For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಜಾಧವ್ ಬದಲು ಅಕ್ಷರ್ ಅಥವಾ ರಾಯುಡುಗೆ ಅವಕಾಶ?!

ಬದಲಾಗುತ್ತಾ ಅಕ್ಷರ್, ಅಂಬಾಟಿ ಅದೃಷ್ಟ..! | Oneindia Kannada
Axar Patel, Ambati Rayudu possible replacements for Kedar Jadhav if needed

ನವದೆಹಲಿ, ಮೇ 15: ಈಗಾಗಲೇ ಪ್ರಕಟಗೊಂಡಿರುವ 15 ಜನರನ್ನೊಳಗೊಂಡ ಭಾರತ ವಿಶ್ವಕಪ್ ತಂಡದಲ್ಲಿರುವ ಕೇದಾರ್ ಜಾಧವ್ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಅಕ್ಷರ್ ಪಟೇಲ್ ಅಥವಾ ಅಂಬಾಟಿ ರಾಯುಡು ಅವರನ್ನು ಕರೆತರಲು ಆಯ್ಕೆ ಸಮಿತಿ ಯೋಚಿಸುತ್ತಿದೆಯೆಂದು ವರದಿಯೊಂದು ಹೇಳುತ್ತಿದೆ.

ಆಲ್ ರೌಂಡರ್ ಕೇದಾರ್ ಜಾಧವ್ ಗಾಯಕ್ಕೊಳಗಾಗಿರುವುದು ಬಿಸಿಸಿಐಗೆ ಸಣ್ಣ ಮಟ್ಟಿನ ತಲೆ ನೋವು ತಂದಿರುವುದು ನಿಜ. ಜಾಧವ್ ಚೇತರಿಸಿಕೊಳ್ಳುತ್ತಿರುವತ್ತ ಬಿಸಿಸಿಐ ಕಣ್ಣಿಟ್ಟಿದೆಯಲ್ಲದೆ, ಒಂದು ವೇಳೆ ಜಾಧವ್ ಗಾಯ ಚೇತರಿಕೆ ಕಾಣದಿದ್ದರೆ ಅವರ ಬದಲಿಗೆ ಅಕ್ಷರ್ ಇಲ್ಲವೆ ರಾಯುಡು ಕರೆತರಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ ಯಾವುದಕ್ಕೂ ಜಾಧವ್ ಸುಧಾರಣೆ ಖಾತ್ರಿ ಪಡಿಸಿಕೊಳ್ಳಲು ಬಿಸಿಸಿಐ ಇನ್ನೊಂದಿಷ್ಟು ದಿನ ಕಾಯಲಿದೆ ಎಂದು ಹೇಳಲಾಗುತ್ತಿದೆ.

'ಜಾಧವ್ ಸುಧಾರಣೆ ಸ್ಥಿತಿ ತಿಳಿಸುವುದನ್ನು ಬಿಸಿಸಿಐ ಹಿಡಿದಿಟ್ಟುಕೊಂಡಿದೆ. ಆದರೆ ಜಾಧವ್ ಫಿಟ್ನೆಸ್ ಬಗ್ಗೆ ಬಿಸಿಸಿಐ ತೀವ್ರ ನಿಗಾ ವಹಿಸುತ್ತಿದೆ. ಜಾಧವ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಬಗ್ಗೆ ಬಿಸಿಸಿಐ ಈಗಲೇ ಹೇಳಲಾರದು. ಆದರೆ ಮುಂದಿನ ವಾರ ಈ ಬಗ್ಗೆ ಮಾಹಿತಿ ನೀಡಲಿದೆ. ಅಂದರೆ ಮೇ 22ರಂದು ಟೀಮ್ ಇಂಡಿಯಾ ಇಲ್ಲಿಂದ ಹೊರಡುವಷ್ಟರಲ್ಲಿ ಮಾಹಿತಿ ಲಭ್ಯವಾಗಲಿದೆ' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಐಸಿಸಿ ನಿಯಮದ ಪ್ರಕಾರ ಎಲ್ಲಾ ತಂಡಗಳಿಗೂ ಮೇ 23ರರೊಳಗೆ ತಂಡದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಕೊನೆಯ ಅವಕಾಶವಿದೆ. ಹೀಗಾಗಿ ಜಾಧವ್ ಗಾಯ ಸುಧಾರಣೆ ಕಾಣದಿದ್ದರೆ, ಆ ಜಾಗಕ್ಕೆ ಅಕ್ಷರ್ ಪಟೇಲ್ ಅಥವಾ ಅಂಬಾಟಿ ರಾಯುಡು ಬರಲೂ ಬಹುದು.

Story first published: Thursday, May 16, 2019, 16:26 [IST]
Other articles published on May 16, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+