ಕೊಲಂಬೋ, ಆಗಸ್ಟ್ 10 : ಸಭ್ಯರ ಕ್ರೀಡೆ ಎಂದೆನಿಸಿರುವ ಕ್ರಿಕೆಟ್ ಕ್ಷೇತ್ರದಲ್ಲೂ ಕಪ್ಪು ವರ್ಣದವರನ್ನು ಕೀಳಾಗಿ ಕಾಣಲಾಗುತ್ತಿದೆ. ವರ್ಣಭೇದ ನೀತಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಅಭಿನವ್ ಮುಕುಂದ್ ಟ್ವಿಟ್ಟರ್ ನಲ್ಲಿ ಧ್ವನಿಯೆತ್ತಿದ್ದಾರೆ. ಅಭಿನವ್ ಮುಕುಂದ್ ಗೆ ನಾಯಕ ವಿರಾಟ್ ಕೊಹ್ಲಿ ಕೂಡಾ ದನಿಗೂಡಿಸಿದ್ದಾರೆ.
'ಕಪ್ಪಗಿದ್ದೇನೆ ಅನ್ನೋ ಕಾರಣಕ್ಕೆ ಹಲವು ರೀತಿಯ ಟೀಕೆ, ವ್ಯಂಗ್ಯ ಅನಾದರವನ್ನು ಎದುರಿಸಿದ್ದೆ' ಎಂದು ಅಭಿನವ್ ಟ್ವಿಟ್ಟರ್ ನಲ್ಲಿ ಪತ್ರವೊಂದನ್ನು ಹಾಕಿಕೊಂಡಿದ್ದಾರೆ.

ಆದರೆ, ಎಲ್ಲವನ್ನು ಮೆಟ್ಟಿನಿಂತು ಛಲದಿಂದ ಗುರಿ ಸಾಧಿಸಿ, ಭಾರತದ ಪರ ಆಡಿದ ಅನುಭವವನ್ನು ಹೇಳಿಕೊಂಡಿದ್ದಾರೆ. ಬಣ್ಣದಿಂದ ಒಬ್ಬರನ್ನು ಸುಂದರ ಎನ್ನುವುದು ಸರಿಯಲ್ಲ. ಎಂದರ್ಥವಲ್ಲ. ಸತ್ಯವಂತರಾಗಿರಿ, ದೃಢಚಿತ್ತ, ಪರಿಶ್ರಮ ಇದ್ದರೆ ಏನನ್ನು ಬೇಕಾದ್ರೂ ಸಾಧಿಸಬಹುದು, ನಿಮ್ಮ ಚರ್ಮದ ಬಗ್ಗೆ ಹೆಮ್ಮೆ ಇರಲಿ