
ಭಾರತ-ದಕ್ಷಿಣ ಆಫ್ರಿಕಾ ಪಂದ್ಯ
ಜೂನ್ 5ರಂದು ವಿಶ್ವಕಪ್ ಮೊದಲ ಮುಖಾಮುಖಿಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್ ಸೋಲನುಭವಿಸಿದಾಗ ವಿವಾದ ಸೃಷ್ಟಿಯಾಗಿತ್ತು. ವರದಿಯ ಪ್ರಕಾರ ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ, ಏಕದಿನ ಕ್ರಿಕೆಟ್ಗೆ ನಿವೃತ್ತಿ ನೀಡಿದ್ದ ಎಬಿಡಿ ನಿವೃತ್ತಿ ಹಿಂಪಡೆದು ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ತಾನು ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡ ಸೇರಲು ಬಯಸಿರಲಿಲ್ಲ. ಮುಖ್ಯವಾಗಿ ಇದಕ್ಕೆ ಒತ್ತಾಯಿಸಿರಲಿಲ್ಲ ಎಂದು ಎಬಿಡಿ ತಿಳಿಸಿದ್ದಾರೆ.
ಯಾರನ್ನೂ ಒತ್ತಾಯಿಸಿಲ್ಲ
ಅಂದು ಸೃಷ್ಟಿಯಾಗಿದ್ದ ಆ ವಿವಾದಕ್ಕೆ ಈಗ ಸ್ಪಷ್ಟನೆ ನೀಡಲು ಮುಂದಾಗಿರುವ ಎಬಿಡಿ, ಟ್ವಿಟರ್ನಲ್ಲಿ ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡದಲ್ಲಿ ತನ್ನನ್ನು ಸೇರಿಸಿ ಎಂದು ಒತ್ತಾಯ ಮಾಡಿಲ್ಲ. ಬದಲಿಗೆ ದೇಸಿ ತಂಡಕ್ಕೆ ನನ್ನ ಅಗತ್ಯವಿದ್ದರೆ ನಾನು ಸೇವೆ ಸಲ್ಲಿಸಲು ಸಿದ್ಧನಿದ್ದೇನೆ ಎಂಬುದಷ್ಟೇ ಹೇಳಿದ್ದೆ ಎಂದು ವಿಸ್ತೃತ ವಿವರಣೆ ನೀಡಿದ್ದಾರೆ. ಎಬಿಡಿ ಟ್ವಿಟರ್ ಪೋಸ್ಟ್ ಮೇಲಿದೆ.

ದಕ್ಷಿಣ ಆಫ್ರಿಕಾಕ್ಕೆ ಏಳನೇ ಸ್ಥಾನ
ಶುಕ್ರವಾರ (ಜುಲೈ 12) ಸ್ಪಷ್ಟನೆ ನೀಡಿ ಮಾಡಿರುವ ಟ್ವೀಟ್ ಹೇಳಿಕೆಯಲ್ಲಿ ಎಬಿಡಿ, 'ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಸವಾಲು ಅಂತ್ಯಗೊಂಡಿದೆ. ತಂಡಕ್ಕೆ ಇದರಿಂದ ತೊಂದರೆಯೇನಿಲ್ಲ. ಹೀಗಾಗಿ ಟೂರ್ನಿಯ ವೇಳೆ ಹುಟ್ಟಿಕೊಂಡ ವಿವಾದ, ಟೀಕೆಗಳಿಗೆ ನಾನಿವತ್ತು ಸ್ಪಷ್ಟನೆ ನೀಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ವಿಶ್ವಕಪ್ನ 9 ಪಂದ್ಯಗಳಲ್ಲಿ ಆಫ್ರಿಕಾ 3 ಗೆಲುವು, 5 ಸೋಲು, 1 ಪಂದ್ಯ ರದ್ದಾಗಿಸಿಕೊಂಡಿತ್ತು. ಸದ್ಯ ಅಂಕಪಟ್ಟಿಯಲ್ಲಿ ಪ್ರೋಟಿಯಾಸ್ 7ನೇ ಸ್ಥಾನದಲ್ಲಿದೆ.

ಅಖ್ತರ್ಗೆ ಎಬಿಡಿ ತಿರುಗೇಟು
ಮೇ 2018ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದೆ ಯಾಕೆಂದರೆ ನಾನು ನನ್ನ ಕೆಲದ ಒತ್ತಡವನ್ನು ಕಡಿಮೆಗೊಳಿಸಿ ಪತ್ನಿ ಮತ್ತು ಪುಟಾಣಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸಿದ್ದೆ. ಆದರೆ ಇದನ್ನು ಕೆಲವರು ನಾನು ನಿವೃತ್ತಿ ಹೇಳಿದ್ದು ಹಣದಾಸೆಗಾಗಿ ಎಂದರು. ದೇಶ ಬದಿಗಿಟ್ಟು ಹಣಕ್ಕಾಗಿ ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ನಾನು ಹೀಗೆ ಮಾಡಿದೆ ಎಂದು ಒಂದಿಷ್ಟು ಮಂದಿ ಆಡಿಕೊಂಡರು. ಆದರೆ ಅವರ ಹೇಳಿಕೆ ಸರಿಯಲ್ಲ ಎಂದು ಎಬಿಡಿ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ. ವಿವಾದದ ವೇಳೆ ಪಾಕ್ ಕ್ರಿಕೆಟರ್ ಶೋಯೆಬ್ ಅಖ್ತರ್ ಎಬಿಡಿಯನ್ನು ಹೆಚ್ಚು ಟೀಕಿಸಿದ್ದರು.


Click it and Unblock the Notifications












