ಮೀರ್ ಪುರ್ (ಬಾಂಗ್ಲಾದೇಶ), ಮಾರ್ಚ್ 06: ಮಳೆಯಿಂದ ಅಡ್ಡಿಯುಂಟಾಗಿ 15 ಓವರ್ ಗಳಿಗೆ ಸೀಮಿತವಾದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಏಷ್ಯಾಕಪ್ ಗೆದ್ದುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಬಾಂಗ್ಲಾದೇಶಕ್ಕೆ ಅವಕಾಶ ಸಿಕ್ಕಿತು. ಪಂದ್ಯ ಗೆಲ್ಲಲು ಟೀಂ ಇಂಡಿಯಾಕ್ಕೆ 121 ರನ್ ಟಾರ್ಗೆಟ್ ನೀಡಲಾಗಿತ್ತು. ಭಾರತ ಆರಂಭಿಕ ಆಘಾತ ಅನುಭವಿಸಿ, ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡಿತು.
ಬಾಂಗ್ಲಾ ಇನ್ನಿಂಗ್ಸ್ : ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 15 ಓವರ್ ಗಳಲ್ಲಿ 120/5 ಸ್ಕೋರ್ ಮಾಡಿತು.
* ತಮೀಮ್ ಇಕ್ಬಾಲ್ 13, ಸೌಮ್ಯ ಸರ್ಕಾರ್ 14 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.
* ಸಬೀರ್ ರಹ್ಮಾನ್ 29 ಎಸೆತಗಳಲ್ಲಿ 32 ರನ್, ಶಕೀಲ್ ಅಲ್ ಹಸನ್ 16 ಎಸೆತಗಳಲ್ಲಿ 21 ರನ್ ಗಳಿಸಿ ರನ್ ಗಳಿಕೆ ಹೆಚ್ಚಿಸಿದರು.
* ಕೊನೆಯಲ್ಲಿ ಮೊಹಮುದುಲ್ಲಾ 13 ಎಸೆತಗಳಲ್ಲಿ 33 ರನ್ ಚೆಚ್ಚಿ ಎಲ್ಲರನ್ನು ರಂಜಿಸಿದರು.
* ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಬಿಟ್ಟರೆ ಅಶ್ವಿನ್, ಬೂಮ್ರಾ, ನೆಹ್ರಾ, ಜಡೇಜ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪಂದ್ಯವನ್ನು 15 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ.
ಆಟದ ನಿಯಮ ಬದಲಾವಣೆ:
* ತಲಾ 15 ಓವರ್ ಗಳ ಪಂದ್ಯ
* 5 ಓವರ್ ಗಳ ಪವರ್ ಪ್ಲೇ
* 5 ಬೌಲರ್ ಗಳು ಗರಿಷ್ಠ 3 ಓವರ್ ಎಸೆಯಬಹುದು.
* ಇನ್ನಿಂಗ್ಸ್ ಬ್ರೇಕ್ 10 ನಿಮಿಷಕ್ಕೆ ಸೀಮಿತ.
ಎರಡು ಗಂಟೆ ಪಂದ್ಯಕ್ಕೆ ಅಡ್ಡಿ: ಷೇರ್ ಎ ಬಾಂಗ್ಲಾ ಮೈದಾನ ಮಳೆಯಿಂದ ಒದ್ದೆ ಮುದ್ದೆಯಾಗಿದ್ದು, ಭಾರತ ಹಾಗೂ ಬಾಂಗ್ಲಾದೇಶದ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತ್ತು. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಪಂದ್ಯ ವಾಷ್ ಔಟ್ ಆದರೆ, ಕಪ್ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. [ಏಷ್ಯಾಕಪ್ ಗ್ಯಾಲರಿ]
ಏಷ್ಯಾ ಟಿ20 ಫೈನಲ್ ಪಂದ್ಯಕ್ಕೆ ರಿಸರ್ವ್ ಡೇ ಎಂದು ಇರಿಸಿಲ್ಲ. ಹೀಗಾಗಿ ಇಂದು ಪಂದ್ಯ ನಡೆಯದಿದ್ದರೆ ಎಂಎಸ್ ಧೋನಿ ಹಾಗೂ ಮುರ್ತಾಜಾ ಇಬ್ಬರು ಏಷ್ಯಾಕಪ್ ಹಿಡಿದುಕೊಂಡು ಸ್ಮೈಲ್ ಮಾಡಬೇಕಾಗುತ್ತಿತ್ತು.
ಪಿಚ್ ಅಲ್ಲದೆ ಕ್ರೀಡಾಂಗಣದ ಅನೇಕ ಭಾಗಗಳನ್ನು ಕವರ್ಗಳಿಂದ ಮುಚ್ಚಲಾಗಿದ್ದು, ಮಳೆಯಿಂದಾಗಿ ಫ್ಲಡ್ಲೈಟ್ಗಳು ಸಹ ಕೈಕೊಟ್ಟಿವೆ. ಮಳೆ ಏನಾದರೂ ಸಹಕರಿಸಿದರೆ ಭಾರತೀಯ ಕಾಲ ಮಾನ ಪ್ರಕಾರ 10.16ರ ಸುಮಾರಿಗೆ ಪಿಚ್ ಪರೀಕ್ಷೆ ನಡೆಸಲಾಗುತ್ತದೆ. ತಲಾ 5 ಓವರ್ ಗಳ ಪಂದ್ಯವನ್ನು ನಡೆಸಲಾಗುತ್ತದೆ ಎಂದು ಸದ್ಯಕ್ಕೆ ಮಾಹಿತಿ ಸಿಕ್ಕಿದೆ.