
ಗೌತಮ್ ಗಂಭೀರ್ ಬಗ್ಗೆ ನಾಲಿಗೆ ಹರಿಬಿಟ್ಟ ಅಫ್ರಿದಿ
"ನಾನು ಯಾವುದೇ ಭಾರತೀಯ ಆಟಗಾರರೊಂದಿಗೆ ಜಗಳವಾಡಿದಂತಿಲ್ಲ. ಹೌದು, ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಗೌತಮ್ ಗಂಭೀರ್ ಜೊತೆ ಕೆಲ ವಾಗ್ವಾದಗಳು ನಡೆಯುತ್ತಿರುತ್ತವೆ. ಮತ್ತು ಗೌತಮ್ ಭಾರತೀಯ ತಂಡದಲ್ಲಿ ಯಾರೂ ಇಷ್ಟಪಡದ ಒಂದು ರೀತಿಯ ಪಾತ್ರ ಎಂದು ನಾನು ಭಾವಿಸುತ್ತೇನೆ" ಎಂದು ಮಾತನಾಡಿರುವ ಶಾಹಿದ್ ಅಫ್ರಿದಿ ಗಂಭೀರ್ ಅವರನ್ನು ಕಂಡರೆ ಟೀಮ್ ಇಂಡಿಯಾದಲ್ಲಿಯೇ ಯಾರಿಗೂ ಇಷ್ಟವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈದಾನದಲ್ಲಿ ಕಿತ್ತಾಡಿದ್ದ ಗಂಭೀರ್-ಅಫ್ರಿದಿ
ಶಾಹಿದ್ ಅಫ್ರಿದಿ ಹಾಗೂ ಗೌತಮ್ ಗಂಭೀರ್ ಇಬ್ಬರೂ ಸಹ ಹಾವು ಮುಂಗುಸಿ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಗಳವಾಡಿದ್ದ ಹಲವು ಉದಾಹರಣೆಗಳಿವೆ. ಇನ್ನು ಈ ಇಬ್ಬರೂ ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಮೈದಾನದಲ್ಲಿಯೂ ಸಹ ಪರಸ್ಪರ ಜಗಳವಾಡಿದ್ದರು. 2007ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸವನ್ನು ಕೈಗೊಂಡು ಏಕದಿನ ಸರಣಿಯನ್ನು ಆಡುತ್ತಿದ್ದಾಗ ಕಾನ್ಪುರ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ವೇಳೆ ಗೌತಮ್ ಗಂಭೀರ್ ಹಾಗೂ ಶಾಹಿದ್ ಅಫ್ರಿದಿ ನಡುವೆ ಮೈದಾನದಲ್ಲೇ ವಾಗ್ವಾದ ನಡೆದಿತ್ತು. ಅಂದು ಶುರುವಾದ ಈ ಇಬ್ಬರ ನಡುವಿನ ಕಿತ್ತಾಟ ಇಂದಿಗೂ ಸಹ ಮುಂದುವರೆಯುತ್ತಲೇ ಇದೆ.

ಅಫ್ರಿದಿ ಹೇಳಿಕೆಯನ್ನು ಒಪ್ಪದ ಭಾರತೀಯರು
ಇನ್ನು ಅಫ್ರಿದಿ ಅವರ ಈ ವಿವಾದಾತ್ಮಕ ಹೇಳಿಕೆಗೆ ಸ್ಪಂದಿಸಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಗೌತಮ್ ಗಂಭೀರ್ ಪರ ಬ್ಯಾಟ್ ಬೀಸಿದ್ದಾರೆ. ಗೌತಮ್ ಗಂಭೀರ್ ವಿಶ್ವಕಪ್ ಹೀರೊ, ಅವರ ಮೇಲೆ ಟೀಮ್ ಇಂಡಿಯಾದ ಪರ ಆಡಿರುವ ಎಲ್ಲಾ ಆಟಗಾರರಿಗೂ ಗೌರವವಿದೆ, ನೀವು ಹೇಳಿದ ರೀತಿ ಅವರನ್ನು ಕಂಡರೆ ಯಾರಿಗೂ ಇಷ್ಟವಿಲ್ಲದಿದ್ದರೆ ಅಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ಗಂಭೀರ್ ಅವರಿಗೆ ಲಭಿಸುತ್ತಿರಲಿಲ್ಲ, ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುತ್ತಿರಲಿಲ್ಲ ಹಾಗೂ ಐಪಿಎಲ್ನಲ್ಲಿ ನಾಯಕನಾಗಲೂ ಸಹ ಆಗುತ್ತಿರಲಿಲ್ಲ ಎಂದು ಅಫ್ರಿದಿಗೆ ಭಾರತ ಕ್ರಿಕೆಟ್ ಪ್ರೇಮಿಗಳು ತಿರುಗೇಟು ನೀಡಿದ್ದಾರೆ.


Click it and Unblock the Notifications
