ಭಾರತದಲ್ಲೇ ನಡೆದ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಪ್ರಾಥಮಿಕ ತಂಡದಲ್ಲಿದ್ದರೂ, ಆಲ್ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ರವಿಚಂದ್ರನ್ ಅಶ್ವಿನ್ರನ್ನು ಆಯ್ಕೆ ಮಾಡಬೇಕಾಯಿತು.
ಐಸಿಸಿ ಟೂರ್ನಿಗೆ ಕೆಲವೇ ದಿನಗಳ ಮುನ್ನ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಎಡ ಭುಜದ ಗಾಯವನ್ನು ಅನುಭವಿಸಿದ ಅಕ್ಷರ್ ಪಟೇಲ್ ಅವರನ್ನು ಪಂದ್ಯಾವಳಿಯಿಂದ ಹೊರಬೀಳಬೇಕಾಯಿತು.
ಚೇತರಿಸಿಕೊಂಡು ಹಿಂದಿರುಗಿದ ನಂತರ ಎಡಗೈ ಆಲ್ರೌಂಡರ್ ಟಿ20 ಸ್ವರೂಪದಲ್ಲಿ ಅಸಾಧಾರಣವಾಗಿದ್ದಾರೆ ಮತ್ತು ಇದೀಗ ತಂಡದ ಆಡುವ 11ರ ಬಳಗದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಹಣಾಹಣಿಯಲ್ಲಿ ಅಕ್ಷರ್ ಪಟೇಲ್ ಅವರನ್ನು ಪಂದ್ಯಶ್ರೇಷ್ಠ ಆಟಗಾರ ಎಂದು ಆಯ್ಕೆ ಮಾಡಲಾಯಿತು.
ಇದೀಗ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಮುಂಬರುವ ಟಿ20 ವಿಶ್ವಕಪ್ನಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಬದಲಿಗೆ 29 ವರ್ಷದ ಅಕ್ಷರ್ ಪಟೇಲ್ ಅಂತಿಮವಾಗಿ ಭಾರತ ತಂಡವನ್ನು ಪ್ರತಿನಿಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಆದಾಗ್ಯೂ, ರವೀಂದ್ರ ಜಡೇಜಾ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಸಮಯದಲ್ಲಿ ಉಪನಾಯಕರಾಗಿದ್ದರು ಎಂದು ಆಕಾಶ್ ಚೋಪ್ರಾ ನೆನಪಿಸಿದರು. ಸದ್ಯಕ್ಕೆ ಇದು ಸ್ವಲ್ಪ ಜಟಿಲವಾಗಿದೆ. ಆದರೆ, ಆಕಾಶ್ ಚೋಪ್ರಾ ಅವರು ಮಾತ್ರ ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್ಗಾಗಿ ರವೀಂದ್ರ ಜಡೇಜಾಗಿಂತ ಅಕ್ಷರ್ ಪಟೇಲ್ರನ್ನು ಆಯ್ಕೆ ಮಾಡಿದರು.

"ಅಕ್ಷರ್ ಪಟೇಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಅಕ್ಷರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ, ನನಗೆ ಭಯವಾಗಿದೆ. ಏಕೆಂದರೆ ಕಳೆದ ಬಾರಿ ಸತತ ಎರಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಾಗ ಅವರನ್ನು ತಂಡದಿಂದ ಕೈಬಿಡಲಾಯಿತು. ಅವನನ್ನು ದಕ್ಷಿಣ ಆಫ್ರಿಕಾಕ್ಕೆ ಕರೆದೊಯ್ದಿಲ್ಲ ಮತ್ತು ಅವರು ಈಗ ಏನು ಮಾಡುತ್ತಾರೆ ಎಂದು ತಿಳಿದಿಲ್ಲ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
"7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ನಿಮ್ಮ ಮೊದಲ ಸ್ಪಿನ್ನರ್ ರವೀಂದ್ರ ಜಡೇಜಾ ಅಥವಾ ಅಕ್ಷರ್ ಪಟೇಲ್ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ನನ್ನ ಪುಸ್ತಕದಲ್ಲಿ ಅಕ್ಷರ್ ಪಟೇಲ್ ಇದ್ದಾರೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದ ಟಿ20 ಸರಣಿಯಲ್ಲಿ ಭಾರತ ತಂಡವು ಜಡ್ಡು ಅವರನ್ನು ಉಪನಾಯಕನನ್ನಾಗಿ ಮಾಡಿದ ಕಾರಣ, ಬಹುಶಃ ತಂಡವು ರವೀಂದ್ರ ಜಡೇಜಾ ಬಗ್ಗೆ ಯೋಚಿಸುತ್ತಿದೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ತಾವು ಎದುರಿಸಿದ ಮೊದಲ ಎಸೆತದಲ್ಲಿ ಮಿಡ್-ಆಫ್ ಮೇಲೆ ಬಾರಿಸಲು ಉದ್ದೇಶಿಸಿ ಪಿಚ್ನಲ್ಲಿ ಪರದಾಡಿದರು. ಆದರೆ ಚೆಂಡು ಸ್ಟಂಪ್ಗಳನ್ನು ಹಾರಿಸಿತು.
ಇದರೊಂದಿಗೆ 36 ವರ್ಷದ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದರು. ಇದು ಸದ್ಯಕ್ಕೆ ಸ್ವಲ್ಪ ಸಮಸ್ಯೆಯಾಗಿ ತೋರುತ್ತಿದೆ. ಆಕಾಶ್ ಚೋಪ್ರಾ ಅವರು ರೋಹಿತ್ ಶರ್ಮಾ ಉದ್ದೇಶದಿಂದ ಆಶ್ಚರ್ಯಚಕಿತರಾದರು ಮತ್ತು ಸಾಮಾನ್ಯವಾಗಿ ಅಂತಹ ಹೊಡೆತಗಳನ್ನು ಆಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.
"ರೋಹಿತ್ ಶರ್ಮಾ ಔಟಾದ ರೀತಿ ಅತ್ಯಂತ ಆಶ್ಚರ್ಯಕರವಾಗಿತ್ತು. ಅವರು ತಮ್ಮ ಮೊದಲ ಎಸೆತವನ್ನು ಆಡುತ್ತಿದ್ದರು. ಅವರು ಅಂತಹ ಹೊಡೆತಗಳನ್ನು ಆಡುವುದಿಲ್ಲ. ಚೆಂಡು ಹೋಗಿ ಸ್ಟಂಪ್ಗೆ ಬಡಿಯಿತು. ಕಳೆದ ಪಂದ್ಯದಲ್ಲಿ ರನ್ ಔಟ್ ಆದ ಅವರು ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ಅವರು ಇಲ್ಲಿಯವರೆಗೆ ಈ ಸರಣಿಯಲ್ಲಿ ಒಂದೇ ಒಂದು ರನ್ ಗಳಿಸಿಲ್ಲ," ಎಂದು ಆಕಶ್ ಚೋಪ್ರಾ ಹೇಳಿದರು.