಮನ್ ಚೆಂಡನ್ನು ಆಡಲು ಪ್ರಯತ್ನವನ್ನು ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂದು ಕೇಳಲು ಸಾಧ್ಯವಾಗುತ್ತದೆ. ಇದರಿಂದ ಅವರು ತೀರ್ಪನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ ಮತ್ತು ಡಿಆರ್ಎಸ್ ವ್ಯರ್ಥವಾಗುವುದಿಲ್ಲ.
ಐಸಿಸಿ ಮಾಡಿದ ಮೂರನೇ ಬದಲಾವಣೆಯು ಶಾರ್ಟ್ ರನ್ಗಳಿಗೆ ಸಂಬಂಧಿಸಿದೆ. ಹೊಸ ನಿಯಮದ ಪ್ರಕಾರ ಟಿವಿ ಅಂಪೈರ್ ಶಾರ್ಟ್ ರನ್ ನಿರ್ಧರಿಸಲಿದ್ದಾರೆ. ಮೂರನೇ ಅಂಪೈರ್ ಮರುಪ್ರಸಾರದಲ್ಲಿ ಪರಿಶೀಲಿಸುತ್ತಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವೇಳೆ ತಪ್ಪು ನಡೆದಿದ್ದರೆ ಮುಂದಿನ ಎಸೆತ ಆಗುವ ಮುನ್ನ ಸರಿಪಡಿಸಿಕೊಳ್ಳುತ್ತಾರೆ.
ಐಪಿಎಲ್ 2020 ರ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ತಪ್ಪು ಶಾರ್ಟ್ ರನ್ಗೆ ಬೆಲೆ ತೆರಬೇಕಾಯಿತು. ಲೀಗ್ ಸುತ್ತಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಕ್ರಿಸ್ ಜೋರ್ಡಾನ್ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಅಂಪೈರ್ ಜೋರ್ಡಾನ್ ಒಂದು ರನ್ ಶಾರ್ಟ್ ಎಂದು ಘೋಷಿಸಿದರು. ಇದರಿಂದಾಗಿ ಪಂದ್ಯ ಸೂಪರ್ ಓವರ್ಗೆ ಸಾಗಿತು. ಡೆಲ್ಲಿ ಸೂಪರ್ ಓವರ್ನಲ್ಲಿ ಪಂಜಾಬ್ ತಂಡವನ್ನು ಸೋಲಿಸಿತು. ಅಲ್ಲದೆ, ಪಂಜಾಬ್ ಸೋಲಿನಿಂದಾಗಿ ಪ್ಲೇ ಆಫ್ನಿಂದ ಹೊರಗುಳಿದಿತ್ತು.