ಭಾರತದ ಹಿರಿಯರ ತಂಡಕ್ಕೆ ತ್ವರಿತವಾಗಿ ಪರಿವರ್ತನೆಗೊಳ್ಳುವ ಬಹು ಕೌಶಲ್ಯ ಹೊಂದಿರುವ ಯುವ ಆಟಗಾರರನ್ನು ಗುರುತಿಸಲು ಬಿಸಿಸಿಐ ಉತ್ಸುಕವಾದಂತಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ) ಯಲ್ಲಿ ಸುಮಾರು ಮೂರು ವಾರಗಳ ಶಿಬಿರಕ್ಕಾಗಿ 20 ಸಂಭಾವ್ಯ ಆಲ್ರೌಂಡರ್ಗಳಿಗೆ ಕರೆ ನೀಡಿದೆ.
ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಪದಾರ್ಪಣೆ ಮಾಡಿದರು. ಆಗಸ್ಟ್ನಲ್ಲಿ ಪ್ರಾರಂಭವಾಗುವ ಎನ್ಸಿಎ ಶಿಬಿರಕ್ಕೆ ಕರೆಯಲಾಗಿದೆ.

"ಈ ವರ್ಷದ ಕೊನೆಯಲ್ಲಿ ಉದಯೋನ್ಮುಖ ಏಷ್ಯಾ ಕಪ್ (ಅಂಡರ್-23) ಸಹ ಇದೆ ಮತ್ತು ಬಿಸಿಸಿಐ ಸಂಭಾವ್ಯ ಯುವಕರನ್ನು ನೋಡುತ್ತಿದೆ. ಆಲ್ರೌಂಡರ್ಸ್ ಶಿಬಿರವು ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಕಲ್ಪನೆಯಾಗಿದ್ದು, ನಾವು ಹೆಚ್ಚಿನ ಕೌಶಲ್ಯತೆಯನ್ನು ಅಭಿವೃದ್ಧಿಪಡಿಸುವುದನ್ನು ಎದುರು ನೋಡುತ್ತೇವೆ," ಎಂದು ಬಿಸಿಸಿಐನ ಅನಾಮಧೇಯ ಮೂಲಗಳು ತಿಳಿಸಿವೆ.
"ಎನ್ಸಿಎ ಕ್ಯಾಂಪ್ಗೆ ಕರೆ ನೀಡಲ್ಪಟ್ಟ ಎಲ್ಲರೂ ಶುದ್ಧ ಆಲ್ರೌಂಡರ್ಗಳಲ್ಲ. ಕೆಲವರು ಬ್ಯಾಟಿಂಗ್ ಆಲ್ರೌಂಡರ್ಗಳು ಮತ್ತು ಕೆಲವರು ಬೌಲಿಂಗ್ ಆಲ್ರೌಂಡರ್ಗಳಾಗಿದ್ದಾರೆ. ಸಂಭಾವ್ಯ ಆಟಗಾರರ ಮೇಲೆ ಗಮನ ಹರಿಸುವುದು ಮತ್ತು ಮುಂದಿನ ದರ್ಜೆಗೆ ಪರಿವರ್ತನೆಗಾಗಿ ಅವರ ಕೌಶಲ್ಯಗಳನ್ನು ಅಪ್ಗ್ರೇಡ್ ಮಾಡಲು ಅವರಿಗೆ ಸಹಾಯ ಮಾಡುವುದು," ಎಂದು ತಿಳಿದುಬಂದಿದೆ.
20 ಆಟಗಾರರ ಪೈಕಿ ಸೌರಾಷ್ಟ್ರ ಎಡಗೈ ವೇಗಿ ಚೇತನ್ ಸಕರಿಯಾ ಕೂಡ ಸೇರಿದ್ದಾರೆ. ಚೇತನ್ ಈಗಾಗಲೇ 2021ರಲ್ಲಿ ಭಾರತ ತಂಡಕ್ಕಾಗಿ ಆಡಿದ್ದಾರೆ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಐಪಿಎಲ್ನಲ್ಲಿ ಆಡುತ್ತಿದ್ದಾರೆ.

ಇನ್ನು ಪಂಜಾಬ್ನ ಎಡಗೈ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಇದ್ದು, ಸನ್ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಕೆಲವು ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಬಿಗಿಯಾದ ಎಡಗೈ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಗೋವಾದ ಆಫ್ ಸ್ಪಿನ್ನರ್ ಆಲ್ರೌಂಡರ್ ಮೋಹಿತ್ ರೆಡ್ಕರ್ ಅವರಿಗೂ ಸಮನ್ಸ್ ನೀಡಲಾಗಿದ್ದು, ರಾಜಸ್ಥಾನದ ಮಾನವ್ ಸುತಾರ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇವರಲ್ಲದೆ ದೆಹಲಿಯ ಹರ್ಸಿತ್ ರಾಣಾ ಕೂಡ ಶಿಬಿರಕ್ಕೆ ಸೇರಲಿದ್ದಾರೆ. ಗಮನಾರ್ಹವಾಗಿ, ಹರ್ಸಿತ್ ರಾಣಾ ಅವರನ್ನು ಈ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ಇಂಗ್ಲೆಂಡ್ಗೆ ಬಂದ ಹಿರಿಯ ಭಾರತೀಯ ತಂಡಕ್ಕೆ ನೆಟ್ ಬೌಲರ್ ಆಗಿದ್ದರು.
ಗಮನಾರ್ಹವಾಗಿ, ಅರ್ಜುನ್ ತೆಂಡೂಲ್ಕರ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ಪರ ಮೂರು ಪಂದ್ಯಗಳಲ್ಲಿ ಆಡಿದರು. ದೇಶೀಯ ಸರ್ಕ್ಯೂಟ್ನಲ್ಲಿ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅರ್ಜುನ್ ತೆಂಡೂಲ್ಕರ್ ಏಳು ಪ್ರಥಮ ದರ್ಜೆ ಪಂದ್ಯಗಳಿಂದ 12 ವಿಕೆಟ್ಗಳನ್ನು ಪಡೆದಿದ್ದಾರೆ.