ಭಾರತ ಕ್ರಿಕೆಟ್ ಇತಿಹಾಸದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಆಡಿದ ಎರಡು ದಿಗ್ಗಜ ಹೆಸರುಗಳೆಂದರೆ, ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್. ಭಾರತ ತಂಡದ ಒಂದೇ ಸ್ಕೋರ್ ಕಾರ್ಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ, ಸೋಮವಾರದಿಂದ ಆರಂಭವಾದ ವಿಜಯ್ ಮರ್ಚಂಟ್ ಟ್ರೋಫಿ ರಾಷ್ಟ್ರೀಯ 16 ವರ್ಷದೊಳಗಿನವರ ಬಾಲಕರ ಟೂರ್ನಿಯಲ್ಲಿ ಕರ್ನಾಟಕ ಮತ್ತು ದೆಹಲಿ ನಡುವಿನ ಮೂರು ದಿನಗಳ ಪಂದ್ಯಗಳಲ್ಲಿ ದ್ರಾವಿಡ್ ಮತ್ತು ಸೆಹ್ವಾಗ್ ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಹೌದು, ಕರ್ನಾಟಕ ಮತ್ತು ದೆಹಲಿ ತಂಡಗಳ ಪರ ದ್ರಾವಿಡ್ ಮತ್ತು ಸೆಹ್ವಾಗ್ ಕಾಣಿಸಿಕೊಂಡಿದ್ದರಿಂದ ನಿಸ್ಸಂಶಯವಾಗಿ ಇದು ವಿಭಿನ್ನವಾದ ಉತ್ಸಾಹವನ್ನು ಹೊಂದಿತ್ತು.
ಕರ್ನಾಟಕ ಅಂಡರ್-16 ತಂಡದ ನಾಯಕ ಅನ್ವಯ್ ದ್ರಾವಿಡ್ ಮತ್ತು ದೆಹಲಿ ತಂಡದ ಡ್ಯಾಶಿಂಗ್ ಆರಂಭಿಕ ಬ್ಯಾಟರ್ ಆರ್ಯವೀರ್ ಸೆಹ್ವಾಗ್ ತಮ್ಮ ತಮ್ಮ ರಾಜ್ಯದ ತಂಡಗಳಿಗಾಗಿ ಆಡುತ್ತಿದ್ದಾರೆ.
ಮೊದಲನೇ ದಿನದಂದು ಅವರು ವ್ಯತಿರಿಕ್ತ ಫಲಿತಾಂಶಗಳನ್ನು ಎದುರಿಸಿದರು. ಜೂನಿಯರ್ ಸೆಹ್ವಾಗ್ 50 ರನ್ ಗಳಿಸಿ ಅಜೇಯರಾಗಿ ಉಳಿದರೆ, ಜೂನಿಯರ್ ದ್ರಾವಿಡ್ ಡಕ್ ಔಟ್ ಆಗಿದ್ದರು. ಜೂನಿಯರ್ ಕ್ರಿಕೆಟ್ನಲ್ಲಿ "ಸೆಹ್ವಾಗ್ vs ದ್ರಾವಿಡ್' ಎನ್ನುವ ಆಕರ್ಷಕ ಸ್ಪರ್ಧೆಯಾಗಿತ್ತು.
ಭಾರತ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಮುಖ್ಯ ಕೋಚ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ಕರ್ನಾಟಕ ತಂಡದ ವಿಕೆಟ್ ಕೀಪರ್ ಆಗಿದ್ದಾರೆ. ಆದರೆ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಮಗ ಆರ್ಯವೀರ್ ತಂದೆಯಂತೆ ಹೊಸ ಚೆಂಡಿನಲ್ಲಿ ಸ್ಫೋಟಕ ಆಟವಾಡಬಲ್ಲವನಾಗಿದ್ದಾನೆ.
ಭಾರತೀಯ ಕ್ರಿಕೆಟ್ನ ಸುವರ್ಣ ಭವಿಷ್ಯಕ್ಕೆ ನೆಕ್ಸ್ಟ್-ಜನರೇಶನ್ ಇದು ಉತ್ತಮ ವರ್ಷವಾಗಿದೆ. ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈಗಾಗಲೇ ತಮ್ಮ ಐಪಿಎಲ್ಗೆ ಪದಾರ್ಪಣೆ ಮಾಡಿದ್ದಾರೆ ಮತ್ತು ಗೋವಾ ತಂಡದ ರೆಗ್ಯುಲರ್ ಆಯ್ಕೆಯಾಗಿದ್ದಾರೆ.
ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಅವರು ಕೂಚ್ ಬೆಹಾರ್ ಟ್ರೋಫಿ (ರಾಷ್ಟ್ರೀಯ ಅಂಡರ್ -19 ಪಂದ್ಯ) ಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಆದಾಗ್ಯೂ, ಸಮಿತ್ ದ್ರಾವಿಡ್ ಅವರು ಅಂಡರ್-19 ಏಕದಿನ ವಿನೂ ಮಂಕಡ್ ಟ್ರೋಫಿಯಿಂದ ಹೊರಬಿದ್ದ ನಂತರ, ಭಾರತ ಅಂಡರ್-19 ಬಸ್ ಅನ್ನು ತಪ್ಪಿಸಿಕೊಂಡರು. ಅಲ್ಲಿ ಅವರು ಒಂದು ಅರ್ಧಶತಕವನ್ನು ಗಳಿಸಿದ್ದಾರೆ.
ಮಂಗಳಗಿರಿಯ ಆಂಧ್ರ ಕ್ರಿಕೆಟ್ ಸಂಸ್ಥೆ (ಎಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದೆಹಲಿ ಮತ್ತು ಕರ್ನಾಟಕ ನಡುವಿನ 16 ವರ್ಷದೊಳಗಿನವರ ಪಂದ್ಯದಲ್ಲಿ ಕರ್ನಾಟಕ ತಂಡ 56.3 ಓವರ್ಗಳಲ್ಲಿ 144 ರನ್ಗಳಿಗೆ ಆಲೌಟ್ ಆಯಿತು.
5ನೇ ಕ್ರಮಾಂಕದಲ್ಲಿ ಬಂದಿದ್ದ ಅನ್ವಯ್ ದ್ರಾವಿಡ್ ಕೇವಲ ಎರಡು ಎಸೆತಗಳನ್ನು ಎದುರಿಸಿ ಖಾತೆ ತೆರೆಯದೇ ದೆಹಲಿಯ ಯಶಸ್ವಿ ಬೌಲರ್ ಆಯುಷ್ ಲಾಕ್ರಾ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಪ್ರತ್ಯುತ್ತರವಾಗಿ, ದೆಹಲಿ ತಂಡ ಸ್ಟಂಪ್ ವೇಳೆಗೆ 30 ಓವರ್ಗಳಲ್ಲಿ 1 ವಿಕೆಟ್ಗೆ 107 ರನ್ ಗಳಿಸಿತು. ಆರ್ಯವೀರ್ ಸೆಹ್ವಾಗ್ 98 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ ಅಜೇಯ 50 ರನ್ ಗಳಿಸಿದರು.
ವೇಗಿ ವೈಭವ್ ಸಿ ಅವರ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ ಬಾರಿಸಿದಾಗ ಆರ್ಯವೀರ್ ಅವರ ನಿಲುವು ಮತ್ತು ಶಾಟ್-ಮೇಕಿಂಗ್ ಅವರ ತಂದೆಯನ್ನು ಹೋಲುವಂತಿತ್ತು. ಆರ್ಯವೀರ್ನ ಎಲ್ಲಾ ಆರು ಬೌಂಡರಿಗಳು ಆಫ್-ಸೈಡ್ನಲ್ಲಿ ಬಂದಿವೆ.
ಇದು ಅಂಡರ್-16ರಲ್ಲಿ ಆರ್ಯವೀರ್ ಸೆಹ್ವಾಗ ಅವರ ಎರಡನೇ ಋತುವಾಗಿದೆ. ಆದರೂ ಅವರು ಹೆಚ್ಚಾಗಿ ಪ್ರಯಾಣಿಕ ತಂಡದ ಸದಸ್ಯರಾಗಿದ್ದರಿಂದ ಕಳೆದ ವರ್ಷ ಯಾವುದೇ ಪಂದ್ಯಗಳನ್ನು ಆಡಲಿಲ್ಲ. ಆದರೆ ಈ ಬಾರಿ ಆರ್ಯವೀರ್ ತಮ್ಮ ಆಟವನ್ನು ಚುರುಕುಗೊಳಿಸಿದ್ದಾರೆ ಮತ್ತು ಮೊದಲ ದಿನದಂದು 98 ಎಸೆತಗಳನ್ನು ಎದುರಿಸಿದ್ದೆ ಇದಕ್ಕೆ ಸಾಕ್ಷಿಯಾಗಿದೆ.
ಈ ಬಾಲಕರು ಭವಿಷ್ಯದಲ್ಲಿ ಸೀನಿಯರ್ ಕ್ರಿಕೆಟ್ಗೆ ಪರಿವರ್ತನೆ ಹೊಂದಿದಾಗ ಜೂನಿಯರ್ ಹಂತದ ಆಟಗಳ ಸ್ಕೋರ್ಗಳು ಅಂತಿಮವಾಗಿ ಹೆಚ್ಚಿನ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಆದರೆ ಆರ್ಯವೀರ್ ಮತ್ತು ಅನ್ವಯ್ ತಮ್ಮ ಹೆಸರಿನ ಕೊನೆಯಲ್ಲಿ ಹೊಂದಿರುವ ತಮ್ಮ ತಂದೆಯ ಹೆಸರಿನ ಭಾರವನ್ನು ಹೊರಲು ಯಾವುದೇ ಆಯ್ಕೆಯಿಲ್ಲ.