ICC ODI ವಿಶ್ವಕಪ್ 2023 ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿದೆ. ಎಲ್ಲ ತಂಡಗಳು ವಿಶ್ವಕಪ್ ಗಾಗಿ ಭರ್ಜರಿ ತಾಲೀಮು ನಡೆಸಿವೆ. ಮೆಗಾ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಎಲ್ಲಾ ತಂಡಗಳು ಭಾರತಕ್ಕೆ ಬಂದು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ.
ಆತಿಥೇಯ ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ವಿಶ್ವಕಪ್ ಮುನ್ನ ಕೊನೆಯ ಕ್ಷಣದಲ್ಲಿ ಟೀಂ ಇಂಡಿಯಾ ತನ್ನ ತಂಡದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.

ಗಾಯಗೊಂಡಿರುವ ಅಕ್ಸರ್ ಪಟೇಲ್ ಬದಲಿಗೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಅಶ್ವಿನ್ ಹೆಸರು ಕೇಳಿದ ನಂತರ ಕಾಂಗರೂ ತಂಡಕ್ಕೆ ನಡುಕ ಶುರುವಾಗಿದೆ. ಈ ಪರಿಸ್ಥಿತಿಯಲ್ಲಿ, ಅವರು ವಿಶ್ವಕಪ್ ಮೊದಲು ನೆಟ್ ಬೌಲರ್ ಆಗಿ ನಕಲಿ ಅಶ್ವಿನ್ ಅವರನ್ನು ಇರಿಸಿಕೊಳ್ಳಲು ನಿರ್ಧರಿಸಿತ್ತು.
ಬರೋಡಾದ ಬಲಗೈ ಆಫ್ ಸ್ಪಿನ್ನರ್ ಮಹೇಶ್ ಪಿಥಿಯಾ ಅವರ ಬೌಲಿಂಗ್ ಶೈಲಿ ಭಾರತದ ತಂಡದ ಲೆಜೆಂಡರಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಂತೆಯೇ ಇದೆ. ಅದಕ್ಕಾಗಿಯೇ ಅವರನ್ನು ಡೂಪ್ಲಿಕೇಟ್ ಅಶ್ವಿನ್ ಎಂದೂ ಕರೆಯುತ್ತಾರೆ. ವರದಿಯ ಪ್ರಕಾರ, ಅಶ್ವಿನ್ ಭಾರತ ತಂಡಕ್ಕೆ ಸೇರಿದ ತಕ್ಷಣ ಮಹೇಶ್ ಪಿಥಿಯಾ ಅವರನ್ನು ಸಂಪರ್ಕಿಸಲು ಆಸ್ಟ್ರೇಲಿಯಾ ಪ್ರಯತ್ನಿಸಿತ್ತು ಮತ್ತು ಅವರನ್ನು ನೆಟ್ ಬೌಲರ್ ಆಗಿ ತಮ್ಮ ಶಿಬಿರಕ್ಕೆ ಆಹ್ವಾನಿಸಿತ್ತು.
ಪಿಥಿಯಾ ಅಭ್ಯಾಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಆತನ ಸ್ನೇಹಿತ ಪ್ರಿತೇಶ್ ಜೋಶಿಯಿಂದ ಕರೆ ಬಂತು. ಹಾಲೀ ವಿಶ್ವಕಪ್ ನಲ್ಲಿ ಸೈಡ್ ಆರ್ಮರ್ ಆಗಿ ಆಸ್ಟ್ರೇಲಿಯಾದೊಂದಿಗೆ ಕೆಲಸ ಮಾಡುವಿರಾ ಎಂದು ಕೇಳಿದ್ದಾರೆ ಮತ್ತು ಅಕ್ಟೋಬರ್ 4 ರಂದು ಚೆನ್ನೈ ತಲುಪಲು ಹೇಳಿದ್ದಾರೆ. ಆದರೆ, ಮಹೇಶ್ ಪಿಥಿಯಾ ನೀಡಿದ ಈ ದೊಡ್ಡ ಆಫರ್ ಅನ್ನು ಪಿಥಿಯಾ ಒಪ್ಪಲಿಲ್ಲ. ಬರೋಡಾ ಪರ ಆಡುವುದು ಉತ್ತಮ ಎಂದು ಅವರು ಭಾವಿಸಿದ್ದಾರೆ.
"ಕಾಂಗರೂ ಪಡೆಯಿಂದ ನನಗೆ ಕರೆ ಬಂದಿದ್ದು ಖಂಡಿತವಾಗಿಯೂ ಖುಷಿ ನೀಡಿದೆ. ಆದರೆ ಮತ್ತೊಮ್ಮೆ, ಮುಂದಿನ ತಿಂಗಳು ಪ್ರಾರಂಭವಾಗುವ ದೇಶೀಯ ಋತುವಿನಲ್ಲಿ ನಾನು ಬರೋಡಾದ ಭಾಗವಾಗಿದ್ದೇನೆ" ಎಂದು ಪಿಥಿಯಾ ತಿಳಿಸಿದ್ದಾರೆ. ಈ ಬಗ್ಗೆ ಆಲೋಚಿಸಿ ತಮ್ಮ ತರಬೇತುದಾರರ ಬಳಿ ಮಾತನಾಡಿ ಈ ಬಾರಿ ಕಾಂಗರೋ ಶಿಬಿರದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ, ಆಸ್ಟ್ರೇಲಿಯಾ ಕೂಡ ಮಹೇಶ್ ಅವರನ್ನು ಸಂಪರ್ಕಿಸಿ ಅವರನ್ನು ನೆಟ್ ಬೌಲರ್ ಆಗಿ ನೇಮಿಸಿಕೊಂಡಿತ್ತು. ಆದರೆ ಈ ಬಾರಿ ಭಾರತೀಯ ತನ್ನ ಕನಸುಗಳನ್ನು ಹಾಳುಮಾಡಿಕೊಂಡಿದ್ದಾನೆ.