
500ನೇ ಪಂದ್ಯದ ಟಾಸ್ ಗೆ ಬೆಳ್ಳಿ ನಾಣ್ಯ
ಸೆಪ್ಟಂಬರ್ 22 ಕಾನ್ಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 500ನೇ ಟೆಸ್ಟ್ ಪಂದ್ಯಕ್ಕೆ ಟಾಸ್ ಮಾಡಲು ಬೆಳ್ಳಿಯಿಂದ ತಯಾರಿಸಿರುವ ವಿಶೇಷ ನಾಣ್ಯ ಬಳಸಲಲಾಗುತ್ತದೆ.

ಎರಡು ಸಾವಿರ ಶಾಲಾ ಮಕ್ಕಳಿಗೆ ಪಂದ್ಯ ವೀಕ್ಷಿಸಲು ಅವಕಾಶ
500ನೇ ಟೆಸ್ಟ್ ಎಂಬ ಹೆಸರು ಇರುವ ಟೀಶರ್ಟ್ ಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಪಂದ್ಯದ ಪ್ರತಿದಿನವೂ ಎರಡು ಸಾವಿರ ಶಾಲಾ ಮಕ್ಕಳಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ. ಅದರಲ್ಲಿ ದೈಹಿಕ ಮತ್ತು ಮಾನಸಿಕವಾಗಿ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹಾಜರಿರುವರು ಎಂದು ಶುಕ್ಲಾ ತಿಳಿಸಿದರು.

ಮಾಜಿ ದಿಗ್ಗಜ ನಾಯಕರಿಗೆ ಭೋಜನಕೂಟ
ಈ 500ನೇ ಪಂದ್ಯವನ್ನು ಅವಿಸ್ಮರಣೆಗೊಳಿಸಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದೇ ವೇಳೆ ಭಾರತ ಪರವಾಗಿ ಆಡಿ ತಮ್ಮ ಅಪ್ರತಿಮ ಆಟದೊಂದಿಗೆ ಹಲವು ಸಾಧನೆಗಳನ್ನು ಮಾಡಿದ ಟೀಂ ಇಂಡಿಯಾದ ಮಾಜಿ ದಿಗ್ಗಜ ನಾಯಕರಿಗೆ ಭೋಜನಕೂಟವನ್ನೂ ಆಯೋಜಿಸಲಾಗಿದೆ. ಆ ವೇಳೆ ನ್ಯೂಜಿಲೆಂಡ್ ತಂಡವೂ ಹಾಜರಿರಲಿದೆ ಎಂದು ಶುಕ್ಲಾ ತಿಳಿಸಿದರು.

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ಸ್ ಭಾವಗಹಿಸುವರು
ಮಾಜಿ ನಾಯಕರಾದ ನಾರಿ ಕಂಟ್ರ್ಯಾಕ್ಟರ್, ಚಂದು ಬೋರ್ಡೆ, ದಿಲಿಪ್ ವೆಂಗಸರ್ಕಾರ್, ಕಪಿಲ್ ದೇವ್, ರವಿಶಾಸ್ತ್ರಿ, ಸುನಿಲ್ ಗಾವಸ್ಕರ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಕೆ. ಶ್ರೀಕಾಂತ್ ಅವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ.

‘ಎ’ ತಂಡದ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್
ಭಾರತ ತಂಡದ ಮುಖ್ಯ ಕೋಚ್ ಆಗಿರುವ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಜರಾಗಲಿದ್ದಾರೆ. ಇನ್ನು ‘ಎ' ತಂಡದ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿಂದ ಮರಳುವ ಸಾಧ್ಯತೆಗಳು ಇವೆ.

500ನೇ ಟೆಸ್ಟ್ ಗೆ ಗ್ರೀನ್ ಪಾರ್ಕ್ ಸಾಕ್ಷಿ
ಸೆ.22 ರಂದು ಭಾರತದ ಪಾಲಿಗೆ ಹೆಮ್ಮೆಯ ದಿನವಾಗಲಿದ್ದು, ಅಂದು ಜರುಗಲಿರವ ಮೇಲೆ ತಿಳಿಸಿರುವಂತೆ ಎಲ್ಲಾ ಕಾರ್ಯಕ್ರಮಗಳಿಗೆ ಕಾನ್ಪುರ ಗ್ರೀನ್ ಪಾರ್ಕ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.


Click it and Unblock the Notifications











