ರೋಹಿತ್ ಶರ್ಮಾ ನಾಯಕತ್ವದ ಆತಿಥೇಯ ಭಾರತ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅದ್ವಿತೀಯ ಪ್ರದರ್ಶನ ನೀಡುತ್ತಿದೆ. ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಗೆಲುವಿನ ಅಲೆಯಲ್ಲಿ ತೇಲುತ್ತಿದೆ.
ಆದರೆ, ಈ ಅಸಾಧಾರಣ ತಂಡವನ್ನು ಸೋಲಿಸುವ ರಹಸ್ಯವೇನು? ಭಾರತದ ಪ್ರಾಬಲ್ಯವನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಫಾಕ್ಸ್ ಸ್ಪೋರ್ಟ್ಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಾರಿ ಏಕದಿನ ವಿಶ್ವಕಪ್ ವಿಜೇತ, ಆಸ್ಟ್ರೇಲಿಯಾ ಕ್ರಿಕೆಟ್ ಲೆಜೆಂಡ್ ಆಡಮ್ ಗಿಲ್ಕ್ರಿಸ್ಟ್ ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡದ ಪ್ರದರ್ಶನವು ಅದ್ಭುತವಾಗಿದೆ. ಎಂಟು ಪಂದ್ಯಗಳಲ್ಲಿ ಎಂಟು ಗೆಲುವುಗಳ ಅಜೇಯ ದಾಖಲೆಯೊಂದಿಗೆ ಆತಿಥೇಯರು ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಆಟದ ಎಲ್ಲಾ ವಿಭಾಗಗಳಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸಿದೆ.
ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆಡಮ್ ಗಿಲ್ಕ್ರಿಸ್ಟ್ ಅವರು ಫಾಕ್ಸ್ ಕ್ರಿಕೆಟ್ನೊಂದಿಗೆ ಮಾತನಾಡುತ್ತಾ, ಟಾಸ್ ಗೆದ್ದ ನಂತರ ಭಾರತ ತಂಡವನ್ನು ಸೋಲಿಸುವ ಸಾಧ್ಯತೆಯನ್ನು ಹೆಚ್ಚಿಸಲು ತಂತ್ರವನ್ನು ಬಹಿರಂಗಪಡಿಸಿದ್ದಾರೆ.

ಚೇಸಿಂಗ್ನಲ್ಲಿ ಭಾರತದ ತಾಕತ್ತನ್ನು ಒಪ್ಪಿಕೊಂಡು, ವಿಶೇಷವಾಗಿ ವಿರಾಟ್ ಕೊಹ್ಲಿ ಅದರ ಚುಕ್ಕಾಣಿ ಹಿಡಿದಿರುವ ಹೊರತಾಗಿಯೂ, ಆಡಮ್ ಗಿಲ್ಕ್ರಿಸ್ಟ್ ಅವರು ಭಾರತ ತಂಡಕ್ಕೆ ದೊಡ್ಡ ಟಾರ್ಗೆಟ್ ನಿಗದಿಪಡಿಸುವ ಕಾರ್ಯತಂತ್ರದ ಪ್ರಯೋಜನವನ್ನು ಎತ್ತಿಹಿಡಿದರು.
"ಭಾರತ ತಂಡ ತಮ್ಮ ಆಟವನ್ನು ಹೇಗೆ ಆಡುತ್ತಿದೆ ಎಂಬುದನ್ನು ಗಮನಿಸಿದರೆ, ಎದುರಾಳಿ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದು ಎಂದು ನಾನು ಭಾವಿಸುತ್ತೇನೆ. ಭಾರತ ಚೇಸಿಂಗ್ನಲ್ಲಿ ದೌರ್ಬಲ್ಯವನ್ನು ಹೊಂದಿದ್ದಾರೆಂದು ನಾನು ಸೂಚಿಸುವುದಿಲ್ಲ. ಏಕೆಂದರೆ, ವಿರಾಟ್ ಕೊಹ್ಲಿಯಲ್ಲಿ ಶ್ರೇಷ್ಠ ರನ್-ಚೇಸ್ ಬ್ಯಾಟರ್ನನ್ನು ಹೊಂದಿದೆ," ಎಂದು ಆಡಮ್ ಗಿಲ್ಕ್ರಿಸ್ಟ್ ತಿಳಿಸಿದರು.

ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಭಾರತದ ಬೌಲಿಂಗ್ ದಾಳಿಯ ಪರಿಣಾಮಕಾರಿತ್ವವನ್ನು ಒತ್ತಿಹೇಳಿದರು. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಪ್ರದರ್ಶನವನ್ನು ಶ್ಲಾಘಿಸಿದರು. ಆದರೆ, ಅವರು ಬಹುತೇಕ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲಾಗಲಿಲ್ಲ ಎಂದು ಹೇಳಿದ್ದಾರೆ.
"ಹಗಲಿನ ಪರಿಸ್ಥಿತಿಯಲ್ಲಿ ಈ ಅಸಾಧಾರಣ ಮೂವರು ಬೌಲರ್ಗಳನ್ನು ಎದುರಿಸುವುದು ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಉತ್ತಮ ಅವಕಾಶವನ್ನು ನೀಡುತ್ತದೆ. ಆದರೆ ಭಾರತೀಯ ಬೌಲಿಂಗ್ ದಾಳಿಯು ರಾತ್ರಿ ವೇಳೆ ಲೈಟಿಂಗ್ಸ್ನಲ್ಲಿ ಮಾಡುತ್ತಿರುವ ದಾಳಿಯು ಮಾರಕವಾಗಿದೆ," ಎಂದು ಅಭಿಪ್ರಾಯಪಟ್ಟರು.

"ಲೈಟ್ಸ್ನಡಿ ಸಿರಾಜ್, ಶಮಿ ಮತ್ತು ಬುಮ್ರಾ ವಿರುದ್ಧ ಬ್ಯಾಟಿಂಗ್ ಮಾಡುವುದು ಕಷ್ಟ. ಆದರೆ, ಹಗಲು ಹೊತ್ತಿನಲ್ಲಿ ಅವರ ವಿರುದ್ಧ ಬ್ಯಾಟಿಂಗ್ ಮಾಡಲು ಇದು ಹೆಚ್ಚು ಅನುಕೂಲಕರವಾಗಿರುತ್ತದೆ," ಎಂದು 51 ವರ್ಷದ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ತಿಳಿಸಿದ್ದಾರೆ.
ಭಾರತ ತಂಡವು ಸಮತೋಲಿತ ಬೌಲಿಂಗ್ ವಿಭಾಗವನ್ನು ಹೊಂದಿದೆ ಎಂದು ಆಡಮ್ ಗಿಲ್ಕ್ರಿಸ್ಟ್ ಒಪ್ಪಿಕೊಂಡರು. ಅವರ ವೇಗದ ಬೌಲಿಂಗ್ ಪ್ರತಿಭೆಗಳು, ಸ್ಪಿನ್ ಬೌಲರ್ಗಳಿಂದಲೂ ಸಹಾಯ ಪಡೆಯುತ್ತಿದ್ದಾರೆ.
ವಿಶೇಷವಾಗಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಪ್ರಭಾವಶಾಲಿ ಅಂಕಿಅಂಶ ಮತ್ತು ಯಾವುದೇ ಎದುರಾಳಿ ಬ್ಯಾಟಿಂಗ್ ಕ್ರಮಾಂಕವನ್ನು ಗೊಂದಲಗೊಳಿಸುವ ಕುಲದೀಪ್ ಯಾದವ್ ಅವರ ಸಾಮರ್ಥ್ಯವನ್ನು ಗಿಲ್ಕ್ರಿಸ್ಟ್ ಎತ್ತಿ ತೋರಿಸಿದರು. ಇದಲ್ಲದೆ, ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಉಪಸ್ಥಿತಿಯು ಭಾರತದ ಬೌಲಿಂಗ್ ದಾಳಿಯು ಅಸಾಧಾರಣದಿಂದ ಕೂಡಿದೆ ಎಂದು ಹೇಳಿದರು.