ಏನಿದು ವಿವಾದ: ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿಯ ಈ ಸಮರ್ಥನೆ ಸರಿಯೇ?

ಬಿಸಿಸಿಐ ಅಧ್ಯಕ್ಷರಾಗಿ ಒಂದು ತಂಡವನ್ನು ಸಮರ್ಥಿಸಿಕೊಳ್ಳುವುದು ಸರಿಯೇ, ಇದು ಸ್ವಹಿತಾಶಕ್ತಿ ಅಲ್ಲವೇ ಎನ್ನುವ ಪ್ರಶ್ನೆಗೆ ಸೌರವ್ ಗಂಗೂಲಿ ಉತ್ತರಿಸುತ್ತಾ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
"ಯುವ ಆಟಗಾರರಿಗೆ ಸಲಹೆ ಕೊಡುವುದರಲ್ಲಿ ತಪ್ಪೇನಿದೆ. ನಾನು ಮಾರ್ಗದರ್ಶನ ನೀಡಲು ಮುಕ್ತನಾಗಿದ್ದೇನೆ"ಎಂದು ಗಂಗೂಲಿ ಹೇಳಿದ್ದಾರೆ. "ತಂಡದಲ್ಲಿ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರಂಥವರನ್ನು ಪಡೆದಿರುವುದು ನಮ್ಮ ಅದೃಷ್ಟ"ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಹೇಳಿದ್ದರು.
ಶ್ರೇಯಸ್ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಸೌರವ್ ಗಂಗೂಲಿ, "ನಾನು ಐನೂರಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. ನನ್ನ ಅನುಭವಕ್ಕೆ ತಕ್ಕಂತೆ ಸಲಹೆ ನೀಡುತ್ತೇನೆ"ಎಂದು ಹೇಳಿದ್ದಾರೆ.
"ಈಗ ನಾನು ಬಿಸಿಸಿಐನ ಅಧ್ಯಕ್ಷನಾಗಿರಬಹುದು. ಕಳೆದ ಬಾರಿ ಶ್ರೇಯಸ್ ಐಯ್ಯರ್ ಗೆ ಸಲಹೆ ನೀಡಿದ್ದೆ. ಅದನ್ನು ಅವರು ಮೆರೆತಿಲ್ಲ. ನನ್ನ ಅನುಭವವನ್ನು ಶ್ರೇಯಸ್ ಅಥವಾ ಕೊಹ್ಲಿಗೂ ನೀಡುವುದರಲ್ಲಿ ತಪ್ಪೇನಿದೆ'ಎಂದು ಗಂಗೂಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಐಪಿಎಲ್ ದ್ವಿತೀಯ ಪಂದ್ಯದ ನಂತರ, ಪತ್ರಿಕಾಗೋಷ್ಠಿಯಲ್ಲಿ ಶ್ರೇಯಸ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. "'ತಂಡದಲ್ಲಿ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರಂಥವರನ್ನು ಪಡೆದಿರುವುದು ನಮ್ಮ ಅದೃಷ್ಟ. ಗಂಗೂಲಿ ಕೂಡ ನಮಗೆ ನೆರವು ನೀಡುತ್ತಿದ್ದಾರೆ"ಎಂದು ಶ್ರೇಯಸ್ ಹೇಳಿದ್ದರು.
ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ಅವರು ಯಾವುದೇ ತಂಡಕ್ಕೆ ವೈಯಕ್ತಿಕವಾಗಿ ಬೆಂಬಲಿಸುವಂತಿಲ್ಲ. ಮಾರ್ಗದರ್ಶನ ನೀಡುವಂತಿಲ್ಲ. ಯಾಕೆಂದರೆ ಬಿಸಿಸಿಐಯಲ್ಲಿದ್ದು ಬೇರೆ ಒಂದು ತಂಡಕ್ಕ ಬೆಂಬಲ ನೀಡಿದರೆ ಅಂದು ಹಿತಾಸಕ್ತಿ ಸಂಘರ್ಷವಾಗುತ್ತದೆ ಎಂಬ ಮಾತುಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications