ಕೊಹ್ಲಿ, ರಾಹುಲ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ
ಶ್ರೀಲಮಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಏಷ್ಯಾ ಕಪ್ನಲ್ಲಿ ಭಗವಹಿಸುವ ಭಾರತ ತಂಡದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರನ್ನು ಸೇರಿಸಿಕೊಂಡಿರುವುದಕ್ಕೆ ಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಕೆಎಲ್ ರಾಹುಲ್ ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆಗೆ ಸಿಲುಕಿದ್ದರು. ಹೀಗಾಘಿ ಈ ಇಬ್ಬರಲ್ಲಿನ ಆತ್ಮ ವಿಶ್ವಾಸದ ಮಗ್ಗೆ ಲಂಕಾದ ದಿಗ್ಗಜ ಕ್ರಿಕೆಟಗ ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಹೆಚ್ಚು ಕ್ರಿಕೆಟ್ ಆಡಿಲ್ಲ
ಗಾಯದ ಸಮಸ್ಯೆಯ ಕಾರಣದಿಂದಾಗಿ ಕೆಎಲ್ ರಾಹುಲ್ ಇತ್ತೀಚೆಗೆ ಹೆಚ್ಚು ಕ್ರಿಕೆಟ್ ಆಡಿಲ್ಲ. ಅದರಲ್ಲೂ ಐಪಿಎಲ್ ಬಳಿಕ ಅವರು ಭಾರತ ತಂಡದಲ್ಲಿ ಯಾವುದೇ ಪಂದ್ಯವನ್ನು ಕೂಡ ಆಡಿಲ್ಲ. ಈ ವಿಚಾರವನ್ನು ಜಯವರ್ಧನೆ ಉಲ್ಲೇಖಿಸಿದ್ದಾರೆ. "ಐಪಿಎಲ್ ಬಳಿಕ ರಾಹುಲ್ ಕ್ರಿಕೆಟ್ ಆಡಿಲ್ಲ. ಏಷ್ಯಾ ಕಪ್ನಂಥಾ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡಬೇಕಾದರೆ ಪಂದ್ಯಗಳ ಅಭ್ಯಾಸ ಸಾಕಷ್ಟು ಬೇಕಾಗಿರುತ್ತದೆ. ಅವರು ಹೆಚ್ಚು ಆತ್ಮವಿಶ್ವಾಸವನ್ನು ಮರಳಿ ಪಡೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಅವರಿಗೆ ಹಾಗೂ ತಂಡಕ್ಕೆ ನೆರವಾಗಲಿದೆ" ಎಂದಿದ್ದಾರೆ ಮಹೇಲ ಜಯವರ್ಧನೆ.
ಕೊಹ್ಲಿ ಬಗ್ಗೆ ಜಯವರ್ಧನೆ ವಿಶ್ವಾಸ
ಇನ್ನು ಮುಂದುವರಿದು ಮಾತನಾಡಿದ ಮಹೇಲಾ ಜಯವರ್ಧನೆ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಲ್ಲಿರುವುದು ದುರದೃಷ್ಟ. ಆದರೆ ಆತನೋರ್ವ ಗುಣಮಟ್ಟದ ಆಟಗಾರನಾಗಿದ್ದಾರೆ. ಈ ಕಳಪೆ ಫಾರ್ಮ್ನಿಂದ ಹೊರಬರಲು ಅವರಲ್ಲಿ ಅಸ್ತ್ರಗಳಿವೆ. ಅವರು ಖಂಡಿತವಾಗಿಯೂ ಇದರಿಂದ ವಾಪಾಸಾಗಲಿದ್ದಾರೆ. ಕ್ಲಾಸ್ ಈಸ್ ಪರ್ಮನೆಂಟ್ ಫಾರ್ಮ್ ಈಸ್ ಟೆಂಪರರಿ" ಎಂದಿದ್ದಾರೆ ಮಹೇಲಾ ಜಯವರ್ಧನೆ.
ಭಾರತದ ಸ್ಕ್ವಾಡ್ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್